![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Oct 31, 2020, 2:47 PM IST
ಚಿಕ್ಕಮಗಳೂರು: ಇಲ್ಲಿನ ಮೈದಾಡಿ ಗ್ರಾಮದ ಮನೆಯೊಂದರ ಪಕ್ಕದ ಕಾಫಿ ತೋಟದಲ್ಲಿದ್ದ 14 ಅಡಿ ಉದ್ದದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ನಂತರ ಅದನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಯಿತು.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮೈದಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಶ್ರೀನಿವಾಸಗೌಡ ಎಂಬವರ ಕಾಫಿ ತೋಟದಲ್ಲಿ ಹೆಬ್ಬಾವು ಸೇರಿಕೊಂಡಿತ್ತು.
ಸುಮಾರು 14 ಅಡಿ ಉದ್ದವಿದ್ದ ಹೆಬ್ಬಾವನ್ನು ಕಂಡು ಶ್ರೀನಿವಾಸ ಗೌಡ ಅವರು ಉರಗ ಪ್ರೇಮಿ ರಿಜ್ವಾನ್ ಎಂಬವರನ್ನು ಕರೆಸಿದ್ದು, ಸ್ಥಳಕ್ಕಾಗಮಿಸಿದ ರಿಜ್ವಾನ್ ಹೆಬ್ಬಾವು ಸೆರೆ ಹಿಡಿದ್ದಾರೆ.
ಇದನ್ನೂ ಓದಿ:ಹಣಕಾಸು ವ್ಯವಹಾರದಲ್ಲಿ ವೈಮನಸ್ಸು: ಊಟ ಮಾಡಲು ಕರೆಸಿ ಕೊಲೆ, ಶವವನ್ನು ನದಿಗೆಸೆದ ಸ್ನೇಹಿತರು
ಸೆರೆಹಿಡಿದ ಈ ಭಾರಿ ಗಾತ್ರದ ಹೆಬ್ಬಾವನ್ನು ಕುದುರೆಮುಖ ಅರಣ್ಯಕ್ಕೆ ಬಿಡಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.