ಚೆನ್ನಯ್ಯನ ಕೆರೆಗೆ ಬೇಕಿದೆ ಕಾಯಕಲ್ಪ

ಇತಿಹಾಸ ಪ್ರಸಿದ್ಧ ಚೆನ್ನಯ್ಯ ಕೆರೆಯ ಅಕ್ರಮ ಒತ್ತುವರಿ ತಡೆಗೆ ಸಾರ್ವಜನಿಕರ ಆಗ್ರಹ

Team Udayavani, May 25, 2019, 2:08 PM IST

cn-tdy-4..

ಕೊಳ್ಳೇಗಾಲ ನಗರದ ಚೆನ್ನಯ್ಯ ಕೆರೆ ಅಭಿವೃದ್ಧಿಯಾಗದೇ ಗಿಡಗಂಟೆಗಳಿಂದ ಆವೃತಗೊಂಡಿರುವ ಕೆರೆ.

ಕೊಳ್ಳೇಗಾಲ: ನಗರದ ಹೃದಯ ಭಾಗದಲ್ಲಿರುವ ಕ್ರೈಸ್ತ ಸಮಾಜದ ಬಡಾವಣೆಯ ಮುಂದೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬಳಿ ಇತಿಹಾಸ ಪ್ರಸಿದ್ಧ ಚೆನ್ನಯ್ಯನ ಕೆರೆಯೊಂದು ಪಾಳು ಬಿದಿದ್ದು, ಕೂಡಲೇ ಕೆರೆಯ ಸ್ಥಳವನ್ನು ಸಂಪೂರ್ಣ ಶುಚಿಗೊಳಿಸಿ ಪೌಂಟೇನ್‌ ಮಾದರಿಯ ಅಭಿವೃದ್ಧಿ ಗೊಳಿಸಿ ನಗರಕ್ಕೆ ಮೆರಗು ಬರುವಂತೆ ಮಾಡಬೇಕಾಗಿದೆ.

ಮರಡಿಗುಡ್ಡ ಅಂಥ ಹೆಸರು ಬಂದದ್ದು ಹೇಗೆ: ಮಹದೇಶ್ವರರು ದಕ್ಷಿಣ ಕಾಶಿಯಿಂದ ನೆಲೆಸಲು ತಾಲೂಕಿನ ಚಿಲಕವಾಡಿ ಶಂಭುಲಿಂಗೇಶ್ವರ ಬೆಟ್ಟಕ್ಕೆ ನಡೆದು ಬಂದರು. ನಂತರ ನೆಲಸಲು ಸ್ಥಳ ಸೂಕ್ತವಲ್ಲವೆಂದು ಅಲ್ಲಿಂದ ಪಾದಯಾತ್ರೆ ಬೆಳೆಸಿ ನಗರದ ಮರಡಿಗುಡ್ಡ ಬಂದು ಮಂಡಿಯನ್ನು ಊರಿದಕ್ಕಾಗಿ ಮರಡಿಗುಡ್ಡ ಎಂದು ನಾಮಕರ ಣವಾಗಿದೆ. ಇಲ್ಲಿಂದ ಪೂರ್ವಕ್ಕೆ ಕಟ್ಟೆ ಬಸವೇಶ್ವರಕ್ಕೆ ತೆರಳಿ ನಂತರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೆಲಸಿದರೆಂದು ಇತಿಹಾಸದ ಗುಡ್ಡವೊಂದಿದೆ.

ಕೆರೆಯ ಇತಿಹಾಸ: ಮರಡಿ ಗುಡ್ಡದಲ್ಲಿ ಇತಿಹಾಸವುಳ್ಳ ಮಹದೇಶ್ವರ ಸ್ವಾಮಿಯ ದೇವಸ್ಥಾನ ಇದೆ. ದೇವಸ್ಥಾನದ ಅರ್ಚಕರು ಪ್ರತಿನಿತ್ಯ ದೇವರ ವಿಗ್ರಹ ಮತ್ತು ದೇವಸ್ಥಾನ ಶುಚಿಗೊಳಿಸಲು ಗುಡ್ಡದ ಕೆಳಗಿರುವ ಚೆನ್ನಯ್ಯನ ಕಟ್ಟೆಯಿಂದ ಕೆರೆ ನೀರನ್ನು ತೆಗೆದುಕೊಂಡು ಹೋಗಿ ಬಳಿಕ ಪೂಜೆ ಮಾಡುತ್ತಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖ.

ಕೆರೆ ಹೂಳೆತ್ತಬೇಕು: ಇತಿಹಾಸವುಳ್ಳ ಕೆರೆಯನ್ನು ಕೂಡ ಲೇ ಸಂಬಂಧಿಸಿದ ಅಧಿಕಾರಿಗಳು ಸಂಪೂರ್ಣ ಗಿಡಗಂಟಿಗಳನ್ನು ತೆರವು ಮಾಡಿ ನಂತರ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಬೇಕು. ಕೆರೆಯ ಸುತ್ತ ನಗರದ ನಿವಾಸಿಗಳು ಮುಂಜಾನೆ ಮತ್ತು ಸಂಜೆ ವಾಯವಿಹಾ ರಕ್ಕಾಗಿ ಬಂದು ಹೋಗುವಂತೆ ನಿರ್ಮಾಣವಾದ ಪಕ್ಷದಲ್ಲಿ ವಯಸ್ಸಾದವರು ಸ್ವಲ್ಪ ಸಮಯ ಇಲ್ಲಿ ಆಸನಗಳ ಮೇಲೆ ಕುಳಿತು ವಿಶ್ರಾಂತಿ ಪಡೆದು ಹೋಗುವ ರೀತಿಯಲ್ಲಿ ಅಭಿವೃದ್ಧಿ ಆಗಬೇಕು.

