![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Aug 13, 2019, 5:27 PM IST
ಚಿಕ್ಕಮಗಳೂರು: ಈ ಬಾರಿಯ ಭಾರೀ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾರೀ ಹಾನಿ ಸಂಭವಿಸಿದೆ. ಇಲ್ಲಿ ಕಾಣಿಸಿಕೊಂಡ ಪ್ರವಾಹ ಮತ್ತು ಭೂಕುಸಿತ ಘಟನೆಗಳಲ್ಲಿ ನೂರಾರು ಸ್ಥಳೀಯರು ಸಿಲುಕಿಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ದುರ್ಗಮವಾದ ಜಲಾವೃತ ಪ್ರದೇಶಗಳಿಂದ ಮತ್ತು ಕುಸಿದ ಗುಡ್ಡಗಳ ನಡುವೆ ಸಿಲುಕಿದ್ದವರನ್ನು ಭಾರತೀಯ ಸೇನೆಯ ರಕ್ಷಣಾ ಕಾರ್ಯಾಚರಣೆ ತಂಡದ ಯೋಧರು ತಮ್ಮ ಜೀವ ಪಣಕ್ಕಿಟ್ಟು ಕಾಪಾಡಿದ್ದರು.
ಇದೀಗ ಈ ಭಾಗಗಲ್ಲಿ ಮಳೆ ಮತ್ತು ನೆರೆಯ ಪ್ರತಾಪ ಕೊಂಚ ಮಟ್ಟಿಗೆ ಇಳಿಮುಖವಾಗಿದೆ ಹಾಗೂ ಈ ಭಾಗದಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯವೂ ಅಂತ್ಯಗೊಂಡಿದೆ. ತಮ್ಮ ಕಾರ್ಯವನ್ನು ಮುಗಿಸಿ ಹಿಂತಿರುಗಲು ಸಿದ್ಧರಾಗಿದ್ದ ಭಾರತೀಯ ಸೇನೆಯ ಯೋಧರಿಗೆ ಮೂಡಿಗೆರೆ ಭಾಗದ ಜನ ಭಾವುಕ ವಿದಾಯ ಕೋರಿದ್ದಾರೆ.
ತಮ್ಮ ಕರ್ತವ್ಯ ಮುಗಿಸಿ ಹೊರಟಿದ್ದ ಯೋಧರಿಗೆ ಕೃತಜ್ಞತೆ ಸಲ್ಲಿಸಿದ ಮೂಡಿಗೆರೆಯ ಜನತೆ, ‘ನಿಮ್ಮಿಂದಾಗಿ ನಮ್ಮ ಪ್ರಾಣ ಉಳಿದಿದೆ..’ ಎಂದು ಯೋಧರಿಗೆ ಕೈಮುಗಿದು ವಿದಾಯ ಹೇಳಿದ್ದಾರೆ. ಇನ್ನು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪ್ರತೀ ಸೈನಿಕರ ಕೈಗೂ ರಾಖಿ ಕಟ್ಟುವ ಮೂಲಕ ಭಾವನಾತ್ಮಕ ವಿದಾಯವನ್ನು ಕೋರಿದ್ದಾರೆ.
ಈ ಜನರ ಮುಗ್ದ ಪ್ರೀತಿಗೆ ಆಶ್ಚರ್ಯಗೊಂಡ ಸೈನಿಕರು, ನಾವೆಂದೂ ನಿಮ್ಮ ಜೊತೆಗಿರುತ್ತೇವೆ, ನಾಡಿನ ಸೇವೆಗೆ ನಾವು ಸದಾ ಸಿದ್ಧ ಎಂದು ಹೇಳಿ ತಮ್ಮಲ್ಲಿದ್ದ ಹಣ್ಣು, ಬಿಸ್ಕತ್ತುಗಳನ್ನು ಸಂತ್ರಸ್ತರಿಗೆ ಹಂಚಿದರು. ಬಳಿಕ ಸೈನಿಕರ ತಂಡವು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.