Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

 ಪ್ರಸಕ್ತ ಶೈಕ್ಷಣಿ ಸಾಲಿನಲ್ಲಿ 14,231 ಸೀಟುಗಳ ಪೈಕಿ ಭರ್ತಿಯಾಗಿದ್ದು ಕೇವಲ 3,412

Team Udayavani, Sep 19, 2024, 6:50 AM IST

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

ಚಿಕ್ಕಬಳ್ಳಾಪುರ: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಯಡಿ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 25ರಷ್ಟು ಮೀಸಲಿಸಿರುವ ಆರ್‌ಟಿಇ ಸೀಟುಗಳಿಗೆ ಈ ವರ್ಷವೂ ಕೇಳುವವರೇ ಇಲ್ಲವಾಗಿದೆ.

ರಾಜ್ಯಾದ್ಯಂತ 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಿಗದಿಪಡಿಸಿದ್ದ ಒಟ್ಟು 14,231 ಸೀಟುಗಳಲ್ಲಿ ಭರ್ತಿಯಾಗಿದ್ದು ಕೇವಲ 3,412 ಸೀಟುಗಳು ಮಾತ್ರ.

ಪ್ರಸ್ತಕ ಸಾಲಿನಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡು 3 ತಿಂಗಳೇ ಕಳೆದಿದೆ. ಆದರೆ ಆರ್‌ಟಿಇ ಹೊಸದಾಗಿ ಆರಂಭಗೊಂಡ ಸಂದರ್ಭದಲ್ಲಿ ವಿದ್ಯಾರ್ಥಿ ಪೋಷಕರಲ್ಲಿ ಸೀಟು ಪಡೆಯಲು ಇದ್ದ ಧಾವಂತ, ಪೈಪೋಟಿ ಈಗ ಮಾಯವಾಗಿದೆ. ಸರಕಾರದ ಹಲವು ಕಠಿನ ಕ್ರಮಗಳ ಪರಿಣಾಮ ಮುಂದಿನ ವರ್ಷಗಳಲ್ಲಿ ಆರ್‌ಟಿಇ ಸೀಟುಗಳು ಭರ್ತಿಯಾಗದೆ ಸಂಪೂರ್ಣ ಉಳಿಕೆಯಾದರೂ ಅಚ್ಚರಿ ಪಡುವ ಅಗತ್ಯವಿಲ್ಲ.

ಈ ವರ್ಷ ರಾಜ್ಯದ 31 ಜಿಲ್ಲೆಗಳ ಖಾಸಗಿ ಶಾಲೆಗಳಲ್ಲಿ 14,231 ಆರ್‌ಟಿಇ ಸೀಟುಗಳು ನಿಗದಿಯಾಗಿದ್ದವು. ಆ ಪೈಕಿ 6,090 ಮಕ್ಕಳು ಮೊದಲ ಹಂತದ ಲಾಟರಿಯಲ್ಲಿ ಸೀಟು ಪಡೆದರೆ 2ನೇ ಹಂತದಲ್ಲಿ 1,846 ಮಕ್ಕಳು ಲಾಟರಿ ಮೂಲಕ ಸೀಟು ಪಡೆದಿದ್ದರು. ಆದರೆ ದಾಖಲಾಗಿದ್ದು ಮಾತ್ರ ಮೊದಲ ಹಂತದಲ್ಲಿ 2,885 ಮತ್ತು 2ನೇ ಹಂತದಲ್ಲಿ 527 ಮಕ್ಕಳು. ಎರಡು ಹಂತಗಳ ಲಾಟರಿ ಪ್ರಕ್ರಿಯೆಯಲ್ಲಿ ಒಟ್ಟು 7,936 ಮಂದಿಗೆ ಆರ್‌ಟಿಇ ಸೀಟು ಸಿಕ್ಕರೂ ಶಾಲೆಗೆ ದಾಖಲಾಗಿದ್ದು ಮಾತ್ರ 3,412 ಮಾತ್ರ, ಸೀಟು ಸಿಕ್ಕರೂ 4,524 ಮಕ್ಕಳು ಆರ್‌ಟಿಇ ಸೀಟು ಪಡೆಯಲೇ ಇಲ್ಲ.

ಬಾಗಲಕೋಟೆ, ಬೆಳಗಾವಿ ಹೆಚ್ಚು ದಾಖಲಾತಿ
ಅತಿ ಹೆಚ್ಚು ಆರ್‌ಟಿಇ ಸೀಟು ಭರ್ತಿಯಾದ ಜಿಲ್ಲೆಯಲ್ಲಿ ಬಾಗಲಕೋಟೆ ಮಂಚೂಣಿಯಲ್ಲಿದೆ. ಇಲ್ಲಿ ಒಟ್ಟು 1,017 ಪೈಕಿ 482 ಸೀಟು ಭರ್ತಿಯಾದರೆ, ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ 1,342 ಸೀಟಿಗೆ ಬರೋಬ್ಬರಿ 457, ಧಾರವಾಡದಲ್ಲಿ 672 ಪೈಕಿ 302, ದಾವಣಗೆರೆ ಜಿಲ್ಲೆಯಲ್ಲಿ 866 ಪೈಕಿ 300, ಕಲಬುರಗಿ ಜಿಲ್ಲೆಯಲ್ಲಿ 1,126ಕ್ಕೆ 215, ಮೈಸೂರು ಜಿಲ್ಲೆಯಲ್ಲಿ 715ಕ್ಕೆ 342 ಆರ್‌ಟಿಇ ಸೀಟುಗಳು ಭರ್ತಿಯಾಗಿವೆ.

