![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 12, 2021, 10:42 AM IST
ಚಿಕ್ಕಮಗಳೂರು.ಅ.12: ಗಿಡದಲ್ಲಿ ಕಾಫಿ ಹಣ್ಣು ನಳನಳಿಸ್ತಿದೆ. ಆಕಾಶದಲ್ಲಿ ಕಡುಗಟ್ಟಿರೋ ಮೋಡ ನಿರಂತರ ಮಳೆ ಸುರಿಸುತ್ತಿದೆ. ನೆಲದಲ್ಲಿ ಶೀಥ ಹೆಚ್ಚಾಗಿದೆ. ಮಳೆ ಜೊತೆ ಹಣ್ಣು ನೆಲಕುದುರುತ್ತಿದೆ. ಬೆಳೆಗಾರರು ಗಿಡದಲ್ಲಿರೋ ಕಾಫಿಯನ್ನೂ ಉಳಿಸಿಕೊಳ್ಳೋಕು ಆಗುತ್ತಿಲ್ಲ. ಕೊಯ್ದ ಕಾಫಿಯನ್ನ ಒಣಗಿಸಿಕೊಳ್ಳೋದಕ್ಕೂ ಆಗುತ್ತಿಲ್ಲ.
ಕಾಫಿನಾಡ ಸದ್ಯದ ವಾತಾವರಣ ಮಲೆನಾಡಿಗರ ಜೀವಾಳ ಕಾಫಿ ಈ ವರ್ಷವೂ ಮಣ್ಣು ಪಾಲಾಗುತ್ತಾ ಎಂಬ ಅನುಮಾನ ದಟ್ಟವಾಗಿದೆ. ಜಿಲ್ಲೆಯಲ್ಲಿ ಅಂದಾಜು ಒಂದು ಲಕ್ಷ ಹೆಕ್ಟೇರ್ನಲ್ಲಿ ಅರೇಬಿಕಾ ಹಾಗೂ ರೋಬೋಸ್ಟಾ ಕಾಫಿಯನ್ನ ಬೆಳೆದಿದ್ದಾರೆ. ಆದರೆ, ಕಾಫಿ ಈ ವರ್ಷವೂ ಬೆಳೆಗಾರರ ಕೈಸೇರವುದು ಅನುಮಾನವೆನಿಸಿ ಬೆಳೆಗಾರರು ಕಂಗಾಲಾಗಿದ್ದಾರೆ.
ಯಾಕಂದ್ರೆ, ಕಾಫಿನಾಡ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಹೀಗೆ ನಿರಂತರ ಮಳೆ ಆಗುತ್ತಿರುವುದರಿಂದ ಕೆಲ ಭಾಗದಲ್ಲಿ ಕಾಫಿ ಅವಧಿಗೆ ಮುನ್ನವೇ ಹಣ್ಣಾಗಿ ನೆಲಕುದುರುತ್ತಿದೆ. ಗಿಡದಲ್ಲೇ ಹಣ್ಣಾಗಿರೋ ಕಾಫಿಯನ್ನ ಕೊಯ್ಯೋದಕ್ಕೂ ವರುಣದೇವ ಅಡ್ಡಗಾಲಾಗಿದ್ದಾನೆ. ಇದರಿಂದ ಕಾಫಿ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಸುರಿಯೋ ಮಳೆಯಲ್ಲೇ ಕಾಫಿ ಹಣ್ಣನ್ನ ಕೊಯ್ಯುವಂತಹಾ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:- ಮೂರು ವರ್ಷದಿಂದ ಜಿಲ್ಲೆಗಿಲ್ಲ ಬರ ಬಾಧೆ!
ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಸಮೀಪದ ಕಾರ್ ಬೈಲ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಕಾಫಿ ಬೆಳೆಗಾರರು ಈಗಾಗಲೇ ಮಳೆಯಲ್ಲೇ ಕಾಫಿ ಹಣ್ಣನ್ನ ಕೊಯ್ಯಲು ಮುಂದಾಗುತ್ತಿದ್ದಾರೆ. ಒಂದೆಡೆ ಕೂಲಿಗಾರರ ಸಮಸ್ಯೆ. ಮತ್ತೊಂದೆಡೆ ಕೊಯ್ದ ಕಾಫಿಯನ್ನ ಒಣಗಿಸಲು ಬಿಸಿಲು ಇಲ್ಲದೆ ಬೆಳೆಗಾರರು ಪರಿಪಾಟಲು ಅನುಭವಿಸುತ್ತಿದ್ದಾರೆ. ಕೆಲ ಕಾಫಿ ತೋಟದಲ್ಲಿ ಮಳೆಯಿಂದ ಕಾಫಿಯನ್ನ ಕಟಾವು ಮಾಡಲಾಗದೆ ಕೈಚೆಲ್ಲಿದ್ದಾರೆ. ಹೀಗೆ ಬಿಟ್ಟ ಕಾಫಿ ನೆಲಕ್ಕುದುರಿ ಇಡೀ ತೋಟದಾದ್ಯಂತ ಕೆಟ್ಟ ವಾಸನೆಗೆ ತಿರುಗಿದೆ. ನಿರಂತರ ಮಳೆ-ಮೋಡದಿಂದ ಬೆಳೆಗಾರರು ಹೈರಾಣಾಗಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷದಿಂದಲೂ ಕಾಫಿ ಬೆಳೆಗಾರರ ಗೋಡಾನ್ ಸೇರಿದ್ದಕ್ಕಿಂತ ಮಣ್ಣು ಸೇರಿ ಅದೇ ತೋಟಕ್ಕೆ ಗೊಬ್ಬರವಾಗಿದ್ದೆ ಹೆಚ್ಚು. ಮಳೆಯಿಂದ ರೈತರು ಸಾಲಗಾರರಾಗಿದ್ದೇ ಜಾಸ್ತಿ. ಈ ವರ್ಷ ಮುಂಗಾರು ಆಶಾದಾಯಕವಾಗಿತ್ತು. ಕಾಫಿಗೆ ಸಕಾಲಕ್ಕೆ ಮಳೆಯಾಗಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಕಾಫಿನಾಡಲ್ಲಿ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ಯಾವಾಗಂದರೆ ಆವಾಗ ಮಳೆ-ಮೋಡ-ಬಿಸಿಲಿನಿಂದ ಬೆಳೆಗಾರರು ಬಸವಳಿದಿದ್ದಾರೆ.
ಪ್ರಕೃತಿ ಮುಂದೆ ಸೋತು ಕೈಚೆಲ್ಲಿ ಕೂತಿದ್ದಾರೆ. ಮಳೆಯಲ್ಲೇ ಕಾಫಿಯನ್ನ ಕೊಯ್ಲು ಮಾಡೋಣವೆಂದರೆ ಕೂಲಿ ಕಾರ್ಮಿಕರ ಸಮಸ್ಯೆ. ಹೆಚ್ಚಿನ ಕೂಲಿ ನೀಡಿ ಕೊಯ್ಲು ಮಾಡೋದಕ್ಕೂ ಭಯ. ಮಳೆಯಲ್ಲಿ ತೊಯ್ದು-ತೊಪ್ಪೆಯಾದ ಕಾಫಿಯನ್ನ ಸಕಾಲದಲ್ಲಿ ಒಣಗಿಸಿಲ್ಲ ಅಂದರೆ ಅದೂ ಕೂಡ ಸಮಸ್ಯೆ. ಶೀಥಕ್ಕೆ ಇಟ್ಟ ಜಾಗದಲ್ಲೇ ಕೊಳೆಯುತ್ತದೆ. ಕೊಟ್ಟ ಕೂಲಿಯೂ ವ್ಯರ್ಥವಾಗುವಂತಹಾ ಸ್ಥಿತಿ ಕಾಫಿ ಬೆಳೆಗಾರರನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ.
ಇದು ಒಬ್ಬಿಬ್ಬರ ರೈತರ ನೋವಲ್ಲ. ಕಾಫಿನಾಡ ಬಹುತೇಕ ರೈತರ ಅಳಲು. ಹಾಗಾಗಿ, ಸರ್ಕಾರ ಕೂಡಲೇ ಸಣ್ಣ ಹಾಗೂ ಮಧ್ಯಮ ವರ್ಗದ ಕಾಫಿ ಬೆಳೆಗಾರರ ನೆರವಿಗೆ ನಿಲ್ಲದಿದ್ದರೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳೋದು ಗ್ಯಾರಂಟಿ ಎಂದು ಬೆಳೆಗಾರರ ಪರಿಸ್ಥಿತಿಯನ್ನ ಬೆಳೆಗಾರರೇ ವಿಶ್ಲೇಷಿಸಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.