Male mahadeshwara Temple: ಮಾದಪ್ಪನ ಸನ್ನಿಧಿಯಲ್ಲಿ ಹಾಲರವಿ ಉತ್ಸವ


Team Udayavani, Nov 14, 2023, 11:23 AM IST

Male mahadeshwara Temple: ಮಾದಪ್ಪನ ಸನ್ನಿಧಿಯಲ್ಲಿ ಹಾಲರವಿ ಉತ್ಸವ

ಹನೂರು: ಕೋಟ್ಯಾಂತರ ಭಕ್ತಾದಿಗಳ ಆರಾಧ್ಯ ದೈವ ಮಲೆ ಮಹದೇಶ್ವರನ ದೀಪಾವಳಿ ಜಾತ್ರಾ ಮಹೋತ್ಸವದ ಹಾಲರವಿ ಉತ್ಸವ ಮತ್ತು ದೀಪಾವಳಿ ಅಮಾವಾಸ್ಯೆಯ ಪೂಜಾ ಕೈಂಕರ್ಯಗಳು ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ವಿಧಿವಿಧಾನ ಗಳೊಂದಿಗೆ ನೆರವೇರಿತು.

ದೀಪಾವಳಿ ಜಾತ್ರಾ ಮಹೋತ್ಸವದ ಅಮಾ ವಾಸ್ಯೆಯ ದಿನದಂದು ಮಲೆ ಮಾದಪ್ಪನಿಗೆ ತ್ರಿಕಾಲ ಪೂಜೆ ನೆರವೇರಿಸಲಾಯಿತು. ಮಲೆ ಮಾದಪ್ಪನಿಗೆ ತೈಲಾಭಿಷೇಕ ನೆರವೇರಿಸಿ ಬಳಿಕ ವಿಭೂತಿ ಅಭಿಷೇಕ ಮತ್ತು ಬಿಲ್ವಾರ್ಚನೆಯನ್ನು ವಿಧಿವಿಧಾನಗಳೊಂದಿಗೆ ಬೇಡಗಂಪಣ ಅರ್ಚಕರಿಂದ ನೆರವೇರಿಸಲಾಯಿತು.

ಹಾಲರವಿ ಉತ್ಸವ: ದೀಪಾವಳಿ ಜಾತ್ರಾ ಮಹೋತ್ಸ ವದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲೊಂ ದಾದ ಹಾಲರವಿ ಉತ್ಸವವು ಸಂಭ್ರಮ ಸಡಗರ ದಿಂದವಿಧಿವಿಧಾನಗಳೊಂದಿಗೆ ಜರುಗಿತು. ಹಾಲರವಿ ಉತ್ಸವದಲ್ಲಿ ಭಾಗವಹಿಸುವ ಬೇಡಗಂ ಪಣ ಕುಲದ 10-12 ವಯೋಮಾನದ 108 ಹೆಣ್ಣು ಮಕ್ಕಳು ದಟ್ಟ ಅಡವಿಯ ಮಧ್ಯದ ಹಾಲಳ್ಳವನ್ನು ತಲುಪಿದರು. ಬಳಿಕ ಹಾಲಳ್ಳದ ಕಾರಯ್ಯ ಮತ್ತು ಬಿಲ್ಲಯ್ಯ ಮಡುವಿನಲ್ಲಿ ಪುಣ್ಯಸ್ನಾನ ಮಾಡಿ ಹಾಲರವಿ ಹೊತ್ತು ತರುವ ಬಿಂದಿಗೆಗಳಿಗೆ ಹಾಲಳ್ಳದ ಪವಿತ್ರ ಜಲವನ್ನು ತುಂಬಿ ಧೂಪ-ದೀಪಗಳ ಸಮೇತ ಮಂಗಳಾರತಿ ಬೆಳಗಿ ಮಂಗಳವಾದ್ಯ, ನಂದಿಕಂಬ, ಸತ್ತಿಗೆ ಸುರಪಾನಿ ಸಮೇತ 7 ಕಿ.ಮೀ ದೂರ ಬರಿ ಗಾಲಲ್ಲಿ ಹೆಣ್ಣುಮಕ್ಕಳು ಪಾದಯಾತ್ರೆಯಲ್ಲಿ ಸಾಗು ವ ಹಾಲರವಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ವೀರಗಾಸೆ ಕುಣಿತ ತಂಡ, ಕಂಸಾಳೆ ನೃತ್ಯ ತಂಡ ಸೇರಿದಂತೆ ವಿವಿಧ ಕಲಾತಂಡಗಳ ಆಕರ್ಷಣೀಯ ಪ್ರದರ್ಶನದೊಂದಿಗೆ ಹಾಲರವಿ ಹೊತ್ತ ಹೆಣ್ಣು ಮಕ್ಕಳು ಮಾದಪ್ಪನ ಸನ್ನಿಧಿ ತಲುಪಿ ದೇವಾಲ ಯ ಪ್ರದಕ್ಷಿಣೆ ಹಾಕಿ ತಾವು ಹೊತ್ತು ತಂದಿದ್ದ ಜಲದಿಂದ ಅಭಿಷೇಕ ನೆರವೇರಿಸಿದರು.

