ಹಳ್ಳಿಗಳಲ್ಲಿ ಮನೆ ಆರೈಕೆ ಕೈಬಿಟ್ಟ ಬಳಿಕ ಸೋಂಕು ನಿಯಂತ್ರಣ


Team Udayavani, Jun 5, 2021, 6:00 PM IST

covid news

ಅರಣ್ಯ ಪ್ರದೇಶವೇ ಹೆಚ್ಚಿರುವ ಗ್ರಾಮಗಳನ್ನುಳ್ಳ ವಿಧಾನಸಭಾ ಕ್ಷೇತ್ರ ಹನೂರು. ನಾಡಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶ, ಇತ್ತ ಬಿಳಿಗಿರಿರಂಗನಬೆಟ್ಟದ ಅರಣ್ಯದಂಚಿನ ಪ್ರದೇಶ

ಹನೂರು ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಅರಣ್ಯದಂಚಿನ ಜನರು, ಬುಡಕಟ್ಟು ಜನರ ಪೋಡುಗಳು ಸಹ ಇದರಲ್ಲಿ ಸೇರಿವೆ. ಕೋವಿಡ್‌-19 ಪರಿಸ್ಥಿತಿಯನ್ನು ಶಾಸಕ ಆರ್‌. ನರೇಂದ್ರ ಹೇಗೆ ನಿಭಾಯಿಸುತ್ತಿದ್ದಾರೆ?

ಕೋವಿಡ್‌ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿರುವ ಇಂಥ ಕಠಿಣ ಸಂದರ್ಭದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಅವರ ಪ್ರಯತ್ನವೇನು? ಎಂಬುದರ ಬಗ್ಗೆ ಉದಯವಾಣಿಯ ಕಿರು ಸಂದರ್ಶನ.

ನಿಮ್ಮ ಕ್ಷೇತ್ರದಲ್ಲಿ ಕೋವಿಡ್ಪರಿಸ್ಥಿತಿ ಹೇಗಿದೆ?

ಮೊದಲು ಹೆಚ್ಚಿತ್ತು. 15 ದಿನಗಳ ಹಿಂದೆ ಬಹಳಪ್ರಕರಣಗಳಿದ್ದವು. ಅನೇಕ ಕ್ರಮಗಳನ್ನು ಕೈಗೊಂಡಬಳಿಕ ನಿಯಂತ್ರಣಕ್ಕೆ ಬರುತ್ತಿದೆ. ನಮ್ಮಲ್ಲಿ ಕೋವಿಡ್‌ಹೆಚ್ಚಾಗಲು ಸರ್ಕಾರ ಮಾಡಿದ ತಪ್ಪು ನಿರ್ಧಾರಕಾರಣ. ಹೋಂ ಐಸೋಲೇಷನ್‌ಮಾಡಬಾರದಿತ್ತು. ಇದರಿಂದಮನೆಯವರಿಗೆಲ್ಲ ಹಬ್ಬಿ ಅಕ್ಕಪಕ್ಕದಜನರಿಗೆ ಹಬ್ಬಿತು. ಚಾಮರಾಜ ನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿ ಜನ್‌ ದುರಂತ ನಡೆದ ನಂತರ ಜಿಲ್ಲಾ ಟಾಸ್ಕ್ಫೋರ್ಸ್‌ಸಭೆಗಳನ್ನು ನಡೆಸಿದರು. ನಾವು ಸಲಹೆ ನೀಡಿಪಾಸಿಟಿವ್‌ ಬಂದವರನ್ನು ಮನೆಯಲ್ಲಿರಿಸಬಾರದು.ಕೋವಿಡ್‌ ಕೇರ್‌ ಸೆಂಟರ್‌ಗೆ ಕಳುಹಿಸಬೇಕು ಎಂದುಸಲಹೆ ನೀಡಿದೆವು. ಟೆಸ್ಟಿಂಗ್‌ ಜಾಸ್ತಿ ಮಾಡಬೇಕುಎಂದು ಸಲಹೆ ನೀಡಿದೆವು. ತಾಲೂಕು ಮಟ್ಟದಲ್ಲಿಟಾಸ್ಕ್ ಫೋರ್ಸ್‌ ನಮ್ಮದೇ ಕಾರ್ಯಪಡೆ ಮಾಡಿ,ವಾರಕ್ಕೆ 2 ಬಾರಿ ಮೀಟಿಂಗ್‌ ಮಾಡಿದೆವು.ಪ್ರತಿಯೊಬ್ಬರನ್ನು ಕೋವಿಡ್‌ ಕೇರ್‌ಗೆ ಸೇರಿಸಬೇಕೆಂದು ಹೇಳಿದ್ದರಿಂದ 260 ಜನ ಕೋವಿಡ್‌ ಕೇರ್‌ನಲ್ಲಿದ್ದಾರೆ. 500 ಮಂದಿಗುಣಮುಖರಾಗಿದ್ದಾರೆ. ಹನೂರು ಕ್ಷೇತ್ರದಲ್ಲಿ150 ಪ್ರಕರಣ ಇದ್ದವು, ಈಗ 40-50 ಪ್ರಕರಣಬರುತ್ತಿವೆ. ಹನೂರು ಟೌನ್‌ನಲ್ಲಿ ಜಾಸ್ತಿ ಇದ್ದವು. ಈಗಬಹಳ ಕಡಿಮೆ ಪ್ರಕರಣ ಇವೆ.

