ಮೀಸಲು ಬದಲಾವಣೆಗೆ ಹೈಕೋರ್ಟ್‌ ನಕಾರ

ಚಿಕ್ಕಬಳ್ಳಾಪುರ ನಗರಸಭೆಗೆ ಚುನಾವಣೆ ಸರ್ಕಾರ ನಿಗದಿಪಡಿಸಿದ್ದೇ ಅಂತಿಮ

Team Udayavani, Jun 1, 2019, 4:07 PM IST

cb-tdy-3..

ಚಿಕ್ಕಬಳ್ಳಾಪುರ: ಮೀಸಲಾತಿ ವಿವಾದ ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದ ಮೇ 29 ರಂದು ನಡೆಯ ಬೇಕಿದ್ದ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಮುಂದೂಡಿರುವುದು ಗೊತ್ತಿರುವ ವಿಚಾರ.

ಆದರೆ, ಸರ್ಕಾರ ನಿಗದಿಪಡಿಸಿದ್ದ ಮೀಸಲಾತಿ ಪ್ರಶ್ನಿಸಿದ್ದ ಹೈಕೋರ್ಟ್‌ ಮೆಟ್ಟಿಲೇರಿದ್ದವರಿಗೆ ತೀವ್ರ ಹಿನ್ನಡೆಯಾಗಿದ್ದು, ಸರ್ಕಾರ ನಿಗದಿಪಡಿಸಿದ್ದ ಮೀಸಲಾತಿ ಬದಲಾವಣೆಗೆ ಹೈಕೋರ್ಟ್‌ ನಿರಾ ಕರಿಸಿ ಸರ್ಕಾರದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಜಾಗೊಳಿಸಲಾಗಿದೆ.

ಚಿಕ್ಕಬಳ್ಳಾಪುರ ನಗರಸಭೆಯ 31 ವಾರ್ಡ್‌ಗಳಿಗೆ ರಾಜ್ಯ ನಗರಾಭಿವೃದ್ಧಿ ಇಲಾಖೆ ಕರಡು ಮೀಸಲಾತಿ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಪ್ರಕಟಿಸಿ ಅಂತಿಮ ಮೀಸಲಾತಿ ಪ್ರಕಟಿಸಲಾಗಿತ್ತು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸ್ಪರ್ಧಿ ಆಕಾಂಕ್ಷಿಗಳು ಸರ್ಕಾರ ನಿಗದಿಪಡಿಸಿದ್ದ ಮೀಸಲಾತಿ ಯನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ್ದರು. ಈ ವಿವಾದ ಚರ್ಚೆಗೆ ಗ್ರಾಸವಾಗಿತ್ತು. ಹೈಕೋಟ್‌ನಲ್ಲಿ ಆರೇಳು ತಿಂಗಳಿಂದ ವಾದ, ವಿವಾದ ನಡೆದಿತ್ತು.

ಮೀಸಲಾತಿ ಬದಲಾವಣೆಗೆ ನಕಾರ: ಶುಕ್ರವಾರ ಚಿಕ್ಕಬಳ್ಳಾಪುರ ನಗರಸಭೆಗೆ ರಾಜ್ಯ ನಗರಾಭಿವೃದ್ಧಿ ನಿರ್ದೇಶನಾಲಯ ನಿಗದಿಪಡಿಸಿದ್ದ ಮೀಸಲಾತಿ ಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಆದೇಶ ನೀಡಿದ್ದು, ಮೀಸಲಾತಿ ಬದಲಾಗುತ್ತದೆ ಯೆಂಬ ನಿರೀಕ್ಷೆಯಲ್ಲಿದ್ದ ಕೆಲ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ.

ಯಾರು ಕೋರ್ಟ್‌ ಮೊರೆ ಹೋಗಿದ್ದರು?: ನಗರದ 27ನೇ ವಾರ್ಡ್‌ನ ಶಾಹೀನಾ ಹಿಂ. ವರ್ಗ (ಎ) ಮಹಿಳೆಗೆ ಮೀಸಲು ನಿಗದಿಪಡಿಸಿ ಈ ಹಿಂದೆ ಅಂದರೆ 2018 ಜುಲೈ 30 ರಂದು ನಗರಾಭಿವೃದ್ಧಿ ನಿರ್ದೇಶನಾಲಯದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದರು. ಈ ಬಗ್ಗೆ ನಗರಸಭೆ ವ್ಯಾಪ್ತಿಯ ಹಲವು ವಾರ್ಡ್‌ಗಳಿಗೆ ಅವೈಜ್ಞಾನಿಕವಾಗಿ ಮೀಸಲಾತಿ ನಿಗದಿಗೊಳಿಸಲಾಗಿದೆ.

