Sports: ಬಾಳೂರು: ಅಂಧ ಕ್ರೀಡಾಪಟು ರಕ್ಷಿತಾರಾಜುಗೆ ಸ್ವಗ್ರಾಮದಲ್ಲಿ ಭವ್ಯ ಸ್ವಾಗತ, ಸನ್ಮಾನ

ಪ್ರೋತ್ಸಾಹಗಳೇ ಸಾಧನೆಗೆ ಪ್ರೇರಣೆ: ಎಂ.ಕೆ.ಪ್ರಾಣೇಶ್

Team Udayavani, Nov 21, 2023, 9:47 AM IST

2–kottigehara

ಕೊಟ್ಟಿಗೆಹಾರ: ಬಾಳೂರಿನ ಗುಡ್ನಳ್ಳಿಯ ಅಂಧ ಕ್ರೀಡಾಪಟು ರಕ್ಷಿತಾರಾಜುಗೆ ಸನ್ಮಾನ, ಪ್ರೋತ್ಸಾಹಗಳೇ ಚಿನ್ನ ಗೆಲ್ಲಲು ಸಾಧ್ಯವಾಯಿತು ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ಅವರು ಬಾಳೂರಿನ ನಾಗರೀಕರ ವೇದಿಕೆ, ಬಾಳೂರು ಗ್ರಾ.ಪಂ ಹಾಗೂ ಗ್ರಾಮಸ್ಥರ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಗುರಿ ಮುಟ್ಟಲು ಗುರುವಿನ ಪಾತ್ರ ಮುಖ್ಯವಾಗಿದ್ದು, ಅದನ್ನು ಅವರ ಕೋಚ್ ರಾಹುಲ್ ಬಾಲಕೃಷ್ಣ ಅವರ ಪರಿಶ್ರಮದಿಂದ ಇವೆಲ್ಲವೂ ಸಹಕಾರಿಯಾಗಿದೆ. ಅದರಲ್ಲೂ ಜನರ ಪ್ರೋತ್ಸಾಹದ ಸನ್ಮಾನ, ಆರ್ಥಿಕ ಸಹಕಾರ ಎರವಲು ಮಾರ್ಗದರ್ಶನ ದೊರೆತರೆ ಕ್ರೀಡಾಪ್ರತಿಭೆಗಳಿಗೆ ಸಾಧನೆ ಮಾಡಲು ಮತ್ತಷ್ಟು ಪ್ರೋತ್ಸಾಹ ದೊರೆತಂತಾಗುತ್ತದೆ. ನಾವು ಸಮಾಜದಲ್ಲಿ ಜೀವಿಸುವಾಗ ಸ್ವಾರ್ಥತೆಯಿಂದ ಬದುಕದೇ ನಿಸ್ವಾರ್ಥತೆಯಿಂದ ಛಲದಿಂದ ಬದುಕಬೇಕು’ ಎಂದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ ‘ಗ್ರಾಮೀಣ ಪ್ರತಿಭೆಯೋರ್ವರು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದು  ಸಾಧನೆ ಮಾಡಿರುವುದು ಸುಲಭದ ಮಾತಲ್ಲ. ದೇಶಕ್ಕೆ ಕೀರ್ತಿ ತಂದ ಗ್ರಾಮೀಣ ಪ್ರತಿಭೆಯ ಸಾಧನೆ ಮಲೆನಾಡಿಗೆ ಹೆಮ್ಮೆ ತಂದಂತಾಗಿದೆ. ಪ್ರತಿಭೆ ಇದ್ದವರಿಗೆ ಮಾತ್ರ ನಾವು ಬೆನ್ನು ತಟ್ಟಿದರೆ ಸಾಲದು. ಎಲ್ಲರಿಗೂ ಪ್ರತಿಭೆ ಇರುತ್ತದೆ. ಅದನ್ನು ಪ್ರೋತ್ಸಾಹ ಎಂಬ ನೀರೆರೆದರೆ ಮಾತ್ರ ಅವರೂ ಸಾಧನೆ ಮಾಡಲು ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಎಲ್ಲರಿಗೂ ರಕ್ಷಿತಾ ಅವರ ಸಾಧನೆ  ಮಾದರಿಯಾಗಿದೆ ಎಂದರು.

ನಮ್ಮಲ್ಲಿ ಎಲ್ಲವೂ ಸರಿ ಇದ್ದರೂ ಸಾಧಿಸಲು ಹಿಂಜರಿಯುತ್ತೇವೆ. ಹಿಂಜರಿಕೆಯ ಮನೋಭಾವ ಬಿಟ್ಟು ಅಂಧತ್ವ ಹೊಂದಿದ ರಕ್ಷಿತಾರ ಆತ್ಮವಿಶ್ವಾಸ ಮೈಗೂಡಿಸಿ ತಂದೆ-ತಾಯಿ ಇಲ್ಲದ ಅಬಲೆಯಾದರೂ ಮಾತನಾಡಲು ಬರದ ಅಜ್ಜಿ ಲಲಿತಮ್ಮ ಅವರ ಪ್ರೋತ್ಸಾಹ ರಕ್ಷಿತಾಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲ್ಲಲು ಸಹಕಾರಿಯಾಗಿದೆ. ಪೋಷಕರು ಇವರ ಮಾರ್ಗದರ್ಶನ ತಮ್ಮಲ್ಲಿ ಅಳವಡಿಸಿಕೊಂಡು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸ ಬೇಕು’ಎಂದು ಹೇಳಿದರು.

