2014 ಅಂಗನವಾಡಿಯಲ್ಲಿ 877ಕ್ಕೆ ಸ್ವಂತ ನೆಲೆ ಇಲ್ಲ


Team Udayavani, Jul 22, 2023, 3:46 PM IST

tdy-15

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯ ನಿರ್ವ ಹಿಸುತ್ತಿರುವ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಇಲ್ಲದೇ ಸೊರಗುತ್ತಿವೆ. ಜಿಲ್ಲೆಯ ಒಟ್ಟು 2014 ಅಂಗನವಾಡಿ ಕೇಂದ್ರಗಳ ಪೈಕಿ ಬರೋಬ್ಬರಿ 877 ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದೇ ಸಮುದಾಯ, ಬಾಡಿಗೆ ಕಟ್ಟಡಗಳನ್ನು ಅಶ್ರಯಿಸಿವೆ.

ಜಿಲ್ಲೆಯಲ್ಲಿನ 6 ತಾಲೂಕುಗಳಲ್ಲಿ ಒಟ್ಟು 2014 ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿವೆ, ಆದರೆ, ಸರಿ ಸುಮಾರು ಅರ್ಧದಷ್ಟು ಕಟ್ಟಡಗಳು ಇನ್ನೂ ಸ್ವಂತದ್ದಲ್ಲ. 2014 ಅಂಗನವಾಡಿ ಪೈಕಿ ಬಾಗೇಪಲ್ಲಿ ತಾಲೂಕಿ ನಲ್ಲಿ 384 ಅಂಗನವಾಡಿ ಕೇಂದ್ರಗಳಿದ್ದು ಕೇವಲ 193 ಕೇಂದ್ರಕ್ಕೆ ಮಾತ್ರ ಸ್ವಂತ ಕಟ್ಟಡ ಇದ್ದರೆ ಉಳಿದಂತೆ 11 ಕೇಂದ್ರ ಪಂಚಾಯಿತಿ ಕೇಂದ್ರ, 17 ಕೇಂದ್ರ ಸಮುದಾಯ ಭವನ, 62 ಕೇಂದ್ರ ಸಮೀಪದ ಸರ್ಕಾರಿ ಶಾಲೆಗಳಲ್ಲಿ ನಡೆಯತ್ತಿವೆ.

100 ಕೇಂದ್ರಗಳು ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು 1 ಇತರೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಒಟ್ಟು 320 ಅಂಗನವಾಡಿ ಕೇಂದ್ರಗಳ ಪೈಕಿ 195 ಕೇಂದ್ರಕ್ಕೆ ಮಾತ್ರ ಸ್ವಂತ ಕಟ್ಟಡವಿದ್ದು ಉಳಿದಂತೆ 3 ಪಂಚಾಯ್ತಿ, 9 ಸಮುದಾಯ, 35 ಶಾಲೆ, 70 ಬಾಡಿಗೆ ಹಾಗೂ 8 ಇತರೇ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಚಿಂತಾಮಣಿ ತಾಲೂಕಿನಲ್ಲಿ ಒಟ್ಟು 473 ಕೇಂದ್ರಗಳಿದ್ದು ಈ ಪೈಕಿ ಕೇವಲ 229 ಕೇಂದ್ರಕ್ಕೆ ಮಾತ್ರ ಸ್ವಂತ ಕಟ್ಟಡ ಇದೆ. 4 ಪಂಚಾಯ್ತಿ, 56 ಸಮುದಾಯ, 72 ಶಾಲೆ, 97 ಬಾಡಿಗೆ ಹಾಗೂ 15 ಇತರೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಗೌರಿ ಬಿದನೂರು ತಾಲೂಕಿನಲ್ಲಿ ಒಟ್ಟು 363 ಅಂಗನವಾಡಿ ಪೈಕಿ ಕೇವಲ 257 ಕೇಂದ್ರಕ್ಕೆ ಮಾತ್ರ ಸ್ವಂತ ಕಟ್ಟಡ ಇದ್ದು ಉಳಿದಂತೆ 5 ಪಂಚಾಯ್ತಿ, 14 ಸಮುದಾಯ, 31 ಶಾಲೆ, 53 ಕೇಂದ್ರ ಬಾಡಿಗೆ ಹಾಗೂ 3 ಇತರೇ ಕಟ್ಟಡಗಳಲ್ಲಿ ಕಾರ್ಯನಿರ್ವ ಹಿಸುತ್ತಿವೆ.

ಗುಡಿಬಂಡೆಯಲ್ಲಿ ಒಟ್ಟು 130 ಅಂಗನವಾಡಿ ಕೇಂದ್ರಗಳಿದ್ದು ಆ ಪೈಕಿ 95 ಕಟ್ಟಡಗಳಿಗೆ ಮಾತ್ರ ಸ್ವಂತ ನೆಲೆ ಇದೆ. ಉಳಿದಂತೆ 6 ಸಮುದಾಯ, 11 ಶಾಲೆ, 18 ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಶಿಡ್ಲಘಟ್ಟ ತಾಲೂಕಿನಲ್ಲಿ ಒಟ್ಟು 344 ಅಂಗನವಾಡಿ ಕೇಂದ್ರಗಳಿದ್ದ ಆ ಪೈಕಿ 168 ಕೇಂದ್ರಕ್ಕೆ ಮಾತ್ರ ಸ್ವಂತ ಕಟ್ಟಡ ಇದ್ದು ಉಳಿದಂತೆ 5 ಪಂಚಾಯ್ತಿ, 22 ಸಮುದಾಯ, 64 ಶಾಲೆ, 82 ಬಾಡಿಗೆ ಹಾಗೂ 3 ಇತರೇ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಅಭದ್ರತೆಯಲ್ಲಿ ಚಿಣ್ಣರು: ಎಲ್‌ಕೆಜಿ, ಯುಕೆಜಿ ಮಾಯೆಯ ಪರಿಣಾಮ ಮೊದಲೇ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳ ಸಂಖ್ಯೆ ಕುಸಿತ ಕಾಣುತ್ತಿದೆ. ಈ ನಡುವೆ ಸ್ವಂತ ಕಟ್ಟಡ ಇಲ್ಲದೇ ಕೆಲವು ಖಾಸಗಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮತ್ತೆ ಕೆಲವು ಗ್ರಾಮದ ಹಳೆಯ ಸಮುದಾಯ ಭವನ, ಶಾಲಾ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಕ್ಕಳಿಗೆ ಸುರಕ್ಷರತೆ ಬದಲಾಗಿ ಅಭದ್ರತೆ ಕಾಡುತ್ತಿವೆ. ಬಹಳಷ್ಟು ಕೇಂದ್ರಗಳ ಕಟ್ಟಡಗಳು ದುರಸ್ತಿ ಆಗದೇ ಮಳೆ ಬಂದಾಗ ಸೋರುವಂತಾಗಿದೆ. ಇನ್ನೂ ಕೆಲವು ಕಟ್ಟಡಗಳು ಪಾಳು ಬಿದ್ದ ರೀತಿಯಲ್ಲಿ.

ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗದ್ದೇ ಸಮಸ್ಯೆ!: ನರೇಗಾ ಯೋಜನೆಯಡಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಕಟ್ಟಿಕೊಳ್ಳಲು ವಿಫ‌ುಲ ಅವಕಾಶ ಇದೆ. ಆದರೆ, ನಗರ-ಗ್ರಾಮಾಂತರ ಪ್ರದೇಶದಲ್ಲಿ ಜಾಗದ ಸಮಸ್ಯೆ ಇದೆ. ಹೀಗಾಗಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತಿಲ್ಲ ಎಂದು ಇಲಾಖೆ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಗ್ರಾಮಾಂತರಕ್ಕಿಂತ ನಗರ ಭಾಗದಲ್ಲಿ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗ ಸಿಗುತ್ತಿಲ್ಲ. ಹೀಗಾಗಿ ಬಾಡಿಗೆ ಕಟ್ಟಡಗಳೇ ಕಾಯಂ ಆಗಿವೆ. ನಿವೇಶನ ಒದಗಿಸುವಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆದು ಇಲಾಖೆ ಅಧಿಕಾರಿಗಳು ಸುಸ್ತಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 2014 ಅಂಗನವಾಡಿ ಕೇಂದ್ರಗಳಿದ್ದು ಆ ಪೈಕಿ 1,113 ಕೇಂದ್ರ ಸ್ವಂತ ಕಟ್ಟಡದಲ್ಲಿವೆ. 28 ಕೇಂದ್ರ ಪಂಚಾಯ್ತಿ ಕಟ್ಟಡದಲ್ಲಿ, 124 ಕೇಂದ್ರ ಸಮುದಾಯ ಭವನ, 275 ಸಮೀಪದ ಸರ್ಕಾರಿ ಶಾಲೆ ಹಾಗೂ 420 ಕೇಂದ್ರ ಬಾಡಿಗೆ ಹಾಗೂ 30 ಕೇಂದ್ರ ಇತರೇ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ● ಅಶ್ವತ್ಥಮ್ಮ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖ

– ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ

Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ

1-rewewewe

Monsoon season: ದಕ್ಷಿಣ ಕನ್ನಡದಲ್ಲಿ ಜಲ ಚಟುವಟಿಕೆಗಳು, ಚಾರಣಕ್ಕೆ ನಿಷೇಧ

ಅಂತಿಂಥ ಕಳ್ಳ ಇವನಲ್ಲ, ಇವನಂಥ ಕಳ್ಳ.. ಐಷಾರಾಮಿ ಫ್ಲ್ಯಾಟ್‌,ದುಬಾರಿ ಕಾರು; ಈತ ಶ್ರೀಮಂತ ಕಳ್ಳ

ಅಂತಿಂಥ ಕಳ್ಳ ಇವನಲ್ಲ, ಇವನಂಥ ಕಳ್ಳ.. ಐಷಾರಾಮಿ ಫ್ಲ್ಯಾಟ್‌,ದುಬಾರಿ ಕಾರು; ಈತ ಶ್ರೀಮಂತ ಕಳ್ಳ

Nirmala-Budget

Union Budget: ಜು.22ರಿಂದ ಕೇಂದ್ರ ಬಜೆಟ್‌ ಅಧಿವೇಶನ ಆರಂಭ

SS Rajamouli: ಡಾಕ್ಯುಮೆಂಟರಿಯಾಗಿ ಓಟಿಟಿಗೆ ಬರಲಿದೆ ರಾಜಮೌಳಿ ಸಿನಿಮಾ ಸಾಹಸಗಾಥೆ

SS Rajamouli: ಡಾಕ್ಯುಮೆಂಟರಿಯಾಗಿ ಓಟಿಟಿಗೆ ಬರಲಿದೆ ರಾಜಮೌಳಿ ಸಿನಿಮಾ ಸಾಹಸಗಾಥೆ

ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ತಜ್ಞರ ಹುದ್ದೆ ಭರ್ತಿಗೆ ಶೀಘ್ರ ಕ್ರಮ: ದಿನೇಶ್ ಗುಂಡೂರಾವ್

ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ತಜ್ಞರ ಹುದ್ದೆ ಭರ್ತಿಗೆ ಶೀಘ್ರ ಕ್ರಮ: ದಿನೇಶ್ ಗುಂಡೂರಾವ್

rahul gandhi (2)

Congress ಅಯೋಧ್ಯೆಯಲ್ಲಿ ಮಾಡಿದಂತೆ ಗುಜರಾತ್ ನಲ್ಲೂ ಬಿಜೆಪಿಗೆ ಸೋಲುಣಿಸಲಿದೆ: ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chintamani: ಒಂದು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ… ದೃಶ್ಯ ಸೆರೆ

Chintamani: ಒಂದು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ… ದೃಶ್ಯ ಸೆರೆ

Dr.Sudhakar

Lokasabha: ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪುಷ್ಪ ಮಂಡಳಿ; ಡಾ.ಕೆ.ಸುಧಾಕರ್‌ ಪ್ರಸ್ತಾಪ

Basavaraj Bommai ಸಂವಿಧಾನಕ್ಕೆ ಹೆಚ್ಚು ದ್ರೋಹ ಬಗೆದಿದ್ದು ಕಾಂಗ್ರೆಸ್‌

Basavaraj Bommai ಸಂವಿಧಾನಕ್ಕೆ ಹೆಚ್ಚು ದ್ರೋಹ ಬಗೆದಿದ್ದು ಕಾಂಗ್ರೆಸ್‌

Congress ರಾಜ್ಯ ಸರಕಾರಕ್ಕೆ ಧಮ್‌ ಇದ್ದರೆ ಜಿ.ಪಂ., ತಾ.ಪಂ. ಚುನಾವಣೆ ನಡೆಸಲಿ: ಅಶೋಕ್‌

Congress ರಾಜ್ಯ ಸರಕಾರಕ್ಕೆ ಧಮ್‌ ಇದ್ದರೆ ಜಿ.ಪಂ., ತಾ.ಪಂ. ಚುನಾವಣೆ ನಡೆಸಲಿ: ಅಶೋಕ್‌

1-weewwe

Gudibande: ಸ್ಪೋಟಕಗಳ ಸಾಗಾಣಿಕೆ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Bhibhav Kumar

Swati Maliwal ಹಲ್ಲೆ ಪ್ರಕರಣ: ಬಿಭವ್ ಕುಮಾರ್ ಗೆ ಜುಲೈ 16 ರವರೆಗೆ ನ್ಯಾಯಾಂಗ ಬಂಧನ

Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ

Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ

1-rewewewe

Monsoon season: ದಕ್ಷಿಣ ಕನ್ನಡದಲ್ಲಿ ಜಲ ಚಟುವಟಿಕೆಗಳು, ಚಾರಣಕ್ಕೆ ನಿಷೇಧ

ಅಂತಿಂಥ ಕಳ್ಳ ಇವನಲ್ಲ, ಇವನಂಥ ಕಳ್ಳ.. ಐಷಾರಾಮಿ ಫ್ಲ್ಯಾಟ್‌,ದುಬಾರಿ ಕಾರು; ಈತ ಶ್ರೀಮಂತ ಕಳ್ಳ

ಅಂತಿಂಥ ಕಳ್ಳ ಇವನಲ್ಲ, ಇವನಂಥ ಕಳ್ಳ.. ಐಷಾರಾಮಿ ಫ್ಲ್ಯಾಟ್‌,ದುಬಾರಿ ಕಾರು; ಈತ ಶ್ರೀಮಂತ ಕಳ್ಳ

Nirmala-Budget

Union Budget: ಜು.22ರಿಂದ ಕೇಂದ್ರ ಬಜೆಟ್‌ ಅಧಿವೇಶನ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.