ಮೀಸಲಾತಿ ಪಡೆದವರಿಗೆ ಮತ್ತೆ ಮೀಸಲಾತಿ ಕಲ್ಪಿಸಲಾಗಿದೆ ಎಂದು ಆರೋಪಿಸಿ ಕೆಲವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ರವರು ವಾದ ಮಂಡಿಸಿ ಸರ್ಕಾರ ನಿಗದಿಪಡಿಸಿರುವ ಮೀಸಲಾಗಿ ಕ್ರಮ ಬದ್ಧವಾಗಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟ ನಂತರ ಹೈಕೋರ್ಟ್‌ ಸರ್ಕಾರದ ವಿರುದ್ಧ ಮೀಸಲಾತಿ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತೆರವುಗೊಳಿಸಿದರು.

ನಗರಸಭೆಗೆ ನಿಗದಿಯಾಗಿರುವ ಮೀಸಲಾತಿ ವಿವರ:

ಚಿಕ್ಕಬಳ್ಳಾಪುರ ನಗರಸಭೆ 1 ವಾರ್ಡ್‌ಗೆ (ಹಿಂ.ವರ್ಗ ಎ( ಮಹಿಳೆ), 2ನೇ ವಾರ್ಡ್‌ಗೆ (ಸಾಮಾನ್ಯ ಮಹಿಳೆ), 3ನೇ ವಾರ್ಡ್‌ (ಸಾಮಾನ್ಯ ಮಹಿಳೆ), 4ನೇ ವಾರ್ಡ್‌ಗೆ (ಹಿಂ.ವರ್ಗ (ಬಿ), 5ನೇ ವಾರ್ಡ್‌ (ಪ.ಜಾತಿ). 6ನೇ ವಾರ್ಡ್‌(ಪ.ಜಾತಿ ಮಹಿಳೆ,) 7 ನೇ ವಾರ್ಡ್‌(ಪ.ಜಾತಿ). 8ನೇ ವಾರ್ಡ್‌ (ಪ.ಜಾತಿ ಮಹಿಳೆ), 9 ನೇ ವಾರ್ಡ್‌ (ಪ. ಪಗಂಡ), 10ನೇ ವಾರ್ಡ್‌ (ಸಾಮಾನ್ಯ), 11ನೇ ವಾರ್ಡ್‌ (ಪ. ಪಂಗಡ ಮಹಿಳೆ), 12ನೇ ವಾರ್ಡ್‌ (ಬಿಸಿಎಂ (ಎ), 13ನೇ ವಾರ್ಡ್‌ಗೆ (ಸಾಮಾನ್ಯ ಮಹಿಳೆ), 14ನೇ ವಾರ್ಡ್‌ಗೆ (ಸಾಮಾನ್ಯ), 15 ನೇವಾರ್ಡ್‌ (ಸಾಮಾನ್ಯ). 16ನೇ ವಾರ್ಡ್‌ (ಬಿಸಿಎಂ (ಎ), 17ನೇ ವಾರ್ಡ್‌ಗೆ (ಸಾಮಾನ್ಯ) 18ನೇ ವಾರ್ಡ್‌ (ಬಿಸಿಎಂ (ಎ), 19ನೇ ವಾರ್ಡ್‌ (ಸಾಮಾನ್ಯ), 20ನೇ ವಾರ್ಡ್‌( ಸಾಮಾನ್ಯ), 21ನೇ ವಾರ್ಡ್‌ ( ಸಾಮಾನ್ಯ), 22 ನೇ ವಾರ್ಡ್‌( ಸಾಮಾನ್ಯ ಮಹಿಳೆ), 23ನೇ ವಾರ್ಡ್‌ (ಸಾಮಾನ್ಯ), 24ನೇ ವಾರ್ಡ್‌ (ಬಿಸಿಎಂ (ಬಿ) ಮಹಿಳೆ), 25ನೇ ವಾರ್ಡ್‌ (ಬಿಸಿಎಂ(ಬಿ) ಮಹಿಳೆ), 26ನೇ ವಾರ್ಡ್‌ (ಸಾಮಾನ್ಯ ಮಹಿಳೆ), 27ನೇ ವಾರ್ಡ್‌ಗೆ (ಬಿಸಿಎಂ(ಎ) ಮಹಿಳೆ, 28ನೇ ವಾರ್ಡ್‌ (ಸಾಮಾನ್ಯ) 29 ನೇ ವಾರ್ಡ್‌ಗೆ (ಪ. ಜಾತಿ), 30ನೇ ವಾರ್ಡ್‌ (ಸಾಮಾನ್ಯ ಮಹಿಳೆ) , 31ನೇ ವಾರ್ಡ್‌ಗೆ (ಸಾಮಾನ್ಯ ಮಹಿಳೆ)ಗೆ ಮೀಸಲಾಗಿದೆ.

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ

Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ

MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್‌

MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್‌

chintamai-Murder

Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು! 

10-gudibanda

Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ

Sudhakar–sandeep-Reddy

BJP Rift: ಸಂಸದ ಕೆ.ಸುಧಾಕರ್‌ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.