![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 13, 2023, 12:57 PM IST
ಯಳಂದೂರು: ತಾಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾದ ಬಿಳಿಗಿರಿ ರಂಗನಬೆಟ್ಟದ ದೇವಸ್ಥಾನಕ್ಕೆ ಬಸ್ ನಿಲ್ದಾಣದಿಂದ ತೆರಳುವ ರಸ್ತೆ ಮಾರ್ಗದ ಮಧ್ಯೆ ಬಂಡೆಯ ಆಂಜನೇಯ ಸ್ವಾಮಿ ಮೂರ್ತಿ ಮುಂಭಾಗ ಸಿದ್ಧಗೊಳ್ಳುತ್ತಿರುವ ಮಂಟಪವನ್ನು ತೆರವು ಮಾಡುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಹಾಗೂ ದೇಗುಲದ ಅಧಿಕಾರಿಗಳು ಮುಂದಾಗಿರು ವುದನ್ನು ಬೆಟ್ಟದ ಸಾರ್ವಜನಿಕರು, ಭಕ್ತಾರು ತಡೆದು ಅರಣ್ಯ ಇಲಾಖೆ ಸಿಬ್ಬಂದಿಯನ್ನು ತರಾಟೆ ತಗೆದುಕೊಂಡ ಘಟನೆ ನಡೆಯಿತು.
ತಾಲೂಕಿನ ಬಿಳಿಗಿರಿರಂಗನಬೆಟ್ಟದ ದೇಗು ಲದ ಸಮೀಪರುವ ಬಂಡೆಯಲ್ಲಿ ಶ್ರೀ ಆಂಜನೇಯ ಮೂರ್ತಿಯನ್ನು ಬಹಳಷ್ಟು ವರ್ಷದಿಂದ ಕೆತ್ತಿರುವ ಮೂರ್ತಿಯನ್ನು ಕಳೆದ ಹಲವು ವರ್ಷದ ಹಿಂದೆ ಬೆಟ್ಟಕ್ಕೆ ರಸ್ತೆ ಅಗಲೀಕರಣ ಮಾಡುವ ಸಮಯದಲ್ಲಿ ಬಂಡೆಯಲ್ಲಿ ಕೆತ್ತಿರುವ ಶ್ರೀ ಆಂಜನೇಯ ಮೂರ್ತಿ ಇರುವುದು ಬೆಳಕಿಗೆ ಬಂದಿತ್ತು. ಈ ವೇಳೆಯಿಂದ ಭಕ್ತರು ಆಂಜನೇಯ ಮೂತಿಗೆ ಪೂಜೆ ಸಲ್ಲಿಸಿ ತೆರಳುತ್ತಿದ್ದರು, ನಂತರ ಈ ಬಂಡೆಯಲ್ಲಿ ಇರುವ ಮೂರ್ತಿಗೆ ಬಿಸಿಲು, ಗಾಳಿ, ಮಳೆ, ಬೆಳೆಕು ಬೀಳುತ್ತಿರುವ ಕಂಡು ಕೆಲವು ಭಕ್ತರು ಮುಂಭಾಗ ನಾಲ್ಕು ಕಂಬಗಳನ್ನು ನಿರ್ಮಾಣ ಮಾಡಿಕೊಂಡು ಮಂಟಪವನ್ನು ನಿರ್ಮಿಸಿ ಪೂಜೆ ಸಲ್ಲಿಸುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಮೂಲಕ ಮಂಟಪವನ್ನು ತೆರವು ಮಾಡುವ ಕಾರ್ಯಾ ಚರಣೆ ಮುಂದಾಗಿರುವುದನ್ನು ಕಂಡು ಬೆಟ್ಟದ ಸಾರ್ವಜನಿಕರು ಅರಣ್ಯ ಇಲಾಖೆ ಹಾಗೂ ದೇಗುಲದ ಆಡಳಿತ ವರ್ಗ ಅಧಿಕಾರಿಗಳ ತರಾಟೆ ತಗೆದುಕೊಂಡು ಕಾರ್ಯಾಚರಣೆಯನ್ನು ನಿಲ್ಲಿಸಿದರು.
ತಾಲೂಕಿನ ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತಲ್ಲೂ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವರಿಗೆ ಬೆಟ್ಟದ ಸುತ್ತಲ್ಲೂ 7 ವಾನರು ದೇಗುಲ ವಿಗ್ರಹಗಳು ಇರುವುದು ಐತಿಹಾಸಿಕ ಹಿನ್ನೆಲೆ ಇದೆ. ಈ ದೇಗುಲದ ಸಮೀಪದಲ್ಲಿ ಬಂಡೆಯಲ್ಲಿ ರಸ್ತೆ ವಿಸ್ತರಣೆ ಮಾಡುವ ಸಮಯದಲ್ಲಿ ಪ್ರತ್ಯೇಕವಾಗಿರುವ ಶ್ರೀಆಂಜನೇಯ ಮೂರ್ತಿಗೆ ಹಲವು ವರ್ಷಗಳಿಂದಲ್ಲೂ ಬಿಸಿಲು, ಮಳೆ, ಸಮಯದಲ್ಲಿ ಪೂಜೆ ಸಲ್ಲಿಸಲು ತೊಂದರೆಯಾಗುವ ಹಿನ್ನೆಲೆಯಲ್ಲಿ ಭಕ್ತರು ಸ್ವಂತ ಹಣದಿಂದ ರಸ್ತೆ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗ ರೀತಿಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ಮಂಟಪವನ್ನು ತೆರವು ಮಾಡುವುಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಮುಂದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಭಕ್ತರಾದ ಕಾಂತರಾಜು, ಶ್ರೀನಾಥ್, ರಮೇಶ್ ಬಾಬು, ಗ್ರಾ.ಪಂ.ಸದಸ್ಯ ಪ್ರದೀಪ್ ಕುಮಾರ್, ನಾಗೇಶ್, ವೆಂಕಟೇಶ್, ಇತರರು ಆಗ್ರಹಿಸಿದ್ದಾರೆ.
ಬೆಟ್ಟದ ದೇವಸ್ಥಾನಕ್ಕೆ ರಸ್ತೆ ಮಾರ್ಗದ ಮೂಲಕ ಬರುವ ಸ್ಥಳದ ವಾಹನ ಸಂಚರಿಸಲು ತೊಂದರೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿರುವ ಹಿನ್ನೆಲೆ ಯಲ್ಲಿ ಭೇಟಿ ನೀಡಿ ಪರಿಶೀಲಿಸಲಾಗಿದೆ. – ಮೋಹನ ಕುಮಾರ್, ಇಒ, ಬಿಳಿಗಿರಿರಂಗನಾಥಸ್ವಾಮಿ ಬೆಟ್ಟ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.