ನಾಗರೀಕರ ವೇದಿಕೆಯ ಅಧ್ಯಕ್ಷ ಸೋಮೇಶ್ ಮರ್ಕಲ್ ಮಾತನಾಡಿ, ಅಂಗವಿಕಲೆ ರಕ್ಷಿತಾರಾಜು ಅವರ ಚಿನ್ನದ ಸಾಧನೆ ದೇಶಕ್ಕೆ ಮಾದರಿಯಾಗಿದೆ. ಅದರಲ್ಲೂ ಕಾಫಿನಾಡಿನ ಪ್ರತಿಭೆ ಚಿನ್ನದ ಪದಕ ಪಡೆದಿರುವುದು ಬಾಳೂರು ಗ್ರಾಮವನ್ನು ದೇಶದಲ್ಲೇ ಗುರುತಿಸುವಂತೆ ಮಾಡಿದೆ. ಇದು ನಮ್ಮ ಭಾಗ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ  ಬಾಳೂರು, ಗ್ರಾ.ಪಂ.ಅಧ್ಯಕ್ಷ ಬಿ.ಬಿ.ಮಂಜುನಾಥ್, ಸತೀಶ್ ಬಾಳೂರು, ಪಿಎಸ್ಐ ವಿ.ಶ್ರೀನಾಥ್ ರೆಡ್ಡಿ, ಕೆ.ಸಿ.ಮಹೇಂದ್ರ, ಮನೋಜ್  ಮಾತನಾಡಿದರು.

ಚಿನ್ನ ಪಡೆದ ಪ್ರತಿಭೆಗಳಾದ ರಕ್ಷಿತಾರಾಜು, ಕೋಚ್ ರಾಹುಲ್, ರಾಧಾ ವೆಂಕಟೇಶ್  ಅವರನ್ನು ಪ್ರಮುಖವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ವಾಟೇಕಾನ್, ಬಾಳೂರು ಹೊರಟ್ಟಿ ಸರ್ಕಾರಿ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸ್ಥಳೀಯ ಕ್ರೀಡಾಪಟುಗಳಾದ ಧೀಮಂತ್, ಹರ್ಷ, ತರುಣ್, ಅಪ್ಸರ, ಅರ್ಪಿತ, ಅಂಕಿತ, ಹೃತ್ವರಿತೋಷ್, ನಿಶ್ಮಿತಾ, ಶಿಕ್ಷಕಿಯರಾದ ಸಿಂತಿಯಾ ಪಾಯ್ಸ್, ಮಾರ್ಗರೇಟ್ ಡಿಸೋಜ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಸ್ಮರಣಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಗಣ್ಯರಾದ ಎಂ.ಪಿ.ಪ್ರದೀಪ್, ಧೀರಜ್ ಪ್ರಭು, ಅಶೋಕ್ ಬಿಳಗಲಿ, ಬಿ.ಜಿ.ಶ್ರೀನಾಥ್, ಎಂ.ಎಲ್.ವಿಜೇಂದ್ರ, ಶಿವಶರಣ್, ರಮೇಶ್ ಕೆಳಗೂರು, ರಘುಪತಿ, ಜಯಶ್ರೀ ರಮೇಶ್, ಕೆ.ಆರ್.ಗೀತಾ, ಪರೀಕ್ಷಿತ್ ಜಾವಳಿ, ಗುಲಾಬಿ, ಡಿ.ಟಿ.ಉಮೇಶ್, ಸುರೇಶ್ ಗೌಡ, ಡಿ.ವೈ.ಮಹೇಶ್, ಪ್ರಮೀಳ ಮಂಜಯ್ಯ, ಬಿ.ಎಂ.ಪ್ರಕಾಶ್, ಬಿ.ಎಸ್. ಲಕ್ಷ್ಮಣ್, ಟಿ.ಎಂ.ಆದರ್ಶ್ ಮತ್ತಿತರರು ಇದ್ದರು. ಮನೋಜ್ ಸ್ವಾಗತಿಸಿ, ನಿರೂಪಿಸಿದರು.

ಟಾಪ್ ನ್ಯೂಸ್

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkamagaluru ಮುಖ್ಯವಾಹಿನಿಗೆ ಮರಳಿದ ನಕ್ಸಲರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮನವಿ

Chikkamagaluru ಮುಖ್ಯವಾಹಿನಿಗೆ ಮರಳಿದ ನಕ್ಸಲರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮನವಿ

CT Ravi ದೇಗುಲದಂತೆ ವಕ್ಫ್ ಮಂಡಳಿ ಆಸ್ತಿಯೂ ಸರಕಾರದ್ದಲ್ಲವೇ

CT Ravi: ದೇಗುಲದಂತೆ ವಕ್ಫ್ ಮಂಡಳಿ ಆಸ್ತಿಯೂ ಸರಕಾರದ್ದಲ್ಲವೇ

Munirathna ʼರಾಜಕೀಯ ಬಂಧನʼ ಖಂಡನೀಯ: ಬಿ.ವೈ.ರಾಘವೇಂದ್ರ

Munirathna ʼರಾಜಕೀಯ ಬಂಧನʼ ಖಂಡನೀಯ: ಬಿ.ವೈ.ರಾಘವೇಂದ್ರ

ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಬೈಕ್‌ ರೈಡ್:‌ ವಿಡಿಯೋ ವೈರಲ್

Chikkamagaluru; ಪ್ಯಾಲೆಸ್ತೀನ್ ಧ್ವಜ ಹಿಡಿದು ಬೈಕ್‌ ರೈಡ್:‌ ವಿಡಿಯೋ ವೈರಲ್

ct-ravi

Chikkamagaluru: ರಾಹುಲ್ ಗಾಂಧಿ ಭಾರತ ವಿರೋಧಿ ನಾಯಕರೆಂಬ ಅನುಮಾನ ಕಾಡುತ್ತಿದೆ: ಸಿ.ಟಿ ರವಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.