3 ಜಿಲ್ಲೆಗಳಲ್ಲಿ ಶೂನ್ಯ ದಾಖಲಾತಿ
ರಾಜ್ಯದ ಉತ್ತರ ಕನ್ನಡ ಜಿಲ್ಲೆ, ತುಮಕೂರಿನ ಮಧುಗಿರಿ ಶೈಕ್ಷಣಿಕ ಜಿಲ್ಲೆ ಹಾಗೂ ಚಿಕ್ಕಮಗಳೂರಿನಲ್ಲಿ ಇಲ್ಲಿಯವರೆಗೆ ಒಂದು ಕೂಡ ಆರ್‌ಟಿಇ ಸೀಟು ಭರ್ತಿಯಾಗದೆ ಶೂನ್ಯ ದಾಖಲಾತಿ ಖ್ಯಾತಿಗೆ ಒಳಗಾಗಿವೆ. ಮಧುಗಿರಿಗೆ 38, ಉತ್ತರ ಕನ್ನಡ ಜಿಲ್ಲೆ 8, ಚಿಕ್ಕಮಗಳೂರು ಜಿಲ್ಲೆಗೆ ಒಟ್ಟು 64 ಆರ್‌ಇಟಿ ಸೀಟುಗಳು ನಿಗದಿಯಾಗಿವೆ. ಯಾದಗಿರಿ ಜಿಲ್ಲೆಯಲ್ಲಿ 233ಕ್ಕೆ 5, ರಾಮನಗರದಲ್ಲಿ 143 ಕ್ಕೆ 6, ಕೊಡಗು ಜಿಲ್ಲೆಯಲ್ಲಿ 20ಕ್ಕೆ ಕೇವಲ 4, ಹಾಸನ ಜಿಲ್ಲೆಯಲ್ಲಿ 194 ಸೀಟುಗೆ 5, ಚಿತ್ರದುರ್ಗದಲ್ಲಿ 294ಕ್ಕೆ 3, ಬೆಂಗಳೂರು ಉತ್ತರ ಜಿಲ್ಲೆಯಲ್ಲಿ 487 ಪೈಕಿ ಕೇವಲ 2 ಸೀಟ್‌ಗಳು ಮಾತ್ರ ಭರ್ತಿ ಆಗಿವೆ.

-ರಾಜ್ಯದ ಒಟ್ಟು ಆರ್‌ಟಿಇ ಸೀಟು -14,231
– ಸೀಟು ಪಡೆದ ವಿದ್ಯಾರ್ಥಿಗಳು – 7,936
– ಶಾಲೆಗೆ ದಾಖಲಾದ ಮಕ್ಕಳು – 3,412
– ಅತಿ ಹೆಚ್ಚು ಮಕ್ಕಳ ದಾಖಲು – 482 (ಬಾಗಲಕೋಟೆ)

ಬೇಡಿಕೆ ಕುಸಿಯಲು ಕಾರಣವೇನು?
ಆರ್‌ಟಿಇಗೆ ಅರ್ಜಿ ಹಾಕಿದ ವಿದ್ಯಾರ್ಥಿಯ ವಾಸಸ್ಥಳದಿಂದ 3 ಕಿ.ಮೀ. ವ್ಯಾಪ್ತಿಯಲ್ಲಿ ಸರಕಾರಿ ಶಾಲೆ ಇದ್ದರೆ ಆ ವಿದ್ಯಾರ್ಥಿಗೆ ಆರ್‌ಟಿಇ ಸೀಟು ಸಿಗುವುದಿಲ್ಲ. ಇದು ಸರಕಾರ ರೂಪಿಸಿದ ನಿಯಮಾವಳಿ ಆಗಿರುವುದರಿಂದ ಆರ್‌ಟಿಇ ಸೀಟುಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಕುಸಿಯುತ್ತಿದೆ.

– ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

12

Chikkaballapur: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ!

suicide (2)

Chikkaballapur: ಪೋಕ್ಸೋ ಆರೋಪಿ ಜತೆಗೆ 16 ವರ್ಷದ ಬಾಲಕಿ ಆತ್ಮಹತ್ಯೆ!

1-ffsdf

Chikkaballapur ನಗರಸಭೆ ಕೋಲಾಹಲ; ಡಾ.ಸುಧಾಕರ್ ಮೇಲುಗೈ: ಸವಾಲು ಹಾಕಿದ ಪ್ರದೀಪ್ ಈಶ್ವರ್!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.