ಪರಿಸರ ಸ್ನೇಹಿ ನೀರಿನ ಘಟಕ ಲೋಕಾರ್ಪಣೆಗೆ ಸಿದ್ಧ


Team Udayavani, Mar 15, 2022, 1:45 PM IST

ಪರಿಸರ ಸ್ನೇಹಿ ನೀರಿನ ಘಟಕ ಲೋಕಾರ್ಪಣೆಗೆ ಸಿದ್ಧ

ಶಿಡ್ಲಘಟ್ಟ: ತಾಲೂಕಿನ ಆನೂರು ಗ್ರಾಪಂ ನರೇಗಾ ಕಾಮಗಾರಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಿ ಮಾದರಿ ಅಂಗನವಾಡಿ ಕಟ್ಟಡ, ಡಿಜಿಟಲ್‌ ಗ್ರಂಥಾಲಯ ಕಾಮಗಾರಿಯನ್ನು ಪೂರ್ಣಗೊಳಿಸಿ ಜಿಲ್ಲೆಯ ಗಮನ ಸೆಳೆದಿದೆ. ಜತೆಗೆ ಪರಿಸರಸ್ನೇಹಿ ಕುಡಿವ ನೀರಿನ ಘಟಕವನ್ನು ನಿರ್ಮಿಸಿ ಕತೂಹಲ ಕೆರಳಿಸಿದೆ.

ಆನೂರು ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ವಿಜಯೇಂದ್ರ, ಗ್ರಾಪಂ ಸದಸ್ಯ ವೆಂಕಟೇಶ್‌ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ ಅವರ ವಿಶೇಷ ಕಾಳಜಿಯಿಂದ ಆನೂರ ಗ್ರಾಪಂನ ಹಿತ್ತಲಹಳ್ಳಿ ಗ್ರಾಮದಲ್ಲಿ ಪರಿಸರಸ್ನೇಹಿ ಶುದ್ಧ ಕುಡಿವ ನೀರಿನ ಘಟಕ ತಲೆ ಎತ್ತಿದೆ. 15ನೇ ಹಣಕಾಸು ಯೋಜನೆ ಅಡಿಯಲ್ಲಿ 3 ಲಕ್ಷ ಹಾಗೂ ಗ್ರಾಪಂನ ವರ್ಗವೊಂದರ ಯೋಜನೆಯಡಿ 2 ಲಕ್ಷ ರೂ.ಗಳನ್ನು ಕ್ರೋಡೀಕರಿಸಿ 5 ಲಕ್ಷ ರೂ.ಗಳ ವೆಚ್ಚದಲ್ಲಿ ಜಿಲ್ಲೆಯಲ್ಲಿ ಮಾದರಿ ಎನ್ನಲಾದ ಪರಿಸರಸ್ನೇಹಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ.

ಸುಮಾರು 2 ಸಾವಿರ ಲೀ. ನೀರು ಶೇಖರಣೆ ಸಾಮರ್ಥ್ಯದ ಘಟಕದಲ್ಲಿ ಸ್ವಯಂ ಚಾಲಿತ ಯಂತ್ರವನ್ನು ಅಳವಡಿಸಲಾಗಿದೆ ಇದರಿಂದ ಗ್ರಾಮಸ್ಥರು ಟೋಕನ್‌ ಮೂಲಕ ನೀರು ಪಡೆಯಬಹುದಾಗಿದೆ.

ಪರಿಸರ ಸ್ನೇಹಿ ನಾಡಕಚೇರಿ: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸಿದ ಅನಿರುದ್ಧ್ ಶ್ರವಣ ಅವರು ಪರಿಸರಸ್ನೇಹಿ ನಾಡಕಚೇರಿಯನ್ನು ನಿರ್ಮಾಣ ಮಾಡಿ ರಾಜ್ಯದಲ್ಲಿಯೇ ಗಮನಸೆಳೆದಿದ್ದರು. ಅದೇ ಮಾದರಿಯಲ್ಲಿ ಆನೂರು ಗ್ರಾಪಂನ ಹಿತ್ತಲಹಳ್ಳಿ ಗ್ರಾಮದಲ್ಲಿ ಪರಿಸರಸ್ನೇಹಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದ್ದು, ಘಟಕದಲ್ಲಿ ನಿರುಪಯುಕ್ತ ನೀರು ವ್ಯರ್ಥವಾಗಿ ರಸ್ತೆಗೆ ಹರಿಯಲು ಬ್ರೇಕ್‌ ಹಾಕಿ ಆ ನೀರನ್ನು ಸಂಗ್ರಹ ಮಾಡಲು ತೊಟ್ಟಿಯನ್ನು ನಿರ್ಮಿಸಲಾಗಿದೆ.

