ಉಮ್ಮತ್ತೂರು ವನ್ಯಜೀವಿ ಧಾಮದಲ್ಲಿ ಕೃಷ್ಣಮೃಗಕ್ಕೆ ಕುತ್ತು


Team Udayavani, Jul 5, 2021, 6:26 PM IST

chamarajanagara news

ಚಾಮರಾಜನಗರ: ತಾಲೂಕಿನ ಉಮ್ಮತ್ತೂರುಕೃಷ್ಣಮೃಗ ವನ್ಯಜೀವಿಧಾಮ ಹಾಗೂ ಕೆಲ್ಲಂಬಳ್ಳಿಗುಡ್ಡಗಳು ಕುರುಚಲು ಹುಲ್ಲಿನ ಪ್ರದೇಶಗಳಾಗಿದ್ದು,ಕೃಷ್ಣಮೃಗಗಳ ಆವಾಸ ಸ್ಥಾನಗಳಾಗಿವೆ. ಈ ಗುಡ್ಡಗಳಲ್ಲಿಕಳೆದ ಕೆಲವು ತಿಂಗಳಿಂದ ಕೃಷ್ಣಮೃಗಗಳನ್ನು ಮಾಂಸಕ್ಕಾಗಿ ಬೇಟೆಯಾಡಲಾಗುತ್ತಿದೆ.

ತಾಲೂಕಿನ ಸಂತೆಮರಹಳ್ಳಿ ಸಮೀಪ ಇರುವಉಮ್ಮತ್ತೂರು ಗ್ರಾಮದಲ್ಲಿ ತಿರುಮಲ್ಲೇಶ್ವರ ಬೆಟ್ಟಹಾಗೂ ಬಸವನಬೆಟ್ಟ ಎಂಬ ಗುಡ್ಡವಿದ್ದು, ಕುರುಚಲುಕಾಡಿನ ಪ್ರದೇಶವಿದೆ. ಇಲ್ಲಿ ಹುಲ್ಲುಗಾವಲುಇರುವುದರಿಂದ ಕೃಷ್ಣಮೃಗಗಳ ಸಂತತಿ ವೃದ್ಧಿಸಿದೆ.ಹೀಗಾಗಿ ಅರಣ್ಯ ಇಲಾಖೆ 2016-17ನೇ ಸಾಲಿನಲ್ಲಿಈ ಗುಡ್ಡವನ್ನುಕೃಷ್ಣಮೃಗಧಾಮವನ್ನಾಗಿ ಘೋಷಿಸಿದೆ.

ಇದೇ ಬಗೆಯಲ್ಲಿ ಕೆಲ್ಲಂಬಳ್ಳಿ ಗುಡ್ಡ ಪ್ರದೇಶದಲ್ಲೂಕೃಷ್ಣಮೃಗ ಹಾಗೂ ಚುಕ್ಕಿ ಜಿಂಕೆಗಳುಕಂಡು ಬಂದಿವೆ.ವಾಹನಗಳಲ್ಲಿ ಸಾಗಾಟ: ಕಳೆದ ವರ್ಷದ ಲಾಕ್‌ಡೌನ್‌ ಹಾಗೂ ಇದೀಗ ಕಳೆದ 2 ತಿಂಗಳಿಂದ ಇದ್ದಲಾಕ್‌ಡೌನ್‌ ಸಂದರ್ಭದಲ್ಲಿ ವಾಹನ, ಜನ ಸಂಚಾರಇಲ್ಲದ ಕಾರಣಕ್ಕೆ ಕೃಷ್ಣಮೃಗ, ಜಿಂಕೆಗಳು ಗುಡ್ಡವಲ್ಲದೇರಸ್ತೆ ದಾಟಿ ಸ್ವತ್ಛಂದವಾಗಿ ಓಡಾಡುತ್ತಿವೆ.

