Kottigehara:ಒಪ್ಪತ್ತಿನ ಊಟ ಬಿಟ್ಟು ದೇಶ ಸೇವೆಗೆ ಆರ್ಥಿಕ ನೆರವು ನೀಡುವ ಮಹಾನುಭಾವ

ಯೋಧರಿಗೆ ಆರ್ಥಿಕ ನೆರವು ನೀಡುವ ದೇಶ ಭಕ್ತ ನರಸಿಂಹರಾವ್ ಹೆಬ್ಬಾರ್

Team Udayavani, Sep 11, 2024, 2:57 PM IST

Kottigehara:ಒಪ್ಪತ್ತಿನ ಊಟ ಬಿಟ್ಟು ದೇಶ ಸೇವೆಗೆ ಆರ್ಥಿಕ ನೆರವು ನೀಡುವ ಮಹಾನುಭಾವ

ಕೊಟ್ಟಿಗೆಹಾರ: ಸೈನ್ಯಕ್ಕೆ ಸೇರಬೇಕೆಂಬ ಮಹಾ ಆಸೆಯಿಂದ ವಂಚಿತರಾಗಿದ್ದ ವ್ಯಕ್ತಿ ಒಬ್ಬರು ಸೈನ್ಯಕ್ಕೆ ಹಣ ಕಳಿಸುವ ಮೂಲಕ ದೇಶಪ್ರೇಮ ಮೆರೆದ ಅಪರೂಪದ ವ್ಯಕ್ತಿಯೊಬ್ಬರ ಕಥೆ ಇದು.

ಸೈನ್ಯಕ್ಕೆ ಸೇರಲಾಗದಿದ್ದರೂ ಒಪ್ಪತ್ತಿನ ಊಟ ಬಿಟ್ಟು ದೇಶ ಸೇವೆಗೆ ಆರು ದಶಕಗಳಿಂದ ದೇಶದ ಸೈನ್ಯದ ಖಾತೆಗೆ ಹಣ ಕಳುಹಿಸುತ್ತಿರುವ ದೇಶ ಭಕ್ತ ನರಸಿಂಹರಾವ್ ಹೆಬ್ಬಾರ್ ಕೂಡ ಒಬ್ಬರು.

ಸುಮಾರು 86 ವರ್ಷದ ಹೆಬ್ಬಾರ್ ಮೂಡಿಗೆರೆ ತಾಲ್ಲೂಕಿನ ಕೂವೆಯ ಮಾವಿನಕಟ್ಟೆ ನಿವಾಸಿ. ನಮಗೆ ವಯಸ್ಸಾಗಿದೆ ಮನೆಯಲ್ಲಿ ವಿಶ್ರಾಂತಿ ಪಡೆದರೆ ಸಾಕು ಎಂದು ಕೊಂಡು ಜೀವನ ನಡೆಸುವ ಜನರೇ ಹೆಚ್ಚು.‌ ಆದರೆ ನರಸಿಂಹರಾವ್ ಹೆಬ್ಬಾರ್ ಸಣಕಲು ದೇಹವಾಗಿದ್ದರೂ ಪಾದರಸದಂತೆ ಚುರುಕು. ಮನೆಯಲ್ಲಿ ಸುಮ್ಮನೇ ಕೂರುವುದಿಲ್ಲ.

 

ಕೊಟ್ಟಿಗೆಹಾರ, ಬಾಳೆಹೊನ್ನೂರು,ಮತ್ತಿತರ ಕಡೆ ವೀಳ್ಯದೆಲೆ ವ್ಯಾಪಾರದ ಕೆಲಸವನ್ನು ಮಾಡಿ ದಿನ ಸಾಗಿಸುತ್ತಾರೆ.

