![Santhe-last](https://www.udayavani.com/wp-content/uploads/2025/02/Santhe-last-415x249.jpg)
![Santhe-last](https://www.udayavani.com/wp-content/uploads/2025/02/Santhe-last-415x249.jpg)
Team Udayavani, May 25, 2019, 2:32 PM IST
ಗೌರಿಬಿದನೂರು ತಾ.ಇಡಗೂರು ದಲಿತ ಕಾಲೋನಿಯಲ್ಲಿ ಕುರಿ ಮತ್ತು ಮೇಕೆಗಳ ಶೆಡ್ ನಿರ್ಮಿಸಿ ಕೊಳ್ಳಲು 20 ಜನ ಫಲಾನುಭವಿಗಳಿಗೆ ತಾಪಂ ಸದಸ್ಯ ನರಸಿಂಹಮೂರ್ತಿ ಸಿಮೆಂಟ್ ವಿತರಿಸಿದರು.
ಗೌರಿಬಿದನೂರು: ಸರ್ಕಾರದಿಂದ ಬರುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಂಡು ಕುರಿ ಮತ್ತು ದನಗಳ ಶೆಡ್ಡುಗಳನ್ನು ನಿರ್ಮಿಸಿಕೊಳ್ಳುವ ಮೂಲಕ ಬದುಕಿನಲ್ಲಿ ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿರಿ ಎಂದು ತಾಲೂಕು ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ ತಿಳಿಸಿದರು.
ತಾಲೂಕಿನ ಇಡಗೂರು ಗ್ರಾಮದ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ಸುಮಾರು 40 ಜನಕ್ಕೆ ಮಂಜೂರಾಗಿರುವ ದನಗಳ ಶೆಡ್ ಮತ್ತು ಕುರಿಗಳ ಶೆಡ್ಗಳ ನಿರ್ಮಾಣಕ್ಕೆ ನರೇಗಾದಲ್ಲಿ ಬಿಡುಗಡೆ ಯಾಗಿರುವ ಅನುದಾನಗಳ ಸಂಬಂಧದ ಕಾಮಗಾರಿ ಪ್ರಾರಂಭಿಸಲು ಉಚಿತವಾಗಿ ಸಿಮೆಂಟ್ ವಿತರಿಸಿದ ನಂತರ ಅವರು ಮಾತನಾಡಿದರು.
ಇಡಗೂರು ಗ್ರಾಮದ ದಲಿತ ಕಾಲೋನಿಯಲ್ಲಿನ 40 ಜನರಿಗೆ ದನ ಮತ್ತು ಕುರಿಗಳ ಶೆಡ್ಗಾಗಿ ಪ್ರತಿ ಯೋರ್ವರಿಗೆ 43 ಸಾವಿರ ರೂ. ಬಿಡುಗಡೆಯಾಗಿದ್ದು, ಮೊದಲ ಹಂತ ದಲ್ಲಿ 20 ಜನರು ಕಾಮಗಾರಿ ಪ್ರಾರಂಭಿ ಸುತ್ತಿದ್ದು ಪ್ರಾರಂಭಿಸಲು ಅವರಿಗೆ ಉಚಿತವಾಗಿ ಸಿಮೆಂಟ್ ನೀಡಲಾಗಿದೆ. ಸರ್ಕಾರಿ ಯೋಜನೆಗಳನ್ನು ಸಂಪೂರ್ಣ ವಾಗಿ ಸದುಪಯೋಗ ಪಡಿಸಿಕೊಳ್ಳಲು ಪ್ರೋತ್ಸಾಹ ನೀಡಿದಂತಾಗಿದೆ ಎಂದರು.
ಉದ್ದೇಶಿತ ಯೋಜನೆ ಜಾರಿಯಾಗುವ ಜೊತೆಗೆ ಜಾನು ವಾರುಗಳನ್ನು ಉಳಿಸಬಹುದು ಎಂಬ ಕಾರಣಕ್ಕೆ ನಿರ್ಮಾಣಕ್ಕೆ ಚಾಲನೆ ನೀಡ ಲಾಗಿದೆ ಎಂದರು. ಸತೀಶ್ ಕುಮಾರ್, ಶ್ರೀಧರ್, ಶ್ರೀನಿವಾಸ್, ರಾಜಕುಮಾರ್, ಗಂಗರಾಜ್, ಚಿರಂಜೀವಿ ಉಪಸ್ಥಿತರಿದ್ದು ಕಾರ್ಯ ಕ್ರಮಕ್ಕೆ ಪ್ರೋತ್ಸಾಹ ನೀಡಿದರು.
Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ
MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್
Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು!
Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ
BJP Rift: ಸಂಸದ ಕೆ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ
You seem to have an Ad Blocker on.
To continue reading, please turn it off or whitelist Udayavani.