![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jun 13, 2021, 6:51 PM IST
ಯಳಂದೂರು: ತೈಲ ಬೆಲೆ ಏರಿಕೆ ಖಂಡಿಸಿ ಪಟ್ಟಣದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ಕೆ.ಕೆ.ರಸ್ತೆಯಲ್ಲಿರುವ ಹೇಮಂತ್ ಪ್ರಣತಿ ಪೆಟ್ರೋಲ್ಬಂಕ್ ಬಳಿ ಪ್ರತಿಭಟಿಸಿದರು.
ಈ ವೇಳೆ ಮಾಜಿಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ವಿಶ್ವದಲ್ಲೇ ಅತ್ಯಂತ ದುಬಾರಿ ತೆರಿಗೆಯನ್ನು ತೈಲೋತ್ಪನ್ನಗಳಿಗೆ ಭಾರತ ಹೇರಿದ್ದು, ಇದು ಅವೈಜ್ಞಾನಿಕ.ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಿದ್ದರೂನಮ್ಮಲ್ಲಿ ದುಬಾರಿ ತೆರಿಗೆ ವಿಧಿಸಿದ್ದಾರೆ. ಬೆಲೆಇಳಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದುಎಂದು ಎಚ್ಚರಿಸಿದರು.
ಮಾಜಿ ಶಾಸಕ ಎಸ್. ಬಾಲರಾಜು ಮಾತನಾಡಿ,ದೇಶ ಹಾಗೂ ರಾಜ್ಯದಲ್ಲಿ ಕರ್ಪೊàರೇಟರ್ ಆಡಳಿತವ್ಯವಸ್ಥೆ ಇದೆ ಎಂದರು. ಪ್ರತಿಭಟನೆಯಲ್ಲಿ ಜಿಪಂಮಾಜಿ ಸದಸ್ಯ ಜೆ.ಯೋಗೇಶ್, ಬ್ಲಾಕ್ ಕಾಂಗ್ರೆಸ್ಅಧ್ಯಕ್ಷ ಎಚ್.ವಿ. ಚಂದ್ರು, ಪಪಂ ಸದಸ್ಯರಾದಮಹೇಶ್, ವೈ.ಜಿ.ರಂಗನಾಥ, ತಾಪಂ ಮಾಜಿ ಸದಸ್ಯನಿರಂಜನ್, ವಡಗೆರೆದಾಸ್, ಜಿಲ್ಲಾ ಯುವ ಕಾಂಗ್ರೆಸ್ಅಧ್ಯಕ್ಷ ಅಬ್ದುಲ್ ಅಜೀಜ್, ಚೇತನ್, ನಿಂಗರಾಜು,ಅಸ್ಲಂಪಾಷ, ಕಿರಣ್ ಮತ್ತಿತರರು ಹಾಜರಿದ್ದರು
You seem to have an Ad Blocker on.
To continue reading, please turn it off or whitelist Udayavani.