ಬಾಗೇಪಲ್ಲಿ: ವ್ಯಕ್ತಿ ಕೊಲೆಗೈದಿದ್ದ ನಾಲ್ವರ ಬಂಧನ
Team Udayavani, Oct 6, 2020, 1:21 PM IST
ಬಾಗೇಪಲ್ಲಿ: ಅನೈತಿಕ ಸಂಬಂಧ ಹಿನ್ನಲೆ ಉತ್ತರಪ್ರದೇಶದ ರಾಜ್(35) ಎಂಬಾತನನ್ನು ಕೊಲೆಮಾಡಿದ ಪ್ರಕರಣ ಭೇದಿಸುವಲ್ಲಿ ಬಾಗೇಪಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಬಿ.ಕೆ.ಮಿಥುನ್ ಕುಮಾರ್ ತಿಳಿಸಿದರು.
ಸೋಮುವಾರ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಪೀಣ್ಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮೃತ ರಾಜ್ಗೂ ಕುಖ್ಯಾತ ರೌಡಿ ಸಲೀಂ ಪತ್ನಿ ಶಹೀನಾಗೂ ಅನೈತಿಕ ಸಂಬಂಧವಿತ್ತು.ಇದರಿಂದ ರೌಡಿ ಸಲೀಂ ಬಾಗೇಪಲ್ಲಿ ಪಟ್ಟಣದ ನಾರಾಯಣಸ್ವಾಮಿ, ಚೇತನ್ ಕುಮಾರ್, ವಿನೋದ ಕುಮಾರ್, ಬಾಲಚಂದ್ರ ಜತೆ ಸೇರಿ ರಾಜ್ನನ್ನು ಕೊಲೆ ಮಾಡಲು ಪ್ಲಾನ್ ಹಾಕಿ ಆಂಧ್ರಪ್ರದೇಶದ ಹಿಂದೂಪುರ ತಾಲೂಕಿನ ಚಿಲಮತ್ತೂರು ಗ್ರಾಮದ ಪತ್ನಿ ಶಹೀನಾ ಕೈಯಲ್ಲಿ ರಾಜ್ಗೆ ಕರೆ ಮಾಡಿಸಿ ಚಿಕ್ಕಬಳ್ಳಾಪುರ ಆರ್ಟಿಒ ಕಚೇರಿ ಬಳಿಕರೆಸಿ ಕಾರಿನ ಚಾಲಕನಂತೆ ನಟಿಸುತ್ತಿದ್ದ ಶಹೀನಾ ಪತಿ ಸಲೀಂ 4 ಸಹಚರರೊಂದಿಗೆ ರಾಜ್ನನ್ನು ಕಾರಿನಲ್ಲಿಕೂರಿಸಿಕೊಂಡು ಬಾಗೇಪಲ್ಲಿ ಪಟ್ಟಣದ ಹೊರವಲಯದ ಪರಗೋಡು ಸಮೀಪ ಚಿತ್ರಾ ವತಿ ಬ್ಯಾರೇಜ್ ಬಳಿ ಕರೆದುಕೊಂಡು ಡ್ಯಾಗರ್, ಚಾಕು, ಚೂರಿಗಳಿಂದ ತೀವ್ರವಾಗಿ ಹಲ್ಲೆ ಮಾಡಿ ಕೊಲೆ ಮಾಡಿ ಶವವನ್ನು ಬಿಸಾಕಿ ಹೋಗಿದ್ದರು.
ರೌಡಿ ಬಾಂಬೆ ಸಲೀಂ ಹೈದರಾಬಾದ್, ಮುಂಬೈ, ಸೇರಿದಂತೆ ಒಟ್ಟು 38 ಕೊಲೆ ಸುಲಿಗೆ ದರೋಡೆ ಕೊಲೆಗೆ ಪ್ರಯತ್ನ, ಪ್ರಕರಣಗಳಲ್ಲಿ ಭಾಗಿಯಾಗಿದ್ದು ತಲಘಟ್ಟಪುರ ಠಾಣೆ ವ್ಯಾಪ್ತಿಯ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಇರುತ್ತಾನೆ. ಸಲೀಂನನ್ನು ಬಾಗೇಪಲ್ಲಿ ಠಾಣೆ ಕಸ್ಟಡಿಗೆ ನೀಡಬೇಕು ಎಂದು ಕೋರ್ಟ್ನಲ್ಲಿ ಮನವಿ ಮಾಡಲಾಗಿದೆ. ಈ ಬಗ್ಗೆ ಮೃತ ರಾಜ್ ಕುಟುಂಬಸ್ಥರು ನಾಪತ್ತೆಯಾಗಿರುತ್ತಾನೆ ಎಂದು ಮಾಹಿತಿ ನೀಡಿದ್ದರು.ಡಿವೈಎಸ್ಪಿಕೆ.ರವಿಶಂಕರ್ ನೇತೃತ್ವದಲ್ಲಿ ಸಿಪಿಐ ನಯಾಜ್ ಬೇಗ್, ಪಿಎಸ್ಐ ಬಿ.ಕೆ.ಸುನಿಲ್ ಕುಮಾರ್, ಸಿಬ್ಬಂದಿಯಾದ ಶಿವಪ್ಪ ಎನ್ ಬ್ಯಾಕೋಡ, ಬಿ.ಆರ್.ಬಾಬು, ಅಂಬರೀಷ್, ಮಧುಸೂದನ್, ನಟರಾಜ್, ಮೋಹನ್ ಪ್ರಕರಣ ಭೇದಿಸಿದ್ದಾರೆ. ಸಿಬ್ಬಂದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನಗದು ಬಹುಮಾನ ನೀಡುವುದಾಗಿ ಎಸ್ಪಿ ಘೋಷಣೆ ಮಾಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cheque Bounce Case: ಚಿಂತಾಮಣಿ ಟಿಎಪಿಸಿಎಂಎಸ್ಗೆ 1.22 ಕೋಟಿ ದಂಡ
Chikkaballapur: ಕೈ ಚೆಲ್ಲಿದ ಜನಪ್ರತಿನಿಧಿಗಳು: ಸುಂಕ ವಸೂಲಿಗೆ ನಗರಸಭೆ ಟೆಂಡರ್!
COVID ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ:ಚಿಕ್ಕಬಳ್ಳಾಪುರದಲ್ಲಿ ದಿನೇಶ್ ಗುಂಡೂರಾವ್
Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…
Nandi Hills: ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವಾಹ
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.