![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 18, 2020, 6:19 AM IST
ಚಿಂತಾಮಣಿ: ಕೆ.ಸಿ.ವ್ಯಾಲಿ ನೀರಿನ ವಿಚಾರದಲ್ಲಿ ಮಾಜಿ ಶಾಸಕ ಸುಧಾಕರ್ ಬೆಂಬಲಿಗರು ಜನರಿಗೆ ತಪ್ಪು ಮಾಹಿತಿ ನೀಡುವುದರ ಮೂಲಕ ನೀರಿನ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಮಾಹಿತಿ ಇಲ್ಲದೇ ಬುದ್ಧಿಹೀನರಂತೆ ಮಾತನಾ ಡು ತ್ತಿದ್ದಾರೆ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಬೆಂಬಲಿಗರು ದೂರಿದರು.
ತಾಲೂಕಿನ ಕುರಟಹಳ್ಳಿ ಕೆರೆಯಲ್ಲಿ ಹಮ್ಮಿ ಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಬಲಿಗರು, ಶಾಸಕರು ಕುರುಟಹಳ್ಳಿ ಕೆರೆಗೆ ನೀರು ಬಿಡಬಾರದೆಂದು ಹೇಳಿಲ್ಲ. ಬದಲಾಗಿ ಕುರುಟಹಳ್ಳಿ ಕೆರೆ ಸ್ವತ್ಛಗೊಳಿಸಿ ಕೆರೆ ಕೋಡಿ ಸರಿಪಡಿಸಿದ ಬಳಿಕ ನೀರು ಬಿಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆಯೇ ಹೊರತು ನೀರು ಬಿಡಬೇಡಿ ಎಂದು ಹೇಳಿಲ್ಲ ಎಂದರು.
ಕಳೆದ ಎರಡು ದಿನಗಳು ಕುರುಟಹಳ್ಳಿ ಕೆರೆಗೆ ನೀರು ಹರಿಯುತ್ತಿರುವುದನ್ನು ತಿಳಿದು ಶಾಸಕರು ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆರೆಯಲ್ಲಿ ಜಾಲಿ ಮರಗಳ ಮುಳ್ಳಿನ ಕೊಂಪೆಗಳು ತುಂಬಿ ತುಳು ಕುತ್ತಿದ್ದನ್ನು ಕಂಡು ಹಾಗೂ ಕೆರೆ ಕೋಡಿ ಒಡೆದಿರುವು ದನ್ನು ನೋಡಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೆರೆ ಸ್ವತ್ಛಗೊಳಿಸಿ ನೀರು ಬಿಡುವಂತೆ ಸೂಚನೆ ನೀಡಿ ದ್ದರು ಎಂದರು.
ಶಾಸಕರ ಸೂಚನೆ ಮೇರೆಗೆ ಅಧಿಕಾರಿಗಳು ಕರೆ ಸ್ವತ್ಛತೆ ಹಾಗೂ ಕೋಡಿ ರಿಪೇರಿ ಕೆಲಸಕ್ಕೆ ಮುಂದಾಗಿ ದ್ದಾರೆ. ಕಸಬಾ ಹೊಬಳಿ ಜೆಡಿಎಸ್ ಮುಖಂಡರಾದ ಸೀಕಲ್ ಶ್ರೀನಿ ವಾಸಗೌಡ, ಕುರುಬೂರು ಎಂಪಿ ಸಿಎಸ್ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಎಂ.ಎನ್ ಮುನಿನಾರಾ ಯಣಪ್ಪ, ಪಣಸಚೌಡನಹಳ್ಳಿ ಗೋಪಾಲಕೃಷ್ಣಪ್ಪ, ಕಲ್ಲಹಳ್ಳಿ ಶ್ರೀರಾಮರೆಡ್ಡಿ, ಶಂಕರರೆಡ್ಡಿ, ಮಾಡಿಕೆರೆ ರಾಜೇಶ್, ನಾಗರಾಜ್, ಮುನುಗನಹಳ್ಳಿ ಶ್ರೀನಿವಾಸ್, ಕುರಟಹಳ್ಳಿ ಕುಮಾರ ಇದ್ದರು.
Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ
MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್
Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು!
Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ
BJP Rift: ಸಂಸದ ಕೆ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.