![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 27, 2019, 4:43 PM IST
ಚಿಕ್ಕಮಗಳೂರು : ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿದ ಸಿಎಂ ಯಡಿಯೂರಪ್ಪ ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ನಗರದ ಮಲೆಮನೆ ಗ್ರಾಮದಲ್ಲಿ ಮಾತಾಡಿದ ಸಿಎಂ ಮೂಡಿಗೆರೆ ತಾಲೂಕಿನಲ್ಲಿ ಸಾಕಷ್ಟು ಹಾನಿಯಾಗಿದೆ,ಕಾಫಿ ತೋಟಗಳೆಲ್ಲಾ ಗರುತು ಸಿಗದ ಹಾಗೆ ಹಾನಿಯಾಗಿದೆ. ನೂರಾರು ಮನೆಗಳು ಹಾನಿಯಾಗಿದೆ,ಜನರು ಅತಂತ್ರರಾಗಿದ್ದಾರೆ. ಜನರ ನೋವಿಗೆ ಸರ್ಕಾರ ಸ್ಪಂದಿಸುತ್ತದೆ. ಸರ್ಕಾರ ಜನರೊಂದಿಗೆ ಇದೆ,ಆದಷ್ಟು ಬೇಗ ಜನರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ ಹಾಗೂ ಈ ಕುರಿತು ಜಿಲ್ಲಾಧಿಕಾರಿಗೆ ವರದಿ ತಯಾರಿಸಿಕೊಂಡು ಬೆಂಗಳೂರಿಗೆ ಬರಲು ಹೇಳಿದ್ದೇನೆ ಎಂದರು.
ಜನರು ನೆಮ್ಮದಿಯಿಂದ ಇರಲು ಸರ್ಕಾರ ಸರ್ವ ಪ್ರಯತ್ನಕ್ಕೆ ಸಿದ್ಧವಿದೆ. ಆದಷ್ಟು ಬೇಗ ಪುನರ್ ವಸತಿ ಕಲ್ಪಿಸೋಕೆ ಯೋಚನೆ ಮಾಡುತ್ತೇವೆ. ಜಮೀನು ಹಾಗೂ ವಸತಿ ಎಲ್ಲಿ ಕಲ್ಪಿಸಬೇಕೆಂದು ಯೋಚನೆ ಮಾಡುತ್ತಿದ್ದೇವೆ ಎಂದರು.
You seem to have an Ad Blocker on.
To continue reading, please turn it off or whitelist Udayavani.