ಅಸ್ವಸ್ಥರಾಗಿದ್ದ ವೃದ್ಧನಿಗೆ ಆಶ್ರಯ ಕಲ್ಪಿಸಿದ ಡೀಸಿ
Team Udayavani, May 17, 2019, 1:18 PM IST
ಚಿಕ್ಕಬಳ್ಳಾಪುರ: ಊಟ, ತಿಂಡಿ ಬಿಡಿ ಕನಿಷ್ಠ ಕುಡಿಯುವ ನೀರಿಲ್ಲದೇ ತೀವ್ರ ಅಸ್ವಸ್ಥರಾಗಿದ್ದ ವಯೋವೃದ್ಧನನ್ನು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಸ್ಥಳೀಯ ನಗರಸಭೆ ಅಧಿಕಾರಿಗಳ ನೆರವಿನೊಂದಿಗೆ ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ ನಂತರ ಚಿಕ್ಕಬಳ್ಳಾಪುರ ನಗರಸಭೆ ನಿರ್ವಹಿಸುತ್ತಿರುವ ರಾತ್ರಿ ವಸತಿ ರಹಿತರ ಆಶ್ರಮಕ್ಕೆ ದಾಖಲು ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ಹೆತ್ತ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ವಯೋ ವೃದ್ಧರೊಬ್ಬರು ನಗರದ ಬಾಲಾಜಿ ಚಿತ್ರ ಮಂದಿರ ಹಿಂಭಾಗ ಊಟ, ತಿಂಡಿ ಇಲ್ಲದೇ ಮಲಗಿರುವ ಕುರಿತು ಸಾರ್ವಜನಿಕರಾದ ವಸಂತ್ ರಾಜ್ ಎಂಬುವರು ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದರು. ಕೂಡಲೇ ಜಿಲ್ಲಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶಾ ಕಚೇರಿಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವ್ಯವಸ್ಥಾಪಕ ವೆಂಕಟಾಚಲಪತಿಗೆ ವಿಷಯ ಮುಟ್ಟಿಸಿದ್ದರು.
ಆಸ್ಪತ್ರೆಗೆ ತಂದು ಚಿಕಿತ್ಸೆ: ನಗರಸಭೆ ಸಮುದಾಯ ಸಂಘಟಕರಾದ ಹನುಮಂತರಾಯಪ್ಪ ಹಾಗೂ ಸ್ಥಳೀಯ ನಗರಸಭೆ ಸಿಬ್ಬಂದಿ ಕೂಡಲೇ ಬಾಲಾಜಿ ಚಿತ್ರ ಮಂದಿರ ಹಿಂಭಾಗ ತೆರಳಿ ಮಲಗಿದ್ದ ವೃದ್ಧ ನಾರಾಯಣಪ್ಪನನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ನಗರದ ವಾರ್ಡ್ 12 ರ ಬಾಪೂಜಿ ನಗರದಲ್ಲಿ ನಗರಸಭೆ ವತಿಯಿಂದ ನಡೆಸುತ್ತಿರುವ ಆಶ್ರಯ ತಂಗುದಾಣಕ್ಕೆ ಬಿಟ್ಟು ಬಂದಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ: ಅಸ್ವಸ್ಥ ರಾಗಿದ್ದ ನಾರಾಯಣಪ್ಪರನ್ನು ಜಿಲ್ಲಾ ಆಸ್ಪತ್ರೆಯ ತುರ್ತು ಘಟಕದಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡ ಲಾಗಿದೆ. ಚಿಕಿತ್ಸೆ ನಂತರ ಚಿಕ್ಕಬಳ್ಳಾಪುರ ನಗರ ಸಭೆಯಿಂದ ನಿರ್ವಹಿಸುತ್ತಿರುವ ರಾತ್ರಿ ನಗರ ವಸತಿ ರಹಿತರ ಆಶ್ರಯ ತಂಗುದಾಣದಲ್ಲಿ ಪುನ ರ್ವಸತಿ ಕಲ್ಪಿಸಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿ ವೃದ್ಧಿ ಅಧಿಕಾರಿ ವೆಂಕಟಾಚಲಪತಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಹೋಟೆಲ್ ಗೆ ನುಗ್ಗಿದ ಟಿಪ್ಪರ್; ಇಬ್ಬರು ಸಾವು
Chikkaballapura: ಅತ್ಯಾ*ಚಾರಿ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ
Sidlaghatta; ಚರಂಡಿಗೆ ಉರುಳಿದ ಸರಕಾರಿ ಬಸ್: ತಪ್ಪಿದ ಅವಘಡ
Chikkaballapura: ಮರು ಮದುವೆ ಒಪ್ಪಿ ವ್ಯಕ್ತಿಗೆ 7.40 ಲಕ್ಷ ರೂ. ವಂಚಿಸಿದ್ದ ಮಹಿಳೆ, ಬಂಧನ
Pradeep Eshwar; ರಾಜಕಾರಣದಲ್ಲಿ ತುಂಬಾ ಜನರನ್ನ ಡ್ಯಾನ್ಸ್ ಮಾಡಿಸಿದ್ದೀನಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.