ಕತ್ತಿಪವಾಡ ಸೇವೆ: ಹಾಲರವಿ ಉತ್ಸವ ಪ್ರಾರಂಭ ವಾಗುವ ಮೊದಲು ಉಪವಾಸ ವ್ರತ ಕೈಗೊಂಡಿದ್ದ ಬೇಡಗಪಣ ಅರ್ಚಕರಿಂದ ಕತ್ತಿಪವಾಡ ಸೇವೆ ನೆರವೇರಿಸುವುದು ವಾಡಿಕೆ. ಮಲೆ ಮಾದಪ್ಪನ ಅಭಿಷೇಕಕ್ಕಾಗಿ ಹಾಲರವಿ ಹೊತ್ತೂಯ್ಯುವಾದ ಮಾರ್ಗಮಧ್ಯದಲ್ಲಿ ಯಾವುದೇ ದುಷ್ಟ ಶಕ್ತಿಗಳ ಕಣ್ಣೂ ಬೀಳದಿರಲಿ ಎಂದು ಕತ್ತಿಪವಾಡ ಸೇವೆ ನೆರವೇರಿಸಲಾಯಿತು. ಈ ಆಚರಣೆಯಲ್ಲಿ ಹರಕೆ ಹೊತ್ತ ಭಕ್ತರೊಬ್ಬರು ಕತ್ತಿಯ ಅರಗಿನ ಮೇಲೆ ಮಲುಗಲಿದ್ದು ಬೇಡಗಂಪಣ ಅರ್ಚಕರು ಕತ್ತಿಯ ಅರಗಿನ ಮೇಲೆ ಮಲಗಿರುವವರ ಮೇಲೆ ಹೆಜ್ಜೆಹಾಕಿ ಬರುತ್ತಾರೆ. ಈ ಸೇವೆ ನಡೆಯುತ್ತಿದ್ದಂತೆ ಭಕ್ತಾದಿಗಳ ಕರತಾಡನ ಮತ್ತು ಹರ್ಷೋದ್ಘಾರ ಮುಗಿಲು ಮುಟ್ಟುವಂತಿತ್ತು.

ಉಚಿತ ಸೀರೆ ಕುಪ್ಪಸ ವಿತರಣೆ: ಹಾಲರವಿ ಉತ್ಸವ ದಲ್ಲಿ ಭಾಗವಹಿಸುವ ಬೇಡಗಂಪಣ ಹೆಣ್ಣುಮಕ್ಕಳಿಗೆ ಪ್ರಾಧಿಕಾರದವತಿಯಿಂದ ವಿತರಿಸಲಾಯಿತ್ತು. ಇದರ ಜೊತೆಗೆ ಹರಕೆ ಹೊತ್ತ ಭಕ್ತಾದಿಗಳು ಹಾಲರವಿ ಹೊತ್ತುತರುವ ಮಕ್ಕಳಿಗೆ ಕೈಬಳೆ, ಕಣ್ಣಿಕೆ ಕಾಡಿಗೆ, ಬೈತಾಳೆ ಬೊಟ್ಟು ಸೇರಿದಂತೆ ಹಲವಾರು ಅಲಂಕಾರಿಕ ಸಾಮಾಗ್ರಿಗಳನ್ನು ನೀಡುವ ಮೂಲಕ ಭಕ್ತಿ ಸಮರ್ಪಿಸಿ ತಮ್ಮ ಹರಕೆ ಸಲ್ಲಿಸಿದರು.

