ವೈಭವದ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ


Team Udayavani, Feb 11, 2020, 3:00 AM IST

vybhavada

ಕೊಳ್ಳೇಗಾಲ: ಪಟ್ಟಣದ ಕಾವೇರಿ ರಸ್ತೆಯಲ್ಲಿರುವ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದ ಮುಂಭಾಗ ಧ್ವಜಗಳಿಂದ ಅಲಂಕೃತಗೊಂಡಿದ್ದ ಲಕ್ಷ್ಮೀ ನಾರಾಯಣಸ್ವಾಮಿ ದಿವ್ಯರಥೋತ್ಸವ ವಿಜೃಂಭಣೆಯಿಂದ ಸೋಮವಾರ ಜರುಗಿತು. ಸೋಮವಾರ ಬೆಳಗ್ಗೆ 10.15ಕ್ಕೆ ಮೀನ ಲಗ್ನದಲ್ಲಿ ರಥಸ್ಥಂ ಕೇಶವಂ ದೃರ್ಷ್ಟ್ಯಾ ಪುನರ್ಜನ್ಮನವಿದ್ಯತೇ ಎಂಬ ಮರ್ಯಾದೆಯಲ್ಲಿ ದಿವ್ಯರಥೋತ್ಸವ ಮತ್ತು ಸಂಜೆ ಧೂಪ ಉತ್ಸವ ನಡೆಯಿತು.

ರಥೋತ್ಸವಕ್ಕೆ ಶಾಸಕ ಮಹೇಶ್‌ ಚಾಲನೆ: ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ರಥೋತ್ಸವ ಅದ್ಧೂರಿಯಾಗಿ ನಡೆಸಲು ಉಪ ವಿಭಾಗಾಧಿಕಾರಿ ನಿಖೀತ ಎಂ.ಚಿನ್ನಸ್ವಾಮಿ, ತಹಶೀಲ್ದಾರ್‌ ಕೆ.ಕುನಾಲ್‌ ಅವರ ಆದೇಶದ ಮೇರೆಗೆ ಖಜಾನೆಯಲ್ಲಿಡಲಾಗಿದ್ದ ದೇವರ ಚಿನ್ನಾಭರಣಗಳನ್ನು ವಿಗ್ರಹಕ್ಕೆ ಅಲಂಕಾರಗೊಳಿಸಿ ನಂತರ ದೇವಾಲಯದ ಪ್ರಧಾನ ಅರ್ಚಕ ಆರ್‌.ಶೇಷಾದ್ರಿ ಭಟ್‌ ವಿಶೇಷ ಪೂಜೆ ಸಲ್ಲಿಸಿದ ನಂತರ ಶಾಸಕ ಎನ್‌.ಮಹೇಶ್‌ ಚಾಲನೆ ನೀಡಿದರು.

ಪ್ರಸಾದ ವಿತರಣೆ: ಅಲಂಕೃತಗೊಂಡ ರಥದ ಮೇಲೆ ದೇವರ ವಿಗ್ರಹವನ್ನು ಇರಿಸಿ ಮಹಾಮಂಗಳಾರತಿಯ ನಂತರ ಬಂದಿದ್ದ ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು.

ದೇವರಿಗೆ ದವಸ ಧಾನ್ಯ ವಿತರಣೆ: ಜಿಲ್ಲಾದ್ಯಂತ ವಿವಿಧ ತಾಲೂಕು ಕೇಂದ್ರಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಸೇರಿ ರಥವನ್ನು ಎಳೆಯಲು ಆರಂಭಿಸಿದರೆ ಮತ್ತೆ ಹಲವು ಭಕ್ತರು ರಥಕ್ಕೆ ಹಣ್ಣು-ದವನ ಮತ್ತು ಜಮೀನುಗಳಲ್ಲಿ ಬೆಳೆದಿದ್ದ ವಿವಿಧ ದವಸ-ಧಾನ್ಯಗಳನ್ನು ರಥಕ್ಕೆ ಅರ್ಪಿಸಿ ಭಕ್ತಿ ಪರಕಾಷ್ಠೆ ಮೆರೆದರು. ದೇವಾಲಯದ ಮುಂಭಾಗ ರಥೋತ್ಸವ ಆರಂಭಿಸಿದ ಭಕ್ತರು ರಥದ ಬೀದಿಯ ಸುತ್ತ ರಥ ಎಳೆದು ದೇವಾಲಯ ಬಳಿ ತಂದು ನಿಲುಗಡೆ ಮಾಡಿದ ಭಕ್ತರು ರಥೋತ್ಸವಕ್ಕೆ ವಿವಿಧ ಬಗೆ ಬಗೆಯ ಧೂಪದೀಪಗಳನ್ನು ಹಚ್ಚಿ ಭಕ್ತಿ ಮೆರೆದರು.

