ಕಾನನದ ಪ್ರಾಕೃತಿಕ ರುದ್ರನಿಗೆ ಕಾಡಿನ ಮಕ್ಕಳ ವಿಶಿಷ್ಟ ಪೂಜೆ


Team Udayavani, Mar 12, 2021, 7:25 PM IST

Chamaraj nagara

ಯಳಂದೂರು: ಶಿವ ಸರ್ವ ಸ್ವರೂಪಿ ಇವನಿಗೆ ಆರಾಧಿಸದ ಭಕ್ತರಿಲ್ಲ.ಕಾಡುಮೇಡುಗಳಲ್ಲಿ, ದಟ್ಟ ಕಾನನದಲ್ಲಿ ಲಿಂಗಸ್ವರೂಪಿಯಾಗಿ ಈತಎಲ್ಲೆಲ್ಲೂ ಪೂಜಿಸಲ್ಪಡುವ ದೈವನಾಗಿದ್ದಾನೆ. ಇದಕ್ಕೆ ಸಾಕ್ಷಿ ಎಂಬಂತೆ ತಾಲೂಕಿನ ಬಿಳಿಗಿರಿರಂಗನಬೆಟ್ಟದ ದಟ್ಟ ಕಾನನದ ಮಧ್ಯ ಗಿರಿಜನರಾದ ಸೋಲಿಗರು ಈತನನ್ನು ಪೂಜಿಸುವ ಪರಿ ವಿಭಿನ್ನ, ವಿಶಿಷ್ಟ.

ಈ ಕಾಡಿನಲ್ಲಿ ಹರಿಯುವ ಭಾರ್ಗವಿ ನದಿ ದಡದಲ್ಲಿ 500ಕ್ಕೂ ಹೆಚ್ಚು ವರ್ಷಗಳ ಇತಿಹಾವುಳ್ಳ ದೊಡ್ಡ ಸಂಪಿಗೆ ಮರವಿದ್ದು ಇದರ ಕೆಳಗೆ ಅನೇಕ ಲಿಂಗದಾಕಾರದ ಕಲ್ಲುಗಳು ಇವೆ. ಅನಾದಿ ಕಾಲದಿಂದಲೂ ಇಲ್ಲಿನ ಮೂಲ ನಿವಾಸಿಗಳಾದ ಸೋಲಿಗರು ಇದನ್ನು ಪೂಜಿಸುವ ವಾಡಿಕೆ ಇದೆ. ಪ್ರತಿ ವರ್ಷವೂ ಶಿವರಾತ್ರಿಯಂದು ಇಲ್ಲಿ ಇವರು ವಿಶೇಷ ಪೂಜೆ ಮಾಡುವ ಮೂಲಕ ಭಕ್ತಿ ಮೆರೆಯುತ್ತಾರೆ.

ದೊಡ್ಡ ಸಂಪಿಗೆ ಕಾಡು: ಪೂರ್ವ ಹಾಗೂ ಪಶ್ಚಿಮ ಘಟ್ಟಗಳ ಸಂಗಮ ಸ್ಥಾನವಾಗಿರುವ ಬಿಳಿಗಿರಿರಂಗನಬೆಟ್ಟ ವಿಭಿನ್ನ ಪರಿಸರವನ್ನು ಹೊಂದಿದೆ. ಒಂದೇ ಅರಣ್ಯದಲ್ಲಿ 6 ಕಾಡು ಪ್ರಬೇಧಗಳನ್ನು ಒಳಗೊಂಡ ಸ್ಥಳ ಇದು. ಸ್ಥಳಕ್ಕೂ ತನ್ನ ಪ್ರಾಕೃತಿಕ ಸೌಂದರ್ಯವನ್ನು ಭಿನ್ನ ಮಾಡಿಕೊಳ್ಳುತ್ತದೆ. ದಟ್ಟ ಅಡವಿಯ ನಡುವೆ ಇರುವ ನಿತ್ಯಹರಿದ್ವರ್ಣ ಕಾಡುಗಳ ಮಧ್ಯ ಭಾರ್ಗವಿ ನದಿ ಹರಿಯುತ್ತದೆ. ಮಾತೃಹತ್ಯೆಯ ಶಾಪ ವಿಮೋಚನೆಗಾಗಿ ಇಲ್ಲಿಗೆ ಪರಶುರಾಮ ಬಂದು ಸ್ನಾನ ಮಾಡಿ ದೋಷ ಪರಿಹಾರ ಮಾಡಿಕೊಂಡು ಶಿವನನ್ನು ಜಪಿಸಿದ ಎಂದು ಪೌರಾಣಿಕ ಹಿನ್ನೆಲೆ ಇರುವ ಸ್ಥಳವೇ ದೊಡ್ಡ ಸಂಪಿಗೆ ಕಾಡು.

