Kadur: ಕೊಬ್ಬರಿ ಗಾಣದಿಂದ ಎರಡು ವರ್ಷದ ಮಗುವಿನ ಅಪಹರಣ
Team Udayavani, Oct 25, 2024, 10:48 AM IST
ಚಿಕ್ಕಮಗಳೂರು: ಕೊಬ್ಬರಿ ಎಣ್ಣೆ ಗಾಣದಲ್ಲಿ ಎಣ್ಣೆ ಬಿಡಿಸಲು ತಂದೆ ಮಗು ಬಂದಿದ್ದ ವೇಳೆ ಮಹಿಳೆಯೊಬ್ಬರು ಎರಡು ವರ್ಷದ ಮಗುವನ್ನು ಅಹರಿಸಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದಲ್ಲಿ ಗುರುವಾರ (ಅ.24) ನಡೆದಿದೆ.
ಕಡೂರು ತಾಲೂಕು ಯಗಟಿ ಸಮೀಪದ ಸೀತಾಪುರ ಹಟ್ಟಿ ತಾಂಡ್ಯದ ರಘು ನಾಯಕ್ ಹಾಗೂ ಮಗಳು ಮಾನಸ ಕೊಬ್ಬರಿ ಎಣ್ಣೆ ಬಿಡಿಸಲು ಕಡೂರು ಪಟ್ಟಣದ ಕೆಎಸ್ಆರ್ ಟಿಸಿ ಬಸ್ ನಿಲ್ದಾ ಣದ ಸಮೀಪದಲ್ಲಿರುವ ಕೊಬ್ಬರಿ ಎಣ್ಣೆ ಬಿಡಿಸುವ ಗಾಣಕ್ಕೆ ಬಂದಿದ್ದಾರೆ. ತಂದೆ ರಘು ನಾಯಕ್ ಗಾಣದ ಒಳಗೆ ಕೊಬ್ಬರಿ ಇಟ್ಟು ಬರಲು ತೆರಳಿದಾಗ ಮಹಿಳೆ ಎರಡು ವರ್ಷದ ಮಗುವನ್ನು ಅಪಹರಿಸಿದ್ದಾಳೆ.
ಈ ಮಹಿಳೆ ಪಕ್ಕದ ಬಟ್ಟೆ ಅಂಗಡಿಯಲ್ಲಿ ಶಾಪಿಂಗ್ ಮಾಡುವಂತೆ ನಾಟಕವಾಡಿ ಅಂಗಡಿಯಿಂದ ಹೊರ ಬಂದಿದ್ದಾಳೆ. ಮಾನಸ ರಘು ನಾಯಕ್ ನಿಲ್ಲಿಸಿದ ಬೈಕ್ ಮುಂದೆ ನಿಂತಿದ್ದು ಈ ವೇಳೆ ಮಗುವನ್ನು ಅಪಹರಿಸಿದ್ದಾಳೆ.
ಮಗು ಕಾಣಿಸದಿದ್ದಾಗ ಹುಡುಕಾಟ ನಡೆಸಿದ ತಂದೆ ರಘು ನಾಯಕ್ ಬಟ್ಟೆ ಅಂಗಡಿ ಮುಂದಿನ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಈ ವೇಳೆ ಮಹಿಳೆ ಮಗುವನ್ನು ಅಪಹರಿಸಿರುವ ದೃಶ್ಯ ಸೆರೆಯಾಗಿದೆ.
ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಗು ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election; ಯೋಗೇಶ್ವರ್ ನಮ್ಮ ಜತೆಗಿದ್ದರು, ಈಗಿಲ್ಲ ಅಷ್ಟೇ….: ವಿಜಯೇಂದ್ರ
Hubli: ಟೀಕೆ ಮಾಡುತ್ತಿದ್ದವರೇ ಕುಟುಂಬ ರಾಜಕಾರಣಕ್ಕೆ ಬಲಿಯಾಗಿದ್ದಾರೆ: ಸತೀಶ ಜಾರಕಿಹೊಳಿ
Belagavi: ಕಿಡ್ನ್ಯಾಪರ್ಸ್ ಗೆ ಗುಂಡಿನ ರುಚಿ ತೋರಿಸಿ ಮಕ್ಕಳನ್ನು ರಕ್ಷಿಸಿದ ಪೊಲೀಸರು
Koppala: ಮರಕುಂಬಿ ಪ್ರಕರಣದ ಅಪರಾಧಿ ಆಸ್ಪತ್ರೆಯಲ್ಲಿ ಸಾವು
Congress MLA; ಸೈಲ್ ಬಂಧನ.. ಇಂದು ಶಿಕ್ಷೆ ಪ್ರಮಾಣ ಪ್ರಕಟ: ಏನಿದು ಪ್ರಕರಣ?
MUST WATCH
ಹೊಸ ಸೇರ್ಪಡೆ
Kaup ಪೇಟೆ ಕೊಳಚೆಗೆ ಕೃಷಿ ಭೂಮಿಗಳೇ ಬಲಿ!; 80ಕ್ಕೂ ಅಧಿಕ ಮನೆಗಳಿಗೆ ನಿತ್ಯ ಯಾತನೆ
Selfie Gone Wrong: ಕಾಡಾನೆ ಎದುರು ಸೆಲ್ಫಿ ತೆಗೆಯಲು ಹೋಗಿ ಜೀವ ಕಳೆದುಕೊಂಡ ಯುವಕ
By Election; ಯೋಗೇಶ್ವರ್ ನಮ್ಮ ಜತೆಗಿದ್ದರು, ಈಗಿಲ್ಲ ಅಷ್ಟೇ….: ವಿಜಯೇಂದ್ರ
Mangaluru: ವಿಶೇಷ ಮಕ್ಕಳ ಕಂಗಳಲ್ಲಿ ಬಣ್ಣದ ಹಣತೆಗಳ ಕಾಂತಿ
PM Modi: ಕಟ್ಟಡ ಕುಸಿತ: ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ 2 ಲಕ್ಷ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.