![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 25, 2021, 5:56 PM IST
ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿಭಕ್ತಾದಿಗಳಿಗೆ ವಿಧಿಸಲಾಗಿದ್ದ ಹಲವುನಿರ್ಬಂಧಗಳಿಗೆ ಸಡಿಲಿಕೆ ನೀಡಲಾಗಿದ್ದು ಭಾನುವಾರದಿಂದ ಅಭಿಷೇಕ, ಉತ್ಸವ,ಬಂಗಾರ ರಥೋತ್ಸವ, ಮುಡಿ ಸೇವೆ ಸೇರಿದಂತೆಹಲವು ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಕೊರೊನಾ ಲಾಕ್ಡೌನ್ ಹಿನ್ನೆಲೆದೇವಾಲಯಗಳಲ್ಲಿ ಹಲವು ಸೇವೆಗಳಿಗೆನಿರ್ಬಂಧ ವಿಧಿಸಿ ಕೇವಲ ದರ್ಶನಕ್ಕೆ ಮಾತ್ರಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆ ಸರ್ಕಾರದಕಂದಾಯ ಇಲಾಖೆಯ ಪ್ರಧಾನಕಾರ್ಯದರ್ಶಿಗಳು ಹಲವು ಸಡಿಲಿಕೆಗಳನ್ನುನೀಡಿದ್ದಾರೆ. ಈ ಹಿನ್ನೆಲೆ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಕೋವಿಡ್ ನಿಯಮಮತ್ತು ಮಾರ್ಗಸೂಚಿಯೊಂದಿಗೆ ಭಾನುವಾರದಿಂದಲೇ ಹಲವು ಸೇವೆಗಳಿಗೆ ಅವಕಾಶಕಲ್ಪಿಸಲಾಗಿದೆ.
ಲಭ್ಯವಿರುವ ಸೇವೆಗಳು: ಮಲೆ ಮಹದೇಶ್ವರಬೆಟ್ಟದಲ್ಲಿ ಶನಿವಾರದವರೆಗೂ ಭಕ್ತಾದಿಗಳದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.ಇದೀಗ ನೂತನ ಮಾರ್ಗಸೂಚಿಪ್ರಕಟವಾಗಿರುವ ಹಿನ್ನೆಲೆ ದರ್ಶನದ ಜೊತೆಗೆಹಣ್ಣುಕಾಯಿ ಪೂಜೆ, ಮಹಾಮಂಗಳಾರತಿ,ರುದ್ರಾಭಿಷೇಕ ಸೇವೆಗಳಿಗೆ ಅವಕಾಶಕಲ್ಪಿಸಲಾಗಿದೆ. ಪ್ರತಿನಿತ್ಯ ರಾತ್ರಿ 7 ಗಂಟೆಗೆಜರುಗುತ್ತಿದ್ದ ಬಂಗಾರದ ರಥೋತ್ಸವಕ್ಕೂಅವಕಾಶ ಕಲ್ಪಿಸಲಾಗಿದ್ದು, ಈ ಸೇವೆಗೆಪ್ರತಿದಿನ 100 ಜನರಿಗೆ ಮಾತ್ರ ಅವಕಾಶಕಲ್ಪಿಸಲಾಗಿದ್ದು ಮೊದಲ ಬಂದವರಿಗೆಆದ್ಯತೆ ಮತ್ತು ಆನ್ಲೈನ್ ಬುಕ್ಕಿಂಗ್ಮಾಡಿದವರಿಗೆ ಮೊದಲು ಅವಕಾಶನೀಡಲಾಗುತ್ತಿದೆ.
ಅಲ್ಲದೆ ದೇವಾಲಯದ ಪ್ರಾಂಗಣದಲ್ಲಿಜರುಗುತ್ತಿದ್ದ ಹುಲಿವಾಹನೋತ್ಸವ, ಬಸವವಾನೋತ್ಸವ ಮತ್ತು ರುದ್ರಾಕ್ಷಿ ಮಂಟಪೋತ್ಸವಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳಮುಡಿಸೇವೆಗೂ ಅವಕಾಶ ಕಲ್ಪಿಸಲಾಗಿದ್ದುಲಾಡು ಪ್ರಸಾದ ವಿತರಣೆಗೂ ಅವಕಾಶಕಲ್ಪಿಸಲಾಗಿದೆ. ಇದಲ್ಲದೆ ಪ್ರಾಧಿಕಾರದಪೆಟ್ರೋಲ್ ಬಂಕ್ ಸಹ ತೆರೆಯಲಾಗುತ್ತಿದೆ.ಅಲ್ಲದೆ ಕೊಳ್ಳೇಗಾಲದ ಮಲೆ ಮಹದೇಶ್ವರಕಲ್ಯಾಣ ಮಂಟಪದ ಕೋವಿಡ್ನಿಯಮಾವಳಿಗಳೊಂದಿಗೆ ಕಾಯ್ದಿರಿಸಲು ಸಹಅವಕಾಶ ಕಲ್ಪಿಸಲಾಗಿದ್ದು, ಪ್ರಾಧಿಕಾರದ ಬಸ್ಸೇವೆಗಳು ಆಗಸ್ಟ್ 1 ರಿಂದಪ್ರಾರಂಭಗೊಳ್ಳಲಿವೆ.
ಪ್ರಾಧಿಕಾರಕ್ಕೆ ಸಂಬಂಧಿಸಿದ ಯಾವುದೇಸಂದೇಹಗಳಿಗೆ ಭಕ್ತಾದಿಗಳು ಸಹಾಯವಾಣಿಸಂಖ್ಯೆ 18604254850 ಸಂಪರ್ಕಿಸುವಂತೆಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Gundlupete: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು
Kollegala: ತೀರ್ಥ ಸ್ನಾನಕ್ಕೆ ಹೋದ ಅರ್ಚಕ ಕಾವೇರಿಯಲ್ಲಿ ಮುಳುಗಿ ಸಾವು
Hanur: ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಣ ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯ ಬಂಧನ
Hanur: ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.