ಗ್ರಾಮದಲ್ಲಿ ಜಾನುವಾರಗಳನ್ನು ತೊಳೆಯಲು ನೀರು ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಘಟಕದ ಒಳಗೆ ಆಧುನಿಕ ಯಂತ್ರಗಳನ್ನು ಅಳವಡಿಸಿ ನೀರು ಶೇಖರಿಸಲು ಸ್ಟೀಲ್‌ ಟ್ಯಾಂಕ್ಸ್‌ ಸಹ ಸ್ಥಾಪಿಸಲಾಗಿದೆ ಜತೆಗೆ ಘಟಕದ ಹೊರಭಾಗದಲ್ಲಿ ಟೈಲ್ಸ್‌ಗಳನ್ನು ಅಳವಡಿಸಲಾಗಿದೆ.  ಗ್ರಾಮಸ್ಥರ ಅನುಕೂಲಕ್ಕಾಗಿ ನಿರ್ಮಿಸಿರುವ ಶುದ್ಧ ನೀರಿನ ಘಟಕ ಮಾದರಿಯಾಗಿದ್ದು ಅತಿ ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ.

ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಯನ್ನು ಬಳಸಿಕೊಂಡು ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಹಿತ್ತಲಹಳ್ಳಿಯಲ್ಲಿ ಜಿಲ್ಲೆಯಲ್ಲಿ ಮಾದರಿ ಯಾಗಿ ಪರಿಸರ ಸ್ನೇಹಿ ಕುಡಿವ ನೀಡಿನ ಘಟನಕ ವನ್ನು ನಿರ್ಮಿಸಲಾಗಿದೆ. ವಿಜಯೇಂದ್ರ, ಆನೂರು ಗ್ರಾಪಂ ಉಪಾಧ್ಯಕ್ಷ

ಆನೂರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹಿತ್ತಲಹಳ್ಳಿ ಗ್ರಾಮದಲ್ಲಿ ಅರ್‌.ಓ ಸ್ಥಾಪನೆ ಮಾಡಿರುವುದು ಸಂತೋಷವಾಗಿದೆ. ಈ ಊರಿನ ಜನರಿಗೆ ಒಳ್ಳೆಯ ಸ್ವತ್ಛವಾದ ನೀರು ಕುಡಿಯುವುದಕ್ಕೆ ಅನುಕೂಲವಾಗಿದೆ ಇದಕ್ಕೆ ಎಲ್ಲಾ ಗ್ರಾಪಂ ಸದಸ್ಯರು ಸಹಕಾರ ನೀಡಿದ್ದಾರೆ ಅದರಲ್ಲೂ ವಿಶೇಷವಾಗಿ ಪಿಡಿಒ ವಿಶೇಷ ಕಾಳಜಿವಹಿಸಿದ್ದಾರೆ. –ನೇತ್ರಾವತಿ, ಆನೂರು ಗ್ರಾಪಂ ಅಧ್ಯಕ್ಷೆ

ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ವಿಶೇಷವಾಗಿ ಗ್ರಾಮಸ್ಥರ ಸಹಕಾರದಿಂದ ಮುಂಬರುವ ಬೇಸಿಗೆಗಾಲದಲ್ಲಿ ಅನುಕೂಲ ಕಲ್ಪಿಸಲು ಪರಿಸರ ಸ್ನೇಹಿ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗಿದೆ ನೀರಿನ ಸದ್ಬಳಕೆಗೆ ಆದ್ಯತೆ ನೀಡಲಾಗಿದೆ. ಕಾತ್ಯಾಯಿನಿ, ಆನೂರು ಗ್ರಾಪಂ ಪಿಡಿಒ

ಟಾಪ್ ನ್ಯೂಸ್

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

1-sj

EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dinesh-gu

COVID ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ:ಚಿಕ್ಕಬಳ್ಳಾಪುರದಲ್ಲಿ ದಿನೇಶ್‌ ಗುಂಡೂರಾವ್‌

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

0421472757

Nandi Hills: ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವಾಹ

Chikkaballapur: ಸ್ವಂತ ಕಟ್ಟಡ ಇಲ್ಲದೇ ಶಿಕ್ಷಣ ತರಬೇತಿಗೆ ಡಯಟ್‌ ಪರದಾಟ!

Chikkaballapur: ಸ್ವಂತ ಕಟ್ಟಡ ಇಲ್ಲದೇ ಶಿಕ್ಷಣ ತರಬೇತಿಗೆ ಡಯಟ್‌ ಪರದಾಟ!

Chikkaballapura; ಎಸ್ಎಫ್ ಐ ರಾಜ್ಯ ಸಮ್ಮೇಳನಕ್ಕೆ ಚಾಲನೆ

Chikkaballapura; ಎಸ್ಎಫ್ ಐ ರಾಜ್ಯ ಸಮ್ಮೇಳನಕ್ಕೆ ಚಾಲನೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2

Kasaragod: ಗಾಯಕಿಯ ಮಾನಭಂಗ; ದೂರು: ಗಾಯಕ ರಿಯಾಸ್‌ ಬಂಧನ

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

11(1)

Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.