ನೀರಿನ ಚಿಲುಮೆ: ರಾಷ್ಟ್ರೀಯ ಹೆದ್ದಾರಿ 209 ನಾಲ್ಕು ಪಥದ ಕಾಂಕ್ರೀಟ್ ರಸ್ತೆ ಮತ್ತು ರಸ್ತೆಯ ಎಡಭಾಗಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆಯ ಜೋಡಿರಸ್ತೆ ನಿರ್ಮಾಣವಾಗಿದೆ. ಈ ಎರಡು ರಸ್ತೆಗಳ ಮಗ್ಗುಲಲ್ಲೇ ಕೆರೆ ಇದ್ದು, ಕೆರೆ ಅಭಿವೃದ್ಧಿಗೊಂಡು ಕೆರೆಯ ಮಧ್ಯಭಾಗದಲ್ಲಿ ನೀರಿನ ಪೌಂಟೇನ್‌ವೊಂದು ನಿರ್ಮಾಣವಾಗಿ ನೀರು ಚಿಮ್ಮುತ್ತಿದ್ದ ಪಕ್ಷದಲ್ಲಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮತ್ತು ಕೆರೆಯ ಪಕ್ಕದಲ್ಲಿರುವ ನಿವಾಸಿಗಳಿಗೆ ಮನರಂಜನೆ ಯನ್ನು ಕಣ್ತುಂಬಿಕೊಳ್ಳುವಂತೆ ಆಗಲಿದೆ.

ಅಕ್ರಮ ತಡೆಗೆ ಒತ್ತಾಯ: ಚೆನ್ನಯ್ಯಕಟ್ಟೆ ಕೆರೆಯಂತೆ ಇನ್ನು ಹಲವಾರು ಇತಿಹಾಸ ಪ್ರಸಿದ್ಧ ಕೆರೆಗಳು ಅಕ್ರಮ ಒತ್ತುವರಿಗೆ ಸಿಲುಕಿ ಯಾವುದೇ ತರಹದ ಅಭಿವೃದ್ಧಿ ಆಗದೆ ಮಣ್ಣಿನಿಂದ ಮುಚ್ಚಿ ಕೆರೆಯೇ ಇಲ್ಲದಂತೆ ಆಗುವ ಕೆಲಸಗಳು ಒಳಗೊಳಗೆ ನಡೆಯುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕೆರೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲ ಹೆಚ್ಚಿಸಿದಾಗ ಕೆರೆಗಳು ಮತ್ತಷ್ಟು ಅಭಿವೃದ್ಧಿ ಹೊಂದುತ್ತದೆ.

ಅಡಿಗಲ್ಲು ಹಾಕಿ: ಕೆರೆಗಳನ್ನು ಸರ್ವೆ ಇಲಾಖೆಯ ಅಧಿಕಾರಿಗಳು ಎಲ್ಲೆ ಗುರುತು ಮಾಡಿ ಅದಕ್ಕೆ ಸೂಕ್ತ ಕಲ್ಲಿನ ಬೇಲಿಗಳನ್ನು ನಿರ್ಮಾಣ ಮಾಡಿದಾಗ ಮಾತ್ರ ಕೆರೆಗಳ ಅಕ್ರಮ ಒತ್ತುವರಿಗೆ ಕಡಿವಾಣ ಹಾಕಿದಂತೆ ಆಗಲಿದ್ದು, ಕೆರೆಗಳಲ್ಲಿ ನೀರು ಶೇಖರಣೆಯಾಗು ವುದರಿಂದ ಜಾನುವಾರುಗಳಿಗೂ ನೀರು ಲಭ್ಯವಾಗ ಲಿದ್ದು, ಕೂಡಲೇ ಭಿವೃದ್ಧಿಗೆ ಅಡಿಗಲ್ಲು ಬೀಳಬೇಕು.

● ಡಿ.ನಟರಾಜು

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-gundlupete

Gundlupete: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು

Kollegala-Archaka

Kollegala: ತೀರ್ಥ ಸ್ನಾನಕ್ಕೆ ಹೋದ ಅರ್ಚಕ ಕಾವೇರಿಯಲ್ಲಿ ಮುಳುಗಿ ಸಾವು

7-hanur

Hanur: ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಣ ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯ ಬಂಧನ

5

Hanur: ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ

Bandipur: ಕಾಡಾನೆ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ವ್ಯಕ್ತಿಗೆ 25 ಸಾವಿರ ರೂ. ದಂಡ!

Bandipur: ಕಾಡಾನೆ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ವ್ಯಕ್ತಿಗೆ 25 ಸಾವಿರ ರೂ. ದಂಡ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.