ವಿಶೇಷ ಪೂಜೆ: ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಲ್ಲಿ ಫೆ.3ರಂದು ಸೋಮವಾರ ಉತ್ಸವಾಂಗ ಪಂಚಾಮೃತದೊಂದಿಗೆ ರಥೋತ್ಸವದ ಪೂಜೆ ಆರಂಭಗೊಡು, 4 ರಂದು ಮಂಗಳವಾರ ಧ್ವಜಾರೋಹಣ, 5 ರಂದು ಹಂಸವಾಹನೋತ್ಸವ, 6ರಂದು ಶೇಷವಾಹನ ಉತ್ಸವ, 7 ರಂದು ದೇವರೋತ್ಸವ ಹಾಗೂ ಸೌಮ್ಯ ಲಕ್ಷ್ಮೀ ಕಲ್ಯಾಣೋತ್ಸವ, 8 ರಂದು ಪ್ರಹ್ಲಾದಪರಿಫ‌ಲನಾ ನಂತರ ಗರುಡೋತ್ಸವ, 9 ರಂದು ಕವನ ಬಲಿಪ್ರಧಾನ ಮತ್ತು ವಸಂತೋತ್ಸವ, ಗಜೇಂದ್ರಮೋಕ್ಷ, 10 ರಂದು ಪುನರ್ಜನ್ಮ ವಿದ್ಯತೇ ಎಂಬ ಮರ್ಯಾದೆಯಲ್ಲಿ ದಿವ್ಯ ಬೃಹತ್‌ ರಥೋತ್ಸವ ಬೆಳಗ್ಗೆ ಆರಂಭಗೊಂಡರೆ ಸಂಜೆ ಗೂಳಿ ಉತ್ಸವ ಜರುಗಲಿದೆ. 11 ರಂದು ಮಂಟಪೋತ್ಸವ, 12 ರಂದು ಅಶ್ವವಾಹನೋತ್ಸವ, 13 ರಂದು ಮಹಾಭಿಷೇಕದೊಂದಿಗೆ ರಥೋತ್ಸವಕ್ಕೆ ತೆರೆಬಿಳಲಿದೆ.

ಪ್ರಸಾದ ವಿತರಣೆ: ದೇವಸ್ಥಾನದ ವತಿಯಿಂದ ರಥೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಪ್ರಸಾದವನ್ನು ವಿತರಣೆ ಮಾಡಲಾಯಿತು.

ಪಾನಕ ಮಜ್ಜಿಗೆ ವಿತರಣೆ: ರಥೋತ್ಸವ ಅಂಗವಾಗಿ ರಥದ ಬೀದಿಯ ನಿವಾಸಿಗಳು ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಿದರು.

ಬಿಗಿ ಬಂದೋಬಸ್ತ್: ರಥೋತ್ಸವ ಅಂಗವಾಗಿ ಡಿವೈಎಸ್‌ಸ್ಪಿ ನವೀನ್‌ಕುಮಾರ್‌, ಸರ್ಕಲ್‌ ಇನ್‌ಸ್ಟೆಕ್ಟರ್‌ ಶ್ರೀಕಾಂತ್‌, ಸಬ್‌ಇನ್‌ಸ್ಪೆಕ್ಟರ್‌ಗಳಾದ ರಾಜೇಂದ್ರ, ಅಶೋಕ್‌ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತು ಮಾಡಿ ರಥೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗ್ರತೆವಹಿಸಿದ್ದರು.

ರಥೋತ್ಸವದಲ್ಲಿ ಶಾಸಕ ಎನ್‌.ಮಹೇಶ್‌, ತಹಶೀಲ್ದಾರ್‌ ಕೆ.ಕುನಾಲ್‌, ನಗರಸಭೆ ಸದಸ್ಯರಾದ ಜಿ.ಪಿ.ಶಿವಕುಮಾರ್‌, ನಾಗೇಂದ್ರ, ಮನೋಹರ್‌, ಧರಣೇಶ್‌, ಪರಮೇಶ್ವರಯ್ಯ, ರಾಜಸ್ವ ನಿರೀಕ್ಷಕ ರಾಜಶೇಖರ್‌, ಜಿಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವ, ಮುಖಂಡರಾದ ನರಸಿಂಹನ್‌ ಇತರರು ಇದ್ದರು.

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Bandipur ಬೇಟೆಗೆ ಬಂದ ಹುಲಿಗೆ ಝಾಡಿಸಿ ಒದ್ದ ಕಾಡೆಮ್ಮೆ!

Bandipur ಬೇಟೆಗೆ ಬಂದ ಹುಲಿಗೆ ಝಾಡಿಸಿ ಒದ್ದ ಕಾಡೆಮ್ಮೆ!

Gundlupete: ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ಮಹತ್ಯೆ

Gundlupete: ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ಮಹತ್ಯೆ

Gundlupete: ಟ್ರ್ಯಾಕ್ಟರ್ ನಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತು ಸಾಗಣೆ… ಇಬ್ಬರ ಬಂಧನ

Gundlupete: ಟ್ರ್ಯಾಕ್ಟರ್ ನಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತು ಸಾಗಣೆ… ಇಬ್ಬರ ಬಂಧನ

Kollegala ಅಕ್ರಮ ಮದ್ಯ ಮಾರಾಟಕ್ಕೆ ಸಾಥ್‌: ಪೇದೆಗಳಿಬ್ಬರ ಅಮಾನತು

Kollegala ಅಕ್ರಮ ಮದ್ಯ ಮಾರಾಟಕ್ಕೆ ಸಾಥ್‌: ಪೇದೆಗಳಿಬ್ಬರ ಅಮಾನತು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.