ಈ ಸಂದರ್ಭಬಳಸಿ ಬೇರೆ ಕಡೆಯಿಂದ ಬಂದ ದುಷ Rರ್ಮಿಗಳು ಅವುಗಳನ್ನು ಬೇಟೆಯಾಡಿ ವಾಹನಗಳಲ್ಲಿ ಸಾಗಣೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಉಮ್ಮತ್ತೂರು ಗುಡ್ಡವನ್ನು ಕೃಷ್ಣಮೃಗ ವನ್ಯಧಾಮವನ್ನಾಗಿ ರಾಜ್ಯ ಸರ್ಕಾರ ಘೊಷಣೆ ಮಾಡಿದೆ. ಅದುಘೋಷಣೆಗೆ ಸೀಮಿತವಾಗಿದೆ. ಇಲ್ಲಿನ ವನ್ಯಜೀವಿಗಳರಕ್ಷಣೆಗೆ ಸೂಕ್ತ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ.ಕಳ್ಳಬೇಟೆ ತಡೆ ಶಿಬಿರ ಸ್ಥಾಪಿಸಿಲ್ಲ. ಸರ್ಕಾರದ ಈನಿರ್ಲಕ್ಷ್ಯವೇ ಇದೀಗ ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳಿಗೆ ಕಂಟಕವಾಗಿ ಪರಿಣಮಿಸಿದೆ. ಸಿಬ್ಬಂದಿ ಇಲ್ಲ: ಜಿಲ್ಲೆಯಲ್ಲಿ ಬಂಡೀಪುರ,ಬಿಳಿಗಿರಿರಂಗನಬೆಟ್ಟ ಹುಲಿ ರಕ್ಷಿತ ಅರಣ್ಯ, ಮಲೆಮಹದೇಶ್ವರ ವನ್ಯಜೀವಿ ಧಾಮಗಳಿವೆ.

ಇವುಗಳಲ್ಲಿವನ್ಯಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ಎಲ್ಲಾಕ್ರಮಗಳನ್ನೂ ಕೈಗೊಂಡಿದೆ. ಆದರೆ, ವನ್ಯಜೀವಿವಲಯಗಳಿಂದಾಚೆ ಇರುವ ಪ್ರದೇಶಗಳಲ್ಲಿರುವಕುರುಚಲು ಅರಣ್ಯ ಪ್ರದೇಶದಲ್ಲಿ, ಕೃಷ್ಣಮೃಗ, ಜಿಂಕೆ,ನವಿಲುಗಳ ರಕ್ಷಣೆಗೆ ಕ್ರಮ ಕೈಗೊಳ್ಳುತ್ತಿಲ್ಲ.

ಹೀಗಾಗಿ ಕೃಷ್ಣಮೃಗಗಳ ಬೇಟೆಗಾರರಿಗೆ ಅನುಕೂಲವಾಗಿದೆಎನ್ನುತ್ತಾರೆ ಸ್ಥಳೀಯ ನಿವಾಸಿಗಳು.ಸಂಕೋಚ ಸ್ವಭಾವದಕೃಷ್ಣಮೃಗಗಳು ಸಮತಟ್ಟಾದಹುಲ್ಲುಗಾವಲು ಹೆಚ್ಚಾಗಿರುವ ಪ್ರದೇಶವನ್ನು ತಮ್ಮಆವಾಸ ಸ್ಥಾನವನ್ನಾಗಿ ಮಾಡಿಕೊಳ್ಳುತ್ತವೆ.

ಹೀಗಾಗಿ ಉಮ್ಮತ್ತೂರು ಹಾಗೂ ಕೆಲ್ಲಂಬಳ್ಳಿ ಗುಡ್ಡಗಳು ಅವುಗಳವಾಸಕ್ಕೆ ಸೂಕ್ತವಾಗಿವೆ. ಉಮ್ಮತ್ತೂರು ಅರಣ್ಯದಲ್ಲಿಕ್ರಮೇಣ ಇವುಗಳ ಸಂಖ್ಯೆ ಹೆಚ್ಚುತ್ತಿದ್ದು, ಈಚೆಗೆಕೆಲ್ಲಂಬಳ್ಳಿ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವಕೈಗಾರಿಕಾ ಪ್ರದೇಶದ ನಿರ್ಜನ ಸ್ಥಳಗಳಲ್ಲೂ ಕಂಡುಬರುತ್ತಿವೆ. ಹೀಗಾಗಿ ಅರಣ್ಯ ಇಲಾಖೆ ಇವುಗಳರಕ್ಷಣೆಗೆ ಮುಂದಾಗಬೇಕಾಗಿದೆ. ಹೆಚ್ಚಿನ ಸಿಬ್ಬಂದಿಯನ್ನು ಪಾಳಿ ವ್ಯವಸ್ಥೆಯಲ್ಲಿ ಇಲ್ಲಿಗೆ ನಿಯೋಜಿಸಿ ಬೇಟೆತಡೆಯಬೇಕಾಗಿದೆ. ಅಲ್ಲದೇ ಗಸ್ತು ನಿಯೋಜಿಸಿದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸಬೇಕಾಗಿದೆಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕೆ.ಎಸ್‌.ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

6-gundlupete

Gundlupete: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು

Kollegala-Archaka

Kollegala: ತೀರ್ಥ ಸ್ನಾನಕ್ಕೆ ಹೋದ ಅರ್ಚಕ ಕಾವೇರಿಯಲ್ಲಿ ಮುಳುಗಿ ಸಾವು

7-hanur

Hanur: ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಣ ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯ ಬಂಧನ

5

Hanur: ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.