ನದಿಗಳ ಪುನಶ್ಚೇತನಕ್ಕೆ ಪ್ರತ್ಯೇಕ ಸಂಸ್ಥೆ ಅಗತ್ಯ 


Team Udayavani, Jan 3, 2022, 12:59 PM IST

ನದಿಗಳ ಪುನಶ್ಚೇತನಕ್ಕೆ ಪ್ರತ್ಯೇಕ ಸಂಸ್ಥೆ ಅಗತ್ಯ 

ಚಿಕ್ಕಬಳ್ಳಾಪುರ: ಜಿಲ್ಲೆಯ ನಂದಿ ಬೆಟ್ಟಗಳ ಶ್ರೇಣಿಯಲ್ಲಿಉಗಮವಾಗುವ ಆರು ನದಿ ನಿರ್ವಹಿಸಲು ಸರ್ಕಾರಒಂದು ಸಂಸ್ಥೆ ರಚಿಸದಿದ್ದರೆ, ನೀರಿನ ಸುತ್ತಕೇಂದ್ರೀಕೃತವಾಗಿರುವ ನಮ್ಮ ಸಂಸ್ಕೃತಿಯು ಕ್ರಮೇಣ ಅವನತಿ ಹೊಂದುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್‌¤ ರಾಜ್‌ನ ಸಂಪನ್ಮೂಲ ವ್ಯಕ್ತಿ ಪಾರ್ಥಜಿ ತಿಳಿಸಿದರು.

ನಗರದ ಪಾಪಾಗ್ನಿ ಮಠದಲ್ಲಿ ಜಿಪಂ, ಫೌಂಡೇಷನ್‌ ಫಾರ್‌ ಎಕಲಾಜಿಕಲ್‌ ಸೆಕ್ಯೂರಿಟಿ ಆಯೋಜಿಸಿದ್ದಪಾಪಾಗ್ನಿ ನದಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ,ಪಾಪಾಗ್ನಿಯು ಪಾಪ ಮತ್ತು ಅಗ್ನಿ ಪದಗಳಸಂಯುಕ್ತವಾಗಿದೆ. ದಂತಕಥೆಯ ಪ್ರಕಾರ, ಈಪ್ರದೇಶದಲ್ಲಿ ವಾಸಿಸುವ ಚೆಂಚಸ್‌ ಎಂಬ ಮುಗ್ಧಬುಡಕಟ್ಟು ಮುಖ್ಯಸ್ಥನನ್ನು ಒಮ್ಮೆ ಕೊಂದ ರಾಜನುತನ್ನ ಪಾಪಕ್ಕೆ ಶಿಕ್ಷೆ ಆಗಿ ಕುಷ್ಠರೋಗ ಪೀಡಿತನಾಗಿದ್ದನು.ಅವನು ಪಾಪಾಗ್ನಿ ನದಿಯಲ್ಲಿ ಸ್ನಾನ ಮಾಡಿದನಂತರವೇ ಅವನು ಬಾಧೆಯಿಂದಗುಣಮುಖನಾದನೆಂದು ಭಾವಿಸಲಾಗಿದೆ. ಆ ನದಿಯು ಅವನ ಪಾಪವನ್ನು ಬೂದಿ ಮಾಡಿತು ಎಂದು ಹೇಳಲಾಗುತ್ತದೆ. ಹೀಗಾಗಿ ಪಾಪಾಗ್ನಿ ಎಂಬ ಹೆಸರು ಪಡೆದುಕೊಂಡಿದೆ ಎಂದು ತಿಳಿಸಿದರು.

ಪಾಪಾಗ್ನಿ ನದಿಯು ನಂದಿ ಬೆಟ್ಟದಲ್ಲಿ ಹುಟ್ಟುತ್ತದೆ. ಇದು ದೀರ್ಘ‌ಕಾಲಿಕ ನದಿ ಅಲ್ಲ. ಅದರ ಜಲಾನಯನ ಪ್ರದೇಶದಲ್ಲಿ ವಾರ್ಷಿಕ 60-80 ಸೆಂ.ಮೀ. ಮಳೆ ಪಡೆಯುತ್ತದೆ. ಇದು ಮಣ್ಣಿನ ಸವಕಳಿಯಿಂದ ಆಗ್ಗಾಗ್ಗೆಪರಿಣಾಮ ಬೀರುವ ಗ್ರಾನೈಟಿಕ್‌ ನಿಕ್ಷೇಪಗಳು, ಕೆಂಪುಮಣ್ಣು ಪ್ರದೇಶದ ಮೂಲಕ ಹಾದುಹೋಗುತ್ತದೆ ಎಂದು ಹೇಳಿದರು.

