Chitradurga: ದೆವ್ವ ಬಿಡಿಸುವ ನೆಪದಲ್ಲಿ ಬಾಲಕಿ ಮೇಲೆ ಮೌಲ್ವಿ ಅತ್ಯಾಚಾರ
Team Udayavani, Jun 4, 2024, 6:30 AM IST
![rape](https://www.udayavani.com/wp-content/uploads/2024/06/rape-620x412.jpg)
![rape](https://www.udayavani.com/wp-content/uploads/2024/06/rape-620x412.jpg)
ಚಿತ್ರದುರ್ಗ: ಕುರಾನ್ ಪಠಿಸಲು ಮಸೀದಿಗೆ ಬರುತ್ತಿದ್ದ ಬಾಲಕಿಗೆ ದೆವ್ವ ಹಿಡಿದಿದೆ ಎಂದು ನಂಬಿಸಿ, ಆಕೆಗೆ ಲೈಂಗಿಕ ಕಿರುಕುಳ ನೀಡಿದ ನಗರದ ಮಸೀದಿಯೊಂದರ ಮೌಲ್ವಿ ಹಾಗೂ ಬಾಲಕಿಯ ಸಹೋದರನನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶ ಮೂಲದ ಮೌಲ್ವಿ ಅಬ್ದುಲ್ ರೆಹಮಾನ್ ಹಾಗೂ ಬಾಲಕಿಯ ಅಣ್ಣ ಬಂ ಧಿತರು. 17 ವರ್ಷದ ಬಾಲಕಿ ಮೂರು ವರ್ಷಗಳಿಂದ ಕುರಾನ್ ಪಠಿಸಲು ಮಸೀದಿಗೆ ಹೋಗುತ್ತಿದ್ದಳು. ಒಂದು ವರ್ಷದ ಹಿಂದೆ ಈ ಬಾಲಕಿಗೆ ಗಾಳಿ ಸೋಕಿದೆ, ನಿಮ್ಮ ಮನೆಯಲ್ಲಿ ದೈವಕಾರ್ಯ ಮಾಡಿಸಬೇಕು ಎಂದು ಬಾಲಕಿಯ ತಾಯಿಯನ್ನು ಮೌಲ್ವಿ ನಂಬಿಸಿದ್ದ. ಅದರಂತೆ ಪ್ರತಿ ವಾರ ಮನೆಗೆ ಹೋಗಿ ಧಾರ್ಮಿಕ ಕ್ರಿಯೆ ಮಾಡುವಾಗ ಬಾಲಕಿಯ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ.
ಅಲ್ಲದೆ, ಆರು ತಿಂಗಳ ಹಿಂದೆ ಬಾಲಕಿಯ ಅಣ್ಣ ಹಾಗೂ ಮೌಲ್ವಿಯು ಬಾಲಕಿಯನ್ನು ಕೊಠಡಿಗೆ ಕರೆದೊಯ್ದು, ತಾಯಿಯನ್ನು ಹೊರಗೆ ಕಳುಹಿಸಿದ್ದರು. ದೆವ್ವಕ್ಕೆ ದೈಹಿಕ ಸುಖ ಕೊಟ್ಟರೆ ಶಾಂತಿಯಾಗಲಿದೆ ಎಂದು ಬಾಲಕಿಯ ಅಣ್ಣನನ್ನೂ ನಂಬಿಸಿ ಆತನಿಂದಲೇ ಅತ್ಯಾಚಾರ ಮಾಡಿಸಿದ್ದ ಮೌಲ್ವಿ, ಅದನ್ನು ವೀಡಿಯೋ ಚಿತ್ರೀಕರಿಸಿಕೊಂಡಿದ್ದ. ಅನಂತರ ತಾನೂ ಅತ್ಯಾಚಾರ ಎಸಗಿದ್ದ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಮೇ 30ರಂದು ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಗರ್ಭಪಾತವಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಗರದ ಮಹಿಳಾ ಠಾಣೆ ಪೊಲೀಸರು ಇಬ್ಬರನ್ನೂ ಪೋಕೊÕà ಮತ್ತಿತರ ಕಾಯ್ದೆಗಳಡಿ ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ](https://www.udayavani.com/wp-content/uploads/2025/02/Gangolli-3-150x84.jpg)
![Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ](https://www.udayavani.com/wp-content/uploads/2025/02/Gangolli-3-150x84.jpg)
Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ
![Chi-narabalui](https://www.udayavani.com/wp-content/uploads/2025/02/Chi-narabalui-150x90.jpg)
![Chi-narabalui](https://www.udayavani.com/wp-content/uploads/2025/02/Chi-narabalui-150x90.jpg)
Chitradurga: ನಿಧಿಯ ಆಸೆಗೆ ಜ್ಯೋತಿಷಿ ಮಾತು ಕೇಳಿ ನರಬಲಿ: ಅಮಾಯಕನ ಕೊಲೆ!
![CTD-Nagasadhu-Died](https://www.udayavani.com/wp-content/uploads/2025/01/CTD-Nagasadhu-Died-150x90.jpg)
![CTD-Nagasadhu-Died](https://www.udayavani.com/wp-content/uploads/2025/01/CTD-Nagasadhu-Died-150x90.jpg)
Stampede: ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಕರ್ನಾಟಕ ಮೂಲದ ನಾಗಾಸಾಧು ಮೃತ್ಯು!
![ಬಿಜೆಪಿ ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ](https://www.udayavani.com/wp-content/uploads/2025/01/k-venkatesh-minister-150x96.jpg)
![ಬಿಜೆಪಿ ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ](https://www.udayavani.com/wp-content/uploads/2025/01/k-venkatesh-minister-150x96.jpