![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Oct 17, 2021, 6:28 PM IST
ಕೊಟ್ಟಿಗೆಹಾರ: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾಫಿ ಬೆಳೆಗಾರರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.
ಬಣಕಲ್, ಕೊಟ್ಟಿಗೆಹಾರ, ಫಲ್ಗುಣಿ, ಹೊರಟ್ಟಿ, ಬಾಳೂರು, ತರುವೆ, ಅತ್ತಿಗೆರೆ, ಬಿನ್ನಡಿ,ತ್ರಿಪುರ, ಗುತ್ತಿ ಸೇರಿದಂತೆ ವಿವಿದೆಡೆ ಧಾರಾಕಾರ ಮಳೆಯಾಗಿದ್ದು ಬಿಡುವು ನೀಡದೇ ಸುರಿಯುತ್ತಿರುವ ಮಳೆಯಿಂದಾಗಿ ಗಿಡದಲ್ಲಿ ಹಣ್ಣಾಗಿ ನಿಂತ ಕಾಫಿಯನ್ನು ಕುಯ್ಲು ಮಾಡಲು ಸಾಧ್ಯವಾಗದಂತಾಗಿದೆ.
ಈಗಾಗಲೇ ಕುಯ್ಲು ಮಾಡಿದ ಕಾಫಿಯನ್ನು ಮಳೆಯಿಂದಾಗಿ ಒಣಗಿಸಲು ಸಾಧ್ಯವಾಗದೇ ಕಣದಲ್ಲಿ ರಾಶಿ ಮಾಡಿದ ಕಾಫಿ ಕೊಳೆಯತೊಡಗಿದೆ. ಗಿಡದಲ್ಲಿ ಹಣ್ಣಾದ ಕಾಫಿಯನ್ನು ಕುಯ್ಯದೇ ಬಿಟ್ಟರೇ ಕಾಫಿ ಉದುರತೊಡಗುತ್ತದೆೆ. ಕಾಫಿ ಕುಯ್ಲು ಮಾಡಿದರೆ ಒಣಗಿಸಲಾಗದೇ ಕಾಫಿ ಕೊಳೆಯತೊಡಗುತ್ತದೆ. ಮಳೆಯಿಂದಾಗಿ ಕಾಫಿ ಬೆಳೆಗಾರರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಕಾಫಿ ಬೆಳೆಗಾರ ರಘು ಹೊರಟ್ಟಿ ಅವರು, ಮಳೆಯಿಂದಾಗಿ ಕಾಫಿ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ವರ್ಷ ಪೂರ್ತಿ ದುಡಿದ ಫಸಲು ಕೈ ಸೇರುವ ವೇಳೆಗೆ ಮರಿ ಸುರಿದು ಕಾಫಿ ಕೊಳೆಯತೊಡಗುತ್ತಿದೆ. ಕಾಫಿ ಬೆಳೆಗಾರರ ಬದುಕು ಕೂಡ ಕೊಳೆಯತೊಡಗಿದೆ. ಈ ಬಗ್ಗೆ ಸಂಬಅಧಪಟ್ಟ ಜನಪ್ರತಿನಿಧಿಗಳು ಬೆಳೆ ಪರಿಹಾರ ನೀಡಲು ಮುಂದಾಗಬೇಕು ಎಂದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.