ಯುವಕನಿರುವಾಗ ಸೈನ್ಯಕ್ಕೆ ಸೇರಬೇಕೆನ್ನುವ ಕನಸು ಹೊತ್ತಿದ್ದರು. ಆದರೆ ಅವರಿಗೆ ಎರವಲು ಮಾರ್ಗದರ್ಶನದ ಕೊರತೆಯಿಂದ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುವ ಅವಕಾಶ ದೊರೆಯಲಿಲ್ಲ. ಆಗ ಅವರು ದೇಶ ಪ್ರೇಮ ಬೆಳೆಸಿಕೊಳ್ಳಲು ಸೈನ್ಯಕ್ಕೆ ಪ್ರತಿ ವಾರ ಒಂದು ದಿನ ಒಪ್ಪತ್ತಿನ ಉಪವಾಸ ಮಾಡಿ ತಿಂಗಳಿಗೆ ರೂ400ರಂತೆ ಹಣ ಕಳುಹಿಸುತ್ತಾರೆ. ಈಗಲೂ ಕೂಡ ಎಲೆ ಮರೆಯಂತೆ ಸೈನ್ಯದ ಖಾತೆಗೆ ಹಣ ಕಳುಹಿಸಿ ಮಾನವೀಯತೆ ದೇಶಪ್ರೇಮ ಬೆಳೆಸಿಕೊಂಡಿದ್ದಾರೆ.ಯೋಧರೆಂದರೆ ಇವರಿಗೆ ಅಪಾರ ಪ್ರೀತಿ.

6 ದಶಕಗಳ ಹಿಂದೆ ಭಾರತದ ಪ್ರಧಾನಿ ಲಾಲ್ ಬಹದ್ದೂರು ಶಾಸ್ತ್ರಿ ಯವರು 1964ರಲ್ಲಿ ಬರಗಾಲದ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಒಂದು ದಿನ ಉಪವಾಸ ಇದ್ದು ಸೇನಾ ರಕ್ಷಣಾ ನಿಧಿಗೆ ಹಣ ಕಳುಹಿಸಿ ಎಂದು ಸುತ್ತೋಲೆ ಹೊರಡಿಸಿದ್ದರಂತೆ. ಆ ಒಂದು ಮಾತು ನರಸಿಂಹರಾವ್ ಹೆಬ್ಬಾರರಿಗೆ ಆಳವಾಗಿ ನಾಟಿದ್ದು ಅದನ್ನು ಅವರು ಆಣೆ, ಪೈಸೆ ಬಳಿಕ ರೂಪಾಯಿಯಲ್ಲಿ ನೀಡಿದ ದಾಖಲೆ ಅವರು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಚಾಚೂ ತಪ್ಪದೇ ತನ್ನ ದಿನದ ಪಡಿಯನ್ನು ಸಂಗ್ರಹಿಸಿ ದೇಶದ ಸೇವೆಗೆ ನೀಡುತ್ತಿರುವುದು ಅಪ್ಪಟ ದೇಶ ಭಕ್ತರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.

ಇವರ ದೇಶಪ್ರೇಮಕ್ಕೆ ವಿವಿಧ ಸಂಘ ಸಂಸ್ಥೆಗಳಿಂದ ಹಲವು ಪ್ರಶಸ್ತಿಗಳು ಸಂದಿವೆ. ಇವರು ಬರೀ ಸೈನ್ಯಕ್ಕೆ ಮಾತ್ರ ಹಣ ನೀಡುತ್ತಿಲ್ಲ. ವಿವಿಧ ಸಂಘ ಸಂಸ್ಥೆಗಳಿಗೂ ತನ್ನ ವ್ಯಾಪಾರದಲ್ಲಿ ಬಂದ ಹಣದಲ್ಲಿ ದಾನ ನೀಡುತ್ತಿದ್ದಾರೆ. ನಾನು ಕೊಡುವ ಹಣ ಉತ್ತಮ ಕೆಲಸಗಳಿಗೆ ಸದುದ್ದೇಶಕ್ಕೆ ವಿನಿಯೋಗವಾಗಲಿ ಎಂಬುದು ನರಸಿಂಹ ಅವರ ಕನಸು. ಏನೇ ಆಗಲಿ, 87ರ ಹರಯದಲ್ಲೂ ಮನೆಯಲ್ಲಿ ಕೂರದೇ ತನಗಾದ ಕೆಲಸವನ್ನು ನಿಷ್ಟೆಯಿಂದ ಮಾಡಿ ವಾರದಲ್ಲಿ ಮೂರು ದಿನ ಹೊರ ಬಂದು ದುಡಿಯುತ್ತಿದ್ದಾರೆ.

ಮಕ್ಕಳು ಮನೆಯಲ್ಲಿ ಇರಿ ಎಂದರೂ ಕೇಳದೇ ಓಡಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಅವರು ಉತ್ತರ ಕೊಡುತ್ತಾರೆ. ಹೆಬ್ಬಾರ್ ಅಪ್ಪಟ ಯಕ್ಷಗಾನ ಕಲಾವಿದರಾಗಿದ್ದು ಸ್ಥಳೀಯ ಯಕ್ಷಗಾನ ಕಲಾವಿದರಿಗೂ ನೆರವು ನೀಡಿದ್ದಾರೆ. ಹಿಂದಿನಿಂದಲೂ ಯಕ್ಷಗಾನ ಕಲಾವಿದರಿಗೆ ಸನ್ಮಾನ ಮಾಡುತ್ತಾ ಬಂದಿದ್ದು ಕಲಾವಿದರನ್ನು ಕಂಡರೂ ಇವರಿಗೆ ಅಪಾರ ಗೌರವ. ದೇಶಭಕ್ತ ನರಸಿಂಹರಾವ್ ಹೆಬ್ಬಾರ್ ಅವರ ಕಾರ್ಯವನ್ನು ಸ್ಥಳೀಯರು, ದೇಶಾಭಿಮಾನಿಗಳು ಶ್ಲಾಘಿಸಿದ್ದಾರೆ.

ಟಾಪ್ ನ್ಯೂಸ್

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

5-savanur

ಖಾಯಂ ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ;ಗ್ರಾ.ಪಂ.ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkamagaluru ಮುಖ್ಯವಾಹಿನಿಗೆ ಮರಳಿದ ನಕ್ಸಲರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮನವಿ

Chikkamagaluru ಮುಖ್ಯವಾಹಿನಿಗೆ ಮರಳಿದ ನಕ್ಸಲರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮನವಿ

CT Ravi ದೇಗುಲದಂತೆ ವಕ್ಫ್ ಮಂಡಳಿ ಆಸ್ತಿಯೂ ಸರಕಾರದ್ದಲ್ಲವೇ

CT Ravi: ದೇಗುಲದಂತೆ ವಕ್ಫ್ ಮಂಡಳಿ ಆಸ್ತಿಯೂ ಸರಕಾರದ್ದಲ್ಲವೇ

Munirathna ʼರಾಜಕೀಯ ಬಂಧನʼ ಖಂಡನೀಯ: ಬಿ.ವೈ.ರಾಘವೇಂದ್ರ

Munirathna ʼರಾಜಕೀಯ ಬಂಧನʼ ಖಂಡನೀಯ: ಬಿ.ವೈ.ರಾಘವೇಂದ್ರ

ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಬೈಕ್‌ ರೈಡ್:‌ ವಿಡಿಯೋ ವೈರಲ್

Chikkamagaluru; ಪ್ಯಾಲೆಸ್ತೀನ್ ಧ್ವಜ ಹಿಡಿದು ಬೈಕ್‌ ರೈಡ್:‌ ವಿಡಿಯೋ ವೈರಲ್

ct-ravi

Chikkamagaluru: ರಾಹುಲ್ ಗಾಂಧಿ ಭಾರತ ವಿರೋಧಿ ನಾಯಕರೆಂಬ ಅನುಮಾನ ಕಾಡುತ್ತಿದೆ: ಸಿ.ಟಿ ರವಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.