ರಸ್ತೆಗೆ ಅಡ್ಡಲಾಗಿ ಮಲಗಿದ ಭಕ್ತವೃಂದ: ಶ್ರೀ ಕ್ಷೇತ್ರದ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಶ್ರೀ ಗಳ ದಿವ್ಯಸಾನಿಧ್ಯದಲ್ಲಿ ಹಾಲರವಿ ಉತ್ಸವ ಹಾದು ಬರುವ ಮಾರ್ಗಮಧ್ಯದ ರಸ್ತೆಯಲ್ಲಿ ಮಹಿಳಾ ಭಕ್ತಾದಿಗಳು ರಸ್ತೆಗೆ ಅಡ್ಡಲಾಗಿ ಮಲಗಿ ಶ್ರೀಗಳಿಂದ ದಾಟಿಸಿಕೊಂಡರು. ಈ ರೀತಿ ಶ್ರೀಗಳಿಂದ ದಾಟಿಸಿ ಕೊಂಡರೆ ತಮ್ಮ ದೇಹ ಬಾಧೆಗಳು, ಕಷ್ಟ ಕಾರ್ಪಣ್ಯ ಗಳೆಲ್ಲಾ ಕಳೆಯುತ್ತದೆ ಎಂಬ ನಂಬಿಕೆಯಿಂದ ಸ್ವಾಮೀಜಿಗಳಿಂದ ದಾಟಿಸಿಕೊಳ್ಳುವುದು ವಾಡಿಕೆ.

ಇಂದು ಬೆಟ್ಟದಲ್ಲಿ ಮಹಾರಥೋತ್ಸವ: ದೀಪಾವಳಿ ಜಾತ್ರಾ ಮಹೋತ್ಸವದ ಮಹಾರಥೋತ್ಸವವು ಮಂಗಳವಾರ ಬೆಳಗ್ಗೆ 8.50 ರಿಂದ 9.10ರ ವರೆಗಿನ ಶುಭ ವೇಳೆಯಲ್ಲಿ ಜರುಗಲಿದೆ. ಈ ಮಹಾರಥೋತ್ಸವದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸುವ ಅಂದಾಜು ಮಾಡಲಾಗಿದ್ದು ಈ ಮಹಾರಥೋತ್ಸವವನ್ನು ಕಣ್ತುಂಬಿ ಕೊಳ್ಳಲು ಭಕ್ತಸಮೂಹವೇ ಶ್ರೀ ಕ್ಷೇತ್ರದಲ್ಲಿ ನರೆದಿದ್ದಾರೆ.

ವಿನೋದ್‌ ಎನ್‌ ಗೌಡ

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Leopard ಓಡಿಸಲು ಅರಣ್ಯ ಇಲಾಖೆ ಹಾರಿಸಿದ ಗುಂಡಿನಿಂದ ನಾಲ್ವರು ರೈತರಿಗೆ ಗಾಯ; ಚಿರತೆ ಸಾವು

Leopard ಓಡಿಸಲು ಅರಣ್ಯ ಇಲಾಖೆ ಹಾರಿಸಿದ ಗುಂಡಿನಿಂದ ನಾಲ್ವರು ರೈತರಿಗೆ ಗಾಯ; ಚಿರತೆ ಸಾವು

Chamarajanagar: DRFO arrested by Lokayukta while taking bribe

Chamarajanagara: ಲಂಚ ಪಡೆಯುತ್ತಿದ್ದ ಡಿಆರ್‌ಎಫ್‌ಒ ಲೋಕಾಯುಕ್ತ ಬಲೆಗೆ

Road Mishap ಬೈಕ್ ಗೆ ಟಿಪ್ಪರ್ ಢಿಕ್ಕಿ; ಕೇರಳ ಮೂಲದ ಮೂವರ ದುರ್ಮರಣ

Road Mishap ಬೈಕ್ ಗೆ ಟಿಪ್ಪರ್ ಢಿಕ್ಕಿ; ಕೇರಳ ಮೂಲದ ಮೂವರ ದುರ್ಮರಣ

Kollegala: ಒಣಗಾಂಜಾ ಮಾರಾಟ; ಆರೋಪಿ ಬಂಧನ

Kollegala: ಒಣಗಾಂಜಾ ಮಾರಾಟ; ಆರೋಪಿ ಬಂಧನ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.