ಹರಿ-ಹರರ ಆವಾಸ ಸ್ಥಾನ: ಸಾಮಾನ್ಯವಾಗಿ ಶೈವ ಅಥವಾ ವೈಷ್ಣವ ಪರಂಪರೆ ಒಂದೆಡೆ ಕಾಣುವುದು ಅಪರೂಪ. ಆದರೆ, ಬಿಳಿಗಿರಿ ರಂಗನ ಬೆಟ್ಟದಲ್ಲಿ ಇವೆರಡು ಪರಂಪರೆಯನ್ನು ಆರಾಧಿಸುವ ಜನರಿದ್ದಾರೆ. ಸೋಲಿಗರು ಬಿಳಿಗಿರಿರಂಗನಾಥಸ್ವಾಮಿಯನ್ನು ತಮ್ಮ ಜನಾಂಗದ ಕುಸುಮಾಲೆಯನ್ನು ವರಿಸಿದ ಹಿನ್ನೆಲೆಯಲ್ಲಿ ರಂಗಭಾವನೆಂದು ಪೂಜಿಸುತ್ತಾರೆ. ಅದರಂತೆ ಇಲ್ಲಿರುವ ದೊಡ್ಡ ಸಂಪಿಗೆಯ ಮರದ ಕೆಳಗಿನ ಲಿಂಗಗಳು ಹಾಗೂ ಗಂಗಾಧರೇಶ್ವರನ ತೇರನ್ನು ಸಿಂಗರಿಸಿ ಎಳೆಯುವ ಕೆಲಸವನ್ನು ಮಾಡುವ ಮೂಲಕ ಶಿವನ ಆರಾಧಕರೂ ಆಗುತ್ತಾರೆ.

ಪ್ರತಿ ಶಿವರಾತ್ರಿ ಜಾಗರಣೆ: ದೊಡ್ಡ ಸಂಪಿಗೆ ಮರದ ಬುಡದಲ್ಲಿರುವ ಲಿಂಗಗಳಿಗೆ ಶಿವರಾತ್ರಿಯಂದು ಅಭಿಷೇಕ ಮಾಡಿ ಪೂಜಿಸುವ ಸೋಲಿಗರು, ಇಡೀ ರಾತ್ರಿ ಇಲ್ಲೇ ತಂಗುತ್ತಾರೆ. ದೇವರಿಗೆ ಪೂಜೆ ಮಾಡಿ ತಮ್ಮ ಸಾಂಪ್ರದಾಯಿಕ ಗೊರುಕನ ನೃತ್ಯ, ದೇವರ ಕುಣಿತ ಹಾಗೂ ಮಹದೇಶ್ವರ ಜನಪದ ಗೀತೆಗಳ ಗಾಯನ  ಮಾಡುತ್ತಾರೆ. ಇದರೊಂ ದಿಗೆ ಅಲ್ಲೇ ಅಡುಗೆ ಮಾಡಿ ಸಾಮೂಹಿಕ ಪ್ರಸಾದ ಸ್ವೀಕರಿಸುವ ಪದ್ಧತಿಯೂ ರೂಢಿಯಲ್ಲಿದೆ. ನಂತರ ಮಾರನೇ ದಿನ ಬೆಟ್ಟದಲ್ಲಿರುವಗಂಗಾಧರೇಶ್ವರ ತೇರಿನಲ್ಲೂ ಭಾಗವಹಿಸಿ ಈ ಹಬ್ಬಕ್ಕೆ ಸಂಭ್ರಮದತೆರೆಯನ್ನು ಎಳೆಯುವ ಪದ್ಧತಿ ಅನಾದಿ ಕಾಲದಿಂದಲೂ ರೂಢಿಯಲ್ಲಿದೆ ಎನ್ನುತ್ತಾರೆ ಸ್ಥಳೀಯ ಸೋಲಿಗ ಮುಖಂಡ ಪುಟ್ಟರಂಗೇಗೌಡ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.