![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Jun 13, 2020, 8:04 AM IST
ಕೊಪ್ಪ: ತಾಲೂಕಿನಾದ್ಯಂದ ಕಳೆದ ಎರಡು ದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ವಾಯುಭಾರ ಕುಸಿತದಿಂದ ಒಂದಷ್ಟು ಮಳೆ ಆಗಿತ್ತು. ಎರಡು ದಿನದಿಂದ ತಾಲೂಕಿನಾದ್ಯಂತ ಮಳೆಗಾಲದ ವಾತಾವರಣ ಮೂಡಿದ್ದು, ಮುಂಗಾರು ಮಳೆ ಪ್ರಾರಂಭದವಾದಂತಾಗಿದೆ.
ತಾಲೂಕಿನಲ್ಲಿ ಮೋಡ ಕವಿದ ವಾತವರಣವಿದ್ದು, ಸ್ವಲ್ಪ ಬಿಡುವು ನೀಡಿ ಬುಧವಾರ ಮಧ್ಯಾಹ್ನದಿಂದ ಉತ್ತಮವಾಗಿ ಮಳೆಯಾಗುತ್ತಿದೆ. ಚಳಿ-ಗಾಳಿ ಬೀಸುತ್ತಿದೆ. ಬುಧವಾರ ಕೊಪ್ಪ ಪಟ್ಟಣದಲ್ಲಿ 38 ಮಿ.ಮೀ., ಹರಿಹರಪುರ 31.2 ಮಿ.ಮೀ., ಜಯಪುರ 25.3 ಮಿ.ಮೀ., ಬಸರಿಕಟ್ಟೆ 24.1 ಮಿ.ಮೀ., ಕಮ್ಮರಡಿಯಲ್ಲಿ 35.5 ಮಿ.ಮೀ. ಮಳೆಯಾಗಿದೆ.
ಗಾಳಿ-ಮಳೆಗೆ ಉರುಳಿದ ಮರ: ತಾಲೂಕಿನಲ್ಲಿ ಗಾಳಿ ಸಹಿತ ಸಾಧಾರಣ ಮಳೆಯಾಗುತ್ತಿದೆ. ತುಂಗಾ ನದಿ ಸೇರಿದಂತೆ ವಿವಿಧ ಉಪ ನದಿ, ಹಳ್ಳಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಪಟ್ಟಣದ ಕ್ಷೇತ್ರ ಶಿಕ್ಷಣಾ ಧಿಕಾರಿ ಕಚೇರಿ ಬಳಿ ಮಧ್ಯಾಹ್ನ ಸುರಿದ ಗಾಳಿ- ಮಳೆಗೆ ಮರವೊಂದು ಉರುಳಿ ಬಿದ್ದಿದೆ.
You seem to have an Ad Blocker on.
To continue reading, please turn it off or whitelist Udayavani.