ವೀರಪ್ಪನ್‌ ಕಾರ್ಯಾಚರಣೆ ಕಥೆ ಹೇಳುವ ಶ್ರೀನಿವಾಸ್‌ ಜೀಪ್‌

ಕೊಳ್ಳೇಗಾಲ ಅರಣ್ಯ ಇಲಾಖೆ ವಸ್ತು ಸಂಗ್ರಹಾಲಯದಲ್ಲಿ ಡಿಸಿಎಫ್ ನೆನಪು

Team Udayavani, May 7, 2022, 3:00 PM IST

Untitled-1

ಚಾಮರಾಜನಗರ: ಡಿಸಿಎಫ್ ಪಿ. ಶ್ರೀನಿವಾಸ್‌ ಚಾಮರಾಜನಗರದ ಜನತೆಗೆ ಚಿರಪರಿಚಿತ ಹೆಸರು. ನರಹಂತಕ ವೀರಪ್ಪನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಏಕೈಕ ಅಧಿಕಾರಿ ಅವರು.

ಮೊದಲಿಗೆ ಚಾಮರಾಜನಗರದಲ್ಲಿ ಉಪಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಆಗಿದ್ದ ಪಿ. ಶ್ರೀನಿವಾಸ್‌ ನಂತರ ವೀರಪ್ಪನ್‌ ವಿರುದ್ಧದ (ಎಸ್‌ಟಿಎಫ್) ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸಿ, ಅದೇ ವೀರಪ್ಪನ್‌ ನಿಂದ ಭೀಕರವಾಗಿ ಹತ್ಯೆಗೀಡಾದರು. ಅವರು ಬಳಸಿದ್ದ ಜೀಪ್‌ ಅನ್ನು ಜಿಲ್ಲೆಯ ಕೊಳ್ಳೇಗಾಲದ ಡಿಸಿಎಫ್ ಕಚೇರಿಯ ನೂತನ ಅತಿಥಿ ಗೃಹದ ಆವರಣದಲ್ಲಿ ನವೀಕರಿಸಿ ಸಂರಕ್ಷಿಸಲಾಗಿದ್ದು ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ.

ಕೊಳ್ಳೇಗಾಲದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿದ್ದ ಅರಣ್ಯ ಇಲಾಖೆ ಅತಿಥಿ ಗೃಹವನ್ನು ಇತ್ತೀಚೆಗೆ ನವೀಕರಿಸಿ ಉದ್ಘಾಟನೆ ಮಾಡಲಾಗಿದೆ. ಆ ಅತಿಥಿ ಗೃಹಕ್ಕೆ ಡಿಸಿಎಫ್ ದಿ.ಪಿ. ಶ್ರೀನಿವಾಸ್‌ ಅವರ ಹೆಸರಿಡಲಾಗಿದೆ. ಅಲ್ಲಿ ಅವರ ಪುತ್ಥಳಿಯನ್ನೂ ನಿರ್ಮಿಸಲಾಗಿದೆ. ಇದನ್ನು ಪುಟ್ಟದೊಂದು ವಸ್ತು ಸಂಗ್ರಹಾಲಯವಾಗಿಸುವ ಉದ್ದೇಶವನ್ನೂ ಹೊಂದಲಾಗಿದೆ. ಅದರ ಮೊದಲ ಹಂತವಾಗಿ ಶ್ರೀನಿವಾಸ್‌ ಅವರು ಬಳಸುತ್ತಿದ್ದ ವಸ್ತುಗಳು, ಅವರ ವಿವಿಧ ಫೋಟೋಗಳನ್ನು ಪ್ರದರ್ಶಿಸಲಾಗಿದೆ. ಅಲ್ಲದೇ ಅವರ ಹೆಸರಿನಲ್ಲಿ ಗ್ರಂಥಾಲಯವನ್ನೂ ಸಹ ಸ್ಥಾಪಿಸಲಾಗಿದೆ.

ಶ್ರೀನಿವಾಸ್‌ ಬಳಸುತ್ತಿದ್ದ ಜೀಪಿನ ನವೀಕರಣ: ಈ ವಸ್ತುಗಳಲ್ಲಿ ನೋಡುಗರ ಗಮನ ಸೆಳೆಯುವುದು ಪಿ. ಶ್ರೀನಿವಾಸ್‌ ಅವರು ಬಳಸುತ್ತಿದ್ದ ಮಹೀಂದ್ರಾ ಜೀಪ್‌. ವೀರಪ್ಪನ್‌ ಸೆರೆ ಕಾರ್ಯಾಚರಣೆಯಲ್ಲಿದ್ದಾಗ ಪಿ. ಶ್ರೀನಿವಾಸ್‌ ಅವರು ಬಳಸುತ್ತಿದ್ದ ಕೆ.ಎ. 10 ಜಿ 1 ಸಂಖ್ಯೆಯ ಜೀಪು ಕೆಟ್ಟು ಹಾಳಾಗಿತ್ತು. ಆ ಜೀಪು ಮಲೆ ಮಹದೇಶ್ವರ ಬೆಟ್ಟದ ಆಚೆ ಇರುವ ಪಾಲಾರ್‌ ವಲಯ ಅರಣ್ಯಾಧಿಕಾರಿ ಕಚೇರಿಯ ಆವರಣದಲ್ಲಿದ್ದು ಜೀರ್ಣಾವಸ್ಥೆ ತಲುಪಿತ್ತು. ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳು 1.10 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಿಸಿ, ನವೀಕರಿಸಿದ್ದಾರೆ.

ಈ ನವೀಕೃತ ಜೀಪನ್ನು ಅತಿಥಿ ಗೃಹದ ಆವರಣದಲ್ಲಿ ಇಡಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಉಪಯೋಗಕ್ಕೆ ಬಾರ ದಂತಿದ್ದ ಜೀಪನ್ನು ಸಂಪೂರ್ಣ ದುರಸ್ತಿಪಡಿಸಲಾಗಿದ್ದು, ಚಾಲನಾ ಸ್ಥಿತಿಗೆ ತರಲಾಗಿದೆ. ನೋಡಲು ಹೊಚ್ಚ ಹೊಸದಾಗಿ ಕಾಣುತ್ತಿದೆ. ಅತಿಥಿ ಗೃಹದ ಆವರಣದಲ್ಲಿ ಆಧುನಿಕ ಮಾದರಿ ಯಲ್ಲಿ ಶೆಡ್‌ ನಿರ್ಮಿಸಲಾಗಿದ್ದು, ಅದರಲ್ಲಿ ಜೀಪ್‌ ನಿಲ್ಲಿಸಲಾಗಿದೆ. ಅದರ ಮುಂದಿನ ಫ‌ಲಕದಲ್ಲಿ ಈ ಜೀಪಿನ ವಿವರ ಹಾಕಲಾಗಿದೆ. ಸಾರ್ವಜನಿಕರು ಈ ಜೀಪನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಯಾರು ಈ ಪಿ. ಶ್ರೀನಿವಾಸ್‌? : ಆಂಧ್ರಪ್ರದೇಶ ಮೂಲದ ಐಎಫ್ಎಸ್‌ ಅಧಿಕಾರಿ ಪಿ. ಶ್ರೀನಿವಾಸ್‌ 1985-86ರಲ್ಲಿ ಚಾಮರಾಜನಗರ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 1986ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಸಾರ್ಕ್‌ ಸಮ್ಮೇಳನ ನಡೆದಾಗ, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾಡುಗಳ್ಳ ವೀರಪ್ಪನ್‌ನನ್ನು ಪೊಲೀಸರು ಬಂಧಿಸಿದ್ದರು. ಆಗ ವೀರಪ್ಪನ್‌ ನನ್ನು ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದ ಪಿ. ಶ್ರೀನಿವಾಸ್‌ ಅವರು ಬೂದಿಪಡಗ ಅತಿಥಿಗೃಹದಲ್ಲಿ ಬಂಧಿಸಿದ್ದರು. ಆತನಿಂದ ನಡೆದಿದ್ದ ಆನೆಗಳ ದಂತ ಅಪಹರಣ, ಕಳ್ಳಸಾಗಾಣಿಕೆಗಳ ಬಗ್ಗೆ ವಿಚಾರಣೆ ನಡೆಸಿದ್ದರು. ಪಿ. ಶೀನಿವಾಸ್‌ ಇರದಿದ್ದ ಸಂದರ್ಭದಲ್ಲಿ ವೀರಪ್ಪನ್‌ ಪೊಲೀಸರ ಕಣ್ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದ. 1990ರ ಸಮಯದಲ್ಲಿ ಮಲೆ ಮಹದೇಶ್ವರ ಬೆಟ್ಟ ಅರಣ್ಯ ಪ್ರದೇಶದಲ್ಲಿ ಕಾಡುಗಳ್ಳ, ನರಹಂತಕ ವೀರಪ್ಪನ್‌ ಉಪಟಳ ಹೆಚ್ಚಾದಾಗ, ಆತನನ್ನು ತಾನು ಸೆರೆ ಹಿಡಿಯುವುದಾಗಿ ಪಿ. ಶ್ರೀನಿವಾಸ್‌ ಅವರು ಸ್ವಯಂಪ್ರೇರಣೆಯಿಂದ ಎಸ್‌ಟಿಎಫ್ ಸೇರಿದರು.

ವೀರಪ್ಪನ್‌ ಹುಟ್ಟೂರಾದ ಗೋಪಿನಾಥಂನಲ್ಲಿ ಕ್ಯಾಂಪ್‌ ಮಾಡಿ, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ವೀರಪ್ಪನ್‌ನ ಮನವೊಲಿಸಿ ಶರಣಾಗತಿ ಮಾಡಿಸುವುದಾಗಿ ಬಲವಾಗಿ ನಂಬಿದ್ದರು. ಗೋಪಿನಾಥಂನಲ್ಲಿ ಆರೋಗ್ಯ ಕೇಂದ್ರ ತೆರೆದು, ಅಲ್ಲಿನ ಜನರಿಗೆ ಉಚಿತ ಔಷಧೋಪಚಾರ ನಡೆಸುತ್ತಿದ್ದರು. ಅಲ್ಲದೇ ಗ್ರಾಮದಲ್ಲಿ ಮಾರಿಯಮ್ಮ ದೇಗುಲವನ್ನು ಕೂಡ ನಿರ್ಮಾಣ ಮಾಡಿದ್ದರು. 1991ರ ನವೆಂಬರ್‌ 10ರಂದು ಎರಕೆಹಳ್ಳ ಪ್ರದೇಶದಲ್ಲಿ ಶರಣಾಗತನಾಗುವುದಾಗಿ ವೀರಪ್ಪನ್‌, ಶ್ರೀನಿವಾಸರನ್ನು ಕರೆಸಿಕೊಂಡಿದ್ದ. ಅವನ ಮಾತು ನಂಬಿ ನಿರಾಯುಧರಾಗಿ ಏಕಾಂಗಿಯಾಗಿ ಸ್ಥಳಕ್ಕೆ ಹೋದ ಶ್ರೀನಿವಾಸ್‌ ಅವರನ್ನು ವೀರಪ್ಪನ್‌ ಕೊಂದು ರುಂಡ ಮುಂಡ ಬೇರೆ ಮಾಡಿದ್ದ, ಪೊಲೀಸರಿಗೆ ಅವರ ಶಿರ ಪತ್ತೆಯಾಗಲೇ ಇಲ್ಲ.

 

-ಕೆ.ಎಸ್‌.ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.