ಪೆನ್ನಾರ ನದಿ ಸೇರುತ್ತೆ: ಇದು ಕರ್ನಾಟಕದ ಚಿಕ್ಕಬಳ್ಳಾಪುರ, ಕೋಲಾರ, ಆಂಧ್ರಪ್ರದೇಶದಚಿತ್ತೂರು, ಅನಂತಪುರ, ಕಡಪ ಜಿಲ್ಲೆಗಳಲ್ಲಿ ಹರಿಯುತ್ತದೆ. ಈ ನದಿಯ ಜಲಾನಯನ ಪ್ರದೇಶವು16,500 ಕಿ.ಮೀ. ವಿಸ್ತೀರ್ಣ ಹೊಂದಿದೆ. ಇದು ಆಂಧ್ರಪ್ರದೇಶದ ಕಮಲಾಪುರಂ (ಗಂಡಿ)ಬಳಿ ಪೆನ್ನಾರ ನದಿ ಸೇರುತ್ತದೆ ಎಂದು ತಿಳಿಸಿದರು.

ನೀರು ಸಂರಕ್ಷಣಾ ರಚನೆ ಹಾಳು: ಪಾಪಾಗ್ನಿ ಅಲ್ಲದೆ, ಅರ್ಕಾವತಿ, ಚಿತ್ರಾವತಿ, ಉತ್ತರ ಪಿನಾಕಿನಿ ಅಥವಾಪೆನ್ನಾರ್‌, ದಕ್ಷಿಣ ಪಿನಾಕಿನಿ ಅಥವಾ ಪೊನ್ನಯ್ಯರ್‌,ಪಾಲಾರ್‌ ನದಿ ಈ ನಂದಿಬೆಟ್ಟದ ಶ್ರೇಣಿಯಿಂದ ಹುಟ್ಟುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮಿತಿ ಮೀರಿದಮರಳು ಗಣಿಗಾರಿಕೆಯಿಂದ ನದಿಯು ತನ್ನ ಅಸ್ತಿತ್ವಕಳೆದುಕೊಳ್ಳುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ.ನದಿ ಸಮೀಪ ಇರುವ ನೀರು ಸಂರಕ್ಷಣಾ ರಚನೆಗಳನ್ನು ಹಾನಿಗೊಳಿಸುತ್ತಿದೆ ವಿಷಾದ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಜಿಪಂ ಮುಖ್ಯ ಯೋಜನಾಧಿಕಾರಿ ಧನು ರೇಣುಕಾ ಮಾತನಾಡಿ, ಅಧುನಿಕ ಯುಗದಿಂದ ನಾವೆಲ್ಲ ಹಳ್ಳಿ ಸೊಗಡು ಮರೆಯುತ್ತಿದ್ದೇವೆ. ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದೇವೆ. ಬರೀಮೆಕಾನಿಲ್‌ ಜೀವನ ಮಾತ್ರ ನಗರಗಳಲ್ಲಿ ನೋಡಲು ಸಾಧ್ಯವಿದೆ. ಸ್ನೇಹ, ಪ್ರೀತಿ, ಬಂಧುತ್ವ, ನಂಬಿಕೆ,ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುವ ಒಳ್ಳೆಯವಾತಾವರಣ ಗ್ರಾಮೀಣ ಭಾಗದಲ್ಲಿ ಮಾತ್ರ ನೋಡಬಹುದು ಎಂದು ಹೇಳಿದರು.

ಪ್ರಾಕೃತಿಕ ಸಂಪತ್ತು ಕಾಪಾಡುವುದು ಮುಖ್ಯ: ಬಾಪೂಜಿಯವರ ಕನಸು ಕೂಡ ಹಳ್ಳಿ ಕಟ್ಟುವುದೇಆಗಿತ್ತು. ಗ್ರಾಮಗಳ ಉದ್ದಾರವಾಗದೇ ಈ ದೇಶದಅಭಿವೃದ್ಧಿ ಶೂನ್ಯ ಎಂದು ಸಾರಿದ್ದರು. ಗ್ರಾಮಗಳು ಅಭಿವೃದ್ಧಿ ಆಗಬೇಕಾದರೆ ಗ್ರಾಮಗಳಲ್ಲಿ ಇರುವ ಪ್ರಾಕೃತಿಕ ಸಂಪತ್ತು ಕಾಪಾಡುವುದು ಮುಖ್ಯ. ಈ

ನಿಟ್ಟಿನಲ್ಲಿ ಗ್ರಾಮ ವ್ಯವಸ್ಥೆಗಳನ್ನು ಬಲಪಡಿಸುವ ಮೂಲಕ ಸಾಮೂಹಿಕ ಆಸ್ತಿ ಸಂರಕ್ಷಿಸಿ ಅಭಿವೃದ್ಧಿಪಡಿಸಲು ಎಫ್‌ಇಎಸ್‌ ಸಂಸ್ಥೆ ಶ್ರಮಿಸುತ್ತಿದೆ. ಗ್ರಾಮಸ್ಥರೆಲ್ಲರೂ ಒಂದಾಗಿ ಈ ಆಸ್ತಿ ಉಳಿಸಿ ಅಭಿವೃದ್ಧಿಪಡಿಸುವ ಕಡೆ ನಮ್ಮ ಚಿಂತನೆ ಸಾಗಬೇಕು ಎಂದು ವಿವರಿಸಿದರು.

ನೀರಿನ ಪ್ರಾಮುಖ್ಯತೆ ಅರಿಯಬೇಕಿದೆ: ಫೌಂಡೇಶನ್‌ ಫಾರ್‌ ಎಕಲಾಜಿಕಲ್‌ ಸೆಕ್ಯೂರಿಟಿ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಆಗಟಮಡಕ ರಮೇಶ್‌ ಮಾತನಾಡಿ, ಮಾನವನ ಜೀವಿಸುವುದಕ್ಕೆ ಅಗತ್ಯವಾಗಿಬೇಕಾಗಿರುವುದಲ್ಲಿ ಗಾಳಿಯ ನಂತರದ ಸ್ಥಾನ ನೀರು. ಅದರ ಪ್ರಾಮುಖ್ಯತೆ ಅರಿಯಬೇಕಾಗಿದೆ. ಭೂಮಿಮೇಲೆ ಶೇ.70 ನೀರು ಇದ್ದರೂ ಪರದಾಟ ನಿಂತಿಲ್ಲ. ಅದರಲ್ಲಿ ಬಳಕೆಗೆ ಬರುವುದು ಶೇ.3 ಮಾತ್ರ. ಅದರಲ್ಲೂ ಶೇ.2 ಮಂಜುಗಡ್ಡೆ ಆಗಿದೆ ಎಂದು ಹೇಳಿದರು.

1,700 ವರ್ಷ ಇತಿಹಾಸ: ಉಳಿದ ಶೇ.1 ಸಿಹಿ ನೀರಿನಲ್ಲಿ ಕೃಷಿ, ಪಶು ಸಂಗೋಪನೆ, ಕುಡಿಯಲು, ಮನೆ ಬಳಕೆಗೆ, ಕಾರ್ಖಾನೆ ಮುಂತಾದವುಗಳಿಗೂ ಪೂರೈಕೆ ಆಗಬೇಕು. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ನಾಡಲ್ಲಿ ಕೆರೆನೀರಾವರಿ ಕೃಷಿ ವ್ಯವಸ್ಥೆಗೆ 1,700 ವರ್ಷ ಇತಿಹಾಸವಿದೆ ಎಂದು ತಿಳಿಸಿದರು.

ಎಫ್‌ಇಎಸ್‌ ಸಂಸ್ಥೆಯ ಹಿರಿಯ ಯೋಜನಾ ವ್ಯವಸ್ಥಾಪಕ ಲೋಕೇಶ್‌, ಮುದ್ದೇನಹಳ್ಳಿ ಗ್ರಾಪಂ ಅಧ್ಯಕ್ಷಮುನಿನಾರಾಯಣಪ್ಪ, ಪಿಡಿಒ ತಿಪ್ಪಯ್ಯ, ಸದಸ್ಯೆಭಾಗ್ಯಮ್ಮ, ಶಿಡ್ಲಘಟ್ಟ ತಾಲೂಕು ಕೊತ್ತನೂರು ಗ್ರಾಪಂಅಧ್ಯಕ್ಷ ಮಂಜುನಾಥ್‌, ಎಫ್‌ಇಎಸ್‌ ಸಂಸ್ಥೆಯ ತಂಡದನಾಯಕ ವಿಜಯ್‌ಕುಮಾರ್‌, ರೀವಾರ್ಡ್ಸ್‌ ಸಂಸ್ಥೆಯಮುಖ್ಯಸ್ಥ ಹರಿಪ್ರಸಾದ್‌, ನಂದೀಶ್ವರ ರೂರಲ್‌ ಟ್ರಸ್ಟ್‌ನಈಶ್ವರಯ್ಯ, ವೆಂಕಟೇಶ್‌, ಬೂದಾಳ ರಾಮಣ್ಣ, ಎಫ್‌ಇಎಸ್‌ ಸಂಸ್ಥೆಯ ಸಂಯೋಜಕಿ ನಿಖತ್‌ ಪರ್ವೀಣ್‌,ನಯನ್‌ರೆಡ್ಡಿ, ಸಿಬ್ಬಂದಿ ಪಲ್ಲವಿ, ಕುಮಾರ್‌, ಉತ್ತನ್ನ, ಸುನೀಲ್‌, ಸೌಭಾಗ್ಯ, ಲೀಲಾವತಿ, ಸಿ.ನಾರಾಯಣಸ್ವಾಮಿ,ಗೋಪಿ, ಮುನಿರಾಜ್‌, ಸುಬ್ರಮಣಿ, ವಿಶ್ವನಾಥ್‌,ಪಂಚಾಯ್ತಿ ಸಂಪನ್ಮೂಲ ವ್ಯಕ್ತಿಗಳಾದ ವಿ.ಎಲ್‌.ಮಧು,ರಾಜಮ್ಮ, ಚಂದ್ರನಾಯಕ್‌, ರೇಖಾ ಮತ್ತಿತರರು ಭಾಗವಹಿಸಿದರು.

 

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ

Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ

MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್‌

MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್‌

chintamai-Murder

Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು! 

10-gudibanda

Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ

Sudhakar–sandeep-Reddy

BJP Rift: ಸಂಸದ ಕೆ.ಸುಧಾಕರ್‌ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.