ಸೋಲಿಗರು, ಬೇಡಗಂಪಣರು ಕಾಡಿನೊಳಗೆವಾಸಿಸುತ್ತಿದ್ದಾರೆ.  ಅಲ್ಲಿನ ಪರಿಸ್ಥಿತಿ ಹೇಗಿದೆ?

ಸೋಲಿಗರಿಗೆ ಸರ್ಕಾರದಿಂದ ಪಡಿತರ ವಿತರಿಸಲಾಗುತ್ತಿದೆ. ಪೌಷ್ಟಿಕ ಆಹಾರವನ್ನು ಪ್ರತ್ಯೇಕವಾಗಿ ನೀಡಲಾಗುತ್ತಿದೆ. 3 ತಿಂಗಳಿಗೊಮ್ಮೆ ಅಕ್ಕಿ, ರಾಗಿ, ದ್ವಿದಳ ಧಾನ್ಯಗಳು, ಮೊಟ್ಟೆ, ಬೆಲ್ಲ ತುಪ್ಪ ಇತ್ಯಾದಿ ನೀಡಲಾಗುತ್ತಿದೆ.ಸೋಲಿಗರಿಗೆ ಆಹಾರದ ಕೊರತೆ ಇಲ್ಲ.ಆದರೆ ಕಾಡೊಳಗಿನ ಗ್ರಾಮಗಳಲ್ಲಿರುವಬೇಡಗಂಪಣರಿಗೆ ಸ್ವಲ್ಪ ತೊಂದರೆಯಿದೆ. ಕೆಲಸಕ್ಕೆಹೋಗುತ್ತಿದ್ದರು. ವ್ಯಾಪಾರ ಮಾಡುತ್ತಿದ್ದರು.ಅನೇಕರು ಮಲೆ ಮಹದೇಶ್ವರ ದೇವಾಲಯದಲ್ಲಿಕೆಲಸ ಮಾಡುತ್ತಿದ್ದರು. ಈಗ ದೇವಾಲಯದಲ್ಲಿ ಕೆಲಸಇಲ್ಲ. ಬೇಡಂಪಣ ಕುಟುಂಬಗಳಿಗೆ ತಾಲೂಕುಆಡಳಿತದಿಂದ ನೆರವು ನೀಡಲಾಗುತ್ತಿದೆ. ಸ್ವಯಂಸೇವಾ ಸಂಸ್ಥೆಗಳು ನೆರವು ನೀಡುತ್ತಿವೆ. ಅವರಿಗೆ ಇನ್ನೂಹೆಚ್ಚಿನ ನೆರವಿನ ಅಗತ್ಯವಿದೆ.

ಕೋವಿಡ್ಸೋಂಕನ್ನು ನಿಯಂತ್ರಿಸಲುಆರೋಗ್ಯ ಇಲಾಖೆಗೆ ಪೂರಕವಾಗಿ ಶಾಸಕರಾಗಿ ನೀವು ಮಾಡುತ್ತಿರುವ ಕೆಲಸಗಳೇನು?

ಗ್ರಾಮ ಪಂಚಾಯಿತಿಗೊಂದು ಟಾಸ್ಕ್ಫೋರ್ಸ್‌ಮಾಡಿದ್ದೇನೆ. ಗ್ರಾಪಂ ಸದಸ್ಯರು, ವೈದ್ಯರು, ಆಶಾ,ಅಂಗನವಾಡಿ ಕಾರ್ಯಕರ್ತರು ಮನೆ ಸರ್ವೆ ಮಾಡಿ,ಪಾಸಿಟಿವ್‌ ಬಂದವರನ್ನು ಟ್ರಯಾಜ್‌ನಿಂದ ಕಡ್ಡಾಯವಾಗಿ ಕೋವಿಡ್‌ ಕೇರ್‌ಗೆ ಕಳುಹಿಸಲಾಗುತ್ತಿದೆ. ಟೆಸ್ಟಿಂಗ್‌ ಜಾಸ್ತಿ ಮಾಡಿಸಿದ್ದೇನೆ.ನಾನು ದಾನಿಗಳಿಗೆ ಮನವಿ ಮಾಡಿ, ಟಾಟಾ ಸ್ಮಾರಕಸಂಸ್ಥೆಯಿಂದ 24 ಆಕ್ಸಿಜನ್‌ ಸಾಂದ್ರಕಗಳನ್ನು ಹನೂರುತಾಲೂಕಿಗೆ ನೀಡಿದ್ದೇನೆ. 50 ಪಲ್ಸ್‌ ಆಕ್ಸಿಮೀಟರ್‌ಗಳನ್ನು ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡಿಸಿ ದ್ದೇನೆ. 5000 ಎನ್‌ 95 ಮಾಸ್ಕ್ಗಳನ್ನುಕೊರೊನಾ ವಾರಿಯರ್ಸ್‌ಗೆ ನೀಡಲಾಗಿದೆ.ಗ್ರಾಮ ಪಂಚಾಯಿತಿ 17 ಟಾಸ್ಕ್ ಫೋರ್ಸ್‌ಸಭೆಗಳನ್ನು ನಡೆಸಿದ್ದೇನೆ. ತಿಳಿವಳಿಕೆ ನೀಡಲಾಗುತ್ತಿದೆ.5 ತಾಲೂಕು ಮಟ್ಟದ ಸಭೆಗಳನ್ನು ನಡೆಸಿದ್ದೇನೆ.ವಾರಕ್ಕೆರಡು ದಿನ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆಭೇಟಿ ನೀಡುತ್ತಿದ್ದೇನೆ.

ಕೋವಿಡ್ನಿಯಂತ್ರಣದ ಕೆಲಸಗಳಿಗಾಗಿ ನಿಮ್ಮಶಾಸಕರ ನಿಧಿಯಿಂದ ಎಷ್ಟು ಹಣ ನೀಡಿದ್ದೀರಿ?

ಶಾಸಕರ ಅನುದಾನದಿಂದ 24 ಲಕ್ಷ ರೂ.ನೀಡಿದ್ದೇನೆ. ಇದರಲ್ಲಿ ಆ್ಯಂಬುಲೆನ್ಸ್‌ ಖರೀದಿಸಲಾಗುತ್ತಿದೆ. ಮಾಜಿ ಸಂಸದ ಧ್ರುವನಾರಾಯಣ ಅವರಿಗೆಮನವಿ ಮಾಡಿ, ಅವರಿಂದ ಇನ್ನೊಂದು ಆ್ಯಂಬುಲೆನ್ಸ್‌ಕೊಡಿಸಿದ್ದೇನೆ. ಇನ್ನೂ 26 ಲಕ್ಷ ರೂ. ಅನುದಾನ ಇದೆ.ಕೋವಿಡ್‌ ಸಂಬಂಧಿ ಕೆಲಸಗಳಿಗೆ ಹಣ ಬೇಕಾದರೆ,ಕೂಡಲೇ ಅದಕ್ಕೆ ನೀಡುತ್ತೇನೆ.

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

6-gundlupete

Gundlupete: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು

Kollegala-Archaka

Kollegala: ತೀರ್ಥ ಸ್ನಾನಕ್ಕೆ ಹೋದ ಅರ್ಚಕ ಕಾವೇರಿಯಲ್ಲಿ ಮುಳುಗಿ ಸಾವು

7-hanur

Hanur: ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಣ ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯ ಬಂಧನ

5

Hanur: ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.