Gundlupete: 3 ತಿಂಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ
Team Udayavani, Oct 17, 2024, 5:32 PM IST
ಗುಂಡ್ಲುಪೇಟೆ: ಕಳೆದ 3 ತಿಂಗಳಿಂದ ರೈತರಿಗೆ ಉಪಟಳ ಕೊಡುತ್ತಿದ್ದ ಗಂಡು ಚಿರತೆ ಕೊನೆಗೂ ಬೋನಿಗೆ ಸೆರೆಯಾಗಿರುವ ಘಟನೆ ಕುಲಗಾಣ ಗ್ರಾಮದಲ್ಲಿ ಗುರುವಾರ (ಅ.17) ನಡೆದಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಲಗಾಣ ಗ್ರಾಮದ ಬಾಬು ಅಯ್ಯಂಗಾರ್ ಎಂಬುವವರ ಜಮೀನಿನಲ್ಲಿ ನಾಯಿ ಕಟ್ಟಿ ಬೋನನ್ನು ಇರಿಸಲಾಗಿತ್ತು. ಆಹಾರ ಅರಸಿ ಬಂದ ಚಿರತೆಯು ನಾಯಿ ಆಸೆಗೆ ಬೋನಲ್ಲಿ ಸೆರೆಯಾಗಿದೆ. ಚಾಮರಾಜನಗರ ಬಫರ್ ವಲಯ ವ್ಯಾಪ್ತಿಯ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಚಿರತೆಯನ್ನು ಬೇರೆಡೆಗೆ ರವಾನಿಸಿದ್ದಾರೆ. ಸೆರೆಯಾದ ಚಿರತೆ ಗಂಡಾಗಿದ್ದು, ಸುಮಾರು 5 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ.
ನಿಟ್ಟುಸಿರು ಬಿಟ್ಟ ರೈತರು: ಸೀಗೆವಾಡಿ ಕುಲಗಾಣ ಗ್ರಾಮದ ಸುತ್ತಮುತ್ತಲು ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿತ್ತು. ಇದರಿಂದ ರೈತರು ಜಮೀನುಗಳಿಗೆ ಹೋಗಲು ಹಿಂದೇಟು ಹಾಕುವಂತಾಗಿತ್ತು. ಇದರಿಂದ ಬೇಸತ್ತಿದ್ದ ರೈತರ ಮನವಿ ಮೇರೆಗೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ಇದರಿಂದ ಈ ಭಾಗದ ರೈತರು ನಿಟ್ಟುಸಿರು ಬಿಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haryana; ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಕ್ಯಾಪ್ಟನ್ ಅಜಯ್ ಯಾದವ್
Train; ಹಳಿತಪ್ಪಿದ ಅಗರ್ತಲಾ-ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ನ 8 ಬೋಗಿಗಳು
ಅ.19-20ರಂದು ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಗ್ರ್ಯಾಂಡ್ ಫಿನಾಲೆ
Congress Govt.,: ವಾಲ್ಮೀಕಿ ಸಮಾಜದ ಕ್ಷಮೆ ಕೇಳಲಿ: ಆರಗ ಜ್ಞಾನೇಂದ್ರ
Bhool Bhulaiyaa 3; ವಿದ್ಯಾ-ಮಾಧುರಿ ನಾಟ್ಯ ಲಹರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.