ಬಣಗುಡುತ್ತಿರುವ ಸಿದ್ದಯ್ಯನಪುರದ ನಾಲ್ಕು ಕೆರೆಗಳು


Team Udayavani, May 6, 2019, 3:00 AM IST

banaguduti

ಕೊಳ್ಳೇಗಾಲ: ಒಂದು ಗ್ರಾಮದಲ್ಲಿ ಒಂದು ಕೆರೆ ಇರುವುದೇ ಹೆಚ್ಚು ಆದರೆ ತಾಲೂಕಿನ ಸಿದ್ದಯ್ಯನಪುರದಲ್ಲಿ ಪುರಾತನ ಕಾಲದಿಂದಲೂ ನಾಲ್ಕು ಕೆರೆಗಳು ಇವೆ. ಆದರೆ ಕೆರೆಗಳು ಯಾವುದೇ ರೀತಿ ಅಭಿವೃದ್ಧಿಯಾಗದೆ ಬತ್ತಿಹೋಗಿ, ರೈತರಿಗೆ ಮತ್ತು ದನ-ಕರುಗಳಿಗೆ ನೀರು ಇಲ್ಲದೆ ಗಿಡಗಂಟಿಗಳು ಬೆಳೆದು ನಿಂತಿದೆ.

ತಾಲೂಕಿನಲ್ಲಿ ಸಿದ್ದಯ್ಯನಪುರ ಗ್ರಾಮ ಅತ್ಯಂತ ದೊಡ್ಡ ಗ್ರಾಮವಾಗಿದ್ದು, ಇಲ್ಲಿ ಗ್ರಾಮ ಪಂಚಾಯಿತಿಯನ್ನು ಒಳಗೊಂಡಿದೆ. ಗ್ರಾಮದಲ್ಲಿ ಗೂಗಲಕಟ್ಟೆ ಕೆರೆ, ಎರಡು ಬಸವನಗುಡಿ ಕೆರೆ, ಈರಯ್ಯನ ಕೆರೆ ಒಟ್ಟು ನಾಲ್ಕು ಕೆರೆಗಳು ಗ್ರಾಮದ ಹಿಂಬದಿಯಲ್ಲಿರುವ ಬಸವನಗುಡಿ ದೇವಸ್ಥಾನದ ಬಳಿ ನಿರ್ಮಾಣವಾಗಿದೆ.

ಗ್ರಾಮಸ್ಥರು ತಮ್ಮ ಜಮೀನುಗಳಿಗೆ ತೆರಳಲು ಇದೇ ದೇವಸ್ಥಾನದ ಮುಂಬದಿಯಲ್ಲಿಯೇ ತೆರಳಬೇಕಾಗಿದ್ದು, ತಮ್ಮ ಜಾನುವಾರುಗಳನ್ನು ಗದ್ದೆ ಬಯಲಿಗೆ ಮೇವಿಗಾಗಿ ತೆರಳುವ ವೇಳೆ ಜಾನುವಾರುಗಳು ಇಲ್ಲೇ ನೀರನ್ನು ಕುಡಿದು ಹೋಗುತ್ತವೆ ಮತ್ತು ತುಂಬಿದ ಕೆರೆಯ ನೀರನ್ನು ಸುತ್ತಮುತ್ತಲಿನ ರೈತರು ಜಮೀನುಗಳಿಗೆ ಹರಿಸಿಕೊಂಡು ಫ‌ಸಲ ತೆಗೆಯುವುದು ವಾಡಿಕೆ.

ಪ್ರಯೋಜನಕ್ಕೆ ಬಾರದ ಕೆರೆಗಳು:ಇತ್ತೀಚಿನ ದಿನಗಳಲ್ಲಿ ಫೋನಿ ಚಂಡಮಾರುತ ಎದ್ದರೂ ಸಹ ಸಮರ್ಪಕ ಮಳೆಯಾಗದೆ ಕೆರೆಯಲ್ಲಿ ಒಂದು ಹನಿ ನೀರಿಲ್ಲದೆ ಸಂಪೂರ್ಣ ಗಿಡಗಂಟಿಗಳು ಬೆಳೆದು ಅಭಿವೃದ್ಧಿಯೇ ಇಲ್ಲದೆ ಯಾವುದಕ್ಕೂ ಪ್ರಯೋಜನವಾಗದೆ ಬರಿದಾದ ಕೆರೆಯಾಗಿವೆ.

ರೈತರಲ್ಲಿ ಆತಂಕ: ಕೆರೆಗಳು ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ, ಕಾವೇರಿ ಮತ್ತು ಕಬಿನಿ ನಾಲಾ ವಿಭಾಗ ಮತ್ತು ಗ್ರಾಮ ಪಂಚಾಯಿತಿಗೆ ಒಳಪಡುವುದೇ ಎಂಬ ಗೊಂದಲದಲ್ಲಿ ಸಿಲುಕಿರುವ ಗ್ರಾಮದ ರೈತರು ಯಾರೂ ಸಹ ಕೆರೆಗಳತ್ತ ಗಮನ ಹರಿಸದೆ ಇರುವುದು ವಿಪರ್ಯಾಸವೇ ಸರಿ, ನೀರಿಲ್ಲದೆ ಗ್ರಾಮದಲ್ಲಿ ಜನರು ಹಾಗೂ ಜಾನುವಾರುಗಳು ಪರದಾಡುತ್ತಿವೆ ಎಂದು ರೈತರು ತಮ್ಮ ಆತಂಕವನ್ನು ತೊಡಿಕೊಂಡಿದ್ದಾರೆ.

ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ: ಗ್ರಾಮದ ರೈತರು ಹಲವಾರು ಬಾರಿ ಅಧಿಕಾರಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಕೆರೆ ಅಭಿವೃದ್ಧಿ ಪಡಿಸಬೇಕೆಂದು ಹಲವಾರು ಬಾರಿ ದೂರುಗಳನ್ನು ಸಲ್ಲಿಸಿದರೂ ಸಹ ಯಾರು ಇದರ ಬಗ್ಗೆ ಗಮನಹರಿಸದೆ ಇರುವುದು ಕುಂಠಿತಕ್ಕೆ ಕಾರಣವಾಗಿದೆ ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಕಬಿನಿ ನಾಲೆ ನೀರೆ ಗತಿ: ಮಳೆಗಾಲದಲ್ಲಿ ಕಬಿನಿ ಮತ್ತು ಇನ್ನಿತರ ಜಲಾಶಯಗಳು ಭರ್ತಿಗೊಂಡು ಹೆಚ್ಚುವರಿ ನೀರನ್ನು ಕಾವೇರಿ ನದಿ ಮತ್ತು ಕಬಿನಿ ನಾಲೆ ಮೂಲಕ ನೀರನ್ನು ಹರಿದು ಬಿಟ್ಟಾಗ ಮಾತ್ರ ಗ್ರಾಮದ ಎಲ್ಲಾ ಕೆರೆಗಳು ಭರ್ತಿಯಾಗುತ್ತದೆ. ಇಲ್ಲವಾದ ಪಕ್ಷದಲ್ಲಿ ಕೆರೆಯನ್ನು ನೋಡುವವರಾಗಲಿ, ಕೇಳುವವರಾಗಲಿ ದಿಕ್ಕಿಲ್ಲದಂತೆ ಆಗಿದೆ.

ಯಾವುದೇ ಗ್ರಾಮದಲ್ಲಿ ನಾಲ್ಕು ಕೆರೆಗಳು ಇರುವುದಿಲ್ಲ. ಆದರೆ ಸಿದ್ದಯ್ಯನಪುರದಲ್ಲಿ ಹೆಚ್ಚು ಜನರು ಜಮೀನು ಹೊಂದಿದ್ದು, ರೈತರ ಅನುಕೂಲಕ್ಕಾಗಿ ನಾಲ್ಕು ಕೆರೆಗಳು ಇದೆ. ಇದನ್ನು ಹೂಳೆತ್ತುವ ಮತ್ತು ಗಿಡಗಂಟಿಗಳನ್ನು ತೆರವು ಮಾಡುವ ಪ್ರಯತ್ನ ಮಾಡದೆ ಇರುವುದರಿಂದ ಅಭಿವೃದ್ಧಿಯಲ್ಲಿ ಕುಂಠಿತವಾಗಿದ್ದು, ಕೆರೆಯಿಂದ ರೈತರಿಗೆ ಅಪಾರ ನಷ್ಟ ಉಂಟಾಗುತ್ತಿದೆ.
-ರಾಚಯ್ಯ, ರೈತ ಮುಖಂಡ

ಕೆರೆಗಳು ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಅಥವಾ ಗ್ರಾಮ ಪಂಚಾಯಿತಿಗೆ ಯಾವುದಕ್ಕೆ ಸೇರಿದ್ದರೂ ಸಹ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನ ಸೆಳೆದು ಬತ್ತಿಹೋಗಿರುವ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು.
-ಶಿವಮ್ಮ, ಜಿಪಂ ಅಧ್ಯಕ್ಷೆ

* ಡಿ.ನಟರಾಜು

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-kollegala

Kollegala: ಗಾಂಜಾ ಗಿಡ ಬೆಳೆಸಿದ್ದ ಆರೋಪಿಯ ಬಂಧನ; ಗಿಡ ವಶಕ್ಕೆ ಪಡೆದ ಪೊಲೀಸರು

2-gundlupete

Chamarajanagar: ಬೈಕ್- ಪಿಕ್ ಅಪ್ ಅಪಘಾತ: ಸವಾರ ಸಾವು

Road Mishap; ಬೈಕ್- ಪಿಕ್ ಅಪ್ ವಾಹನ ಡಿಕ್ಕಿ; ಬೈಕ್ ಸವಾರ ಸಾವುRoad Mishap; ಬೈಕ್- ಪಿಕ್ ಅಪ್ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap; ಬೈಕ್- ಪಿಕ್ ಅಪ್ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Kollegala: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಮೃತ್ಯು

Kollegala: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಮೃತ್ಯು

Gundlupete; ರೈಲ್ವೇ ಬ್ಯಾರಿಕೇಡ್ ನಲ್ಲಿ ಸಿಲುಕಿದ ಕಾಡಾನೆ ರಕ್ಷಣೆ

Gundlupete; ರೈಲ್ವೇ ಬ್ಯಾರಿಕೇಡ್ ನಲ್ಲಿ ಸಿಲುಕಿದ ಕಾಡಾನೆ ರಕ್ಷಣೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.