ಅಸ್ಪೃಶ್ಯತೆ ನಿವಾರಣೆಗಾಗಿ ಜಾಗೃತಿ ಜಾಥಾ
Team Udayavani, Jan 1, 2023, 12:31 PM IST
ಚಾಮರಾಜನಗರ: ಮೈಸೂರಿನ ಬಿಡುಗಡೆ ಸಂಘಟನೆ, ನಗರದ ಸಮಾನಾಸಕ್ತರ ಬಳಗ ಹಾಗೂ ಪ್ರಗತಿಪರ ಚಿಂತಕರು ನಗರದಲ್ಲಿ ಅಸ್ಪೃಶ್ಯತಾ ನಿವಾರಣೆಗಾಗಿ ನಗರದಲ್ಲಿ ಜಾಗೃತಿ ಜಾಥಾ ಹಾಗೂ ಧರಣಿ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಮಾವೇಶಗೊಂಡ ಸಮಾನಾಸಕ್ತರು,ಅಸ್ಪೃಶ್ಯತೆ ಅಳಿಯಲಿ, ಮಾನವತೆ ಬೆಳಗಲಿ ಎಂಬ ಘೋಷಣೆಯೊಂದಿಗ ಮೆರವಣಿಗೆ ಹೊರಟು, ನಗರದ ಪ್ರಮುಖ ವೃತ್ತಗಳಲ್ಲಿ ತೆರಳಿಜಿಲ್ಲಾಡಳಿತ ಭವನದ ಆವರಣದಲ್ಲಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಶತಮಾನಗಳ ಹಿಂದೆಯೇ ಡಾ. ಅಂಬೇಡ್ಕರ್, ಬುದ್ದ, ಬಸವ, ಗಾಂಧಿ,ಸಮಾನತೆಸಾರಿದ್ದರು. ಅಸ್ಪೃಶ್ಯತೆ ನಿವಾರಿಸಲು ಪ್ರಯತ್ನಿಸಿದ್ದರು. ಹೀಗಿದ್ದರೂ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ. ಇದು ನಿಜಕ್ಕೂ ಪ್ರಜ್ಞಾವಂತರಾದ ನಾವೆಲ್ಲತಗ್ಗಿಸಬೇಕಾದವಿಚಾರಎಂದು ಬೇಸರ ವ್ಯಕ್ತಪಡಿಸಿದರು. ಹೀಗಾಗಿ ಇನ್ನಾದರೂಎಲ್ಲರೂಸೇರಿ ಈ ಸಾಮಾಜಿಕ ಪಿಡುಗಿನ ಬಗ್ಗೆಜಾಗೃತಿ ಮೂಡಿಸಬೇಕಾಗಿದೆ ಎಂದರು.
ಅರಿವಿನ ಮೂಲಕ ಈ ಹೀನಆಚರಣೆಯನ್ನು ಇಲ್ಲವಾಗಿಸಬೇಕಾಗಿದೆ. ಅಸ್ಪೃಶ್ಯತೆ ವಿರೋಧಿಕಾನೂನು ಗಳುಜಾರಿಯಲ್ಲಿವೆ.ಅದರೆ, ಜತೆಯಲ್ಲೇವೈಚಾರಿಕಜಾಗೃತಿಯೂ ಅಗತ್ಯ. ಅಸ್ಪೃಶ್ಯತರ ಎಲ್ಲ ಜಾತಿಗಳಮಠಮಾನ್ಯರು, ಜಾತಿ ಮುಖಂಡರು, ಸಾಮಾಜಿಕಚಿಂತಕರು, ಸಾಮಾಜಿಕ ಕೆಲಸದಲ್ಲಿ ತೊಡಗಿರುವವರು ಮಾನವ ಸಮಾನತೆಯ ಧೃಡ ಸಂಕಲ್ಪದೊಂದಿಗೆ ಮುನ್ನಡೆಯಬೇಕಾಗಿದೆ ಎಂದು ಹೇಳಿದರು.
ಲೇಖಕರಾದ ಆರ್.ಎಂ. ಚಿಂತಾಮಣಿ, ಹೊರೆಯಾಲ ದೊರೆಸ್ವಾಮಿ, ಕೆ. ವೆಂಕಟರಾಜು, ಕಾಳಚನ್ನೇಗೌಡ, ನಾ. ದಿವಾಕರ್, ಪಂಡಿತಾರಾಧ್ಯ,ಸಿ.ಪಿ. ಹುಚ್ಚೇಗೌಡ,ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಪತ್ರಕರ್ತ ಎ.ಡಿಸಿಲ್ವ, ಎಸ್ಡಿಪಿಐನ ಸೈಯದ್ ಆರೀಫ್, ಗಾಳೀಪುರಮಹೇಶ್, ರೈತಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಶ್ರೀನಿವಾಸ್ ರಂಗನ್, ರಂಗಸ್ವಾಮನಾಯಕ,ಸಿ.ಎಂ. ನರಸಿಂಹಮೂರ್ತಿ,ರೋಟರಿ ಅಧ್ಯಕ್ಷ ಕೆ.ಎಂ. ಮಹದೇವಸ್ವಾಮಿ, ವೀರಶೈವ ನೌಕರರಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಶಿವಲಿಂಗಮೂರ್ತಿ, ಜಡೇಗೌಡ, ಗಗನ್, ಪ್ರೀತಿ, ಆದರ್ಶ್, ಮಹೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.