ನಾಳೆಯಿಂದ ಮಾರಿಕಾಂಬಾ ಜಾತ್ರೆ
ಮಾರಿಕಾಂಬಾ ಜಾತ್ರೆ
Team Udayavani, Jan 31, 2021, 5:35 PM IST
ಚಳ್ಳಕೆರೆ: ತಾಲೂಕಿನ ನಗರಂಗೆರೆ ಗ್ರಾಮ ದೇವತೆ ಶ್ರೀ ಮಾರಿಕಾಂಬಾ (ಮಾರಮ್ಮ) ದೇವಿಯ ಜಾತ್ರೆ ಫೆ. 1ರಿಂದ 6ರ ತನಕ ನಡೆಯಲಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಜಾತ್ರಾ ಮಹೋತ್ಸವ ಇದಾಗಿದ್ದು, ಜಾತ್ರೆ ಹಿನ್ನೆಲೆಯಲ್ಲಿ ನಗರಂಗೆರೆ ಗ್ರಾಮಕ್ಕೆ ಹೊರಗಿನ ಯಾವ ವ್ಯಕ್ತಿಯೂ ಸಹ ಪ್ರವೇಶ ಮಾಡುವಂತಿಲ್ಲ. ಹಾಗಾಗಿ ಗ್ರಾಮದ ನಾಲ್ಕೂ ದಿಕ್ಕುಗಳಲ್ಲಿ ರಸ್ತೆಗೆ ಅಡ್ಡಲಾಗಿ ಬೇಲಿ ಹಾಕಲಾಗಿದೆ. ಯಾರಾದರೂ ನಿಯಮ ಮೀರಿ ಗ್ರಾಮದ ಒಳಗೆ ಪ್ರವೇಶಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬುಧವಾರ ಜಾತ್ರೆಯ ಅಂತಿಮ ದಿನವಾಗಿದ್ದು, ಶಾಸಕ ಟಿ. ರಘುಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ, ಅಂಗಡಿ ರಮೇಶ್, ಯರ್ರಮ್ಮ, ಹಿದಾಯತ್, ಗ್ರಾಮದ ಮುಖಂಡರಾದ ಸಿ. ಓಬಣ್ಣ, ಪುಟ್ಟಲಿಂಗಪ್ಪ, ಓಂಕಾರಪ್ಪ ಮೊದಲಾದವರು ಪಾಲ್ಗೊಳ್ಳುವರು. ಫೆ. 1 ರಂದು ಗಂಗಾ ಪೂಜೆ, 2 ರಂದು ದೇವಿಯ ಪ್ರತಿಷ್ಠಾಪನೆ ಮತ್ತು ಮಹಿಷೋತ್ಸವ, 3 ರಂದು ಗ್ರಾಮಸ್ಥರಿಂದ ಹಿಟ್ಟಿನ ಆರತಿ, 4 ರಂದು ಆದಿಕರ್ನಾಟಕ ಸಮಾಜದ ಭಕ್ತರಿಂದ ಹಿಟ್ಟಿನ ಆರತಿ, 5 ರಂದು ಅಸಾದಿ ಕಾರ್ಯಕ್ರಮ, 6 ರಂದು ಶ್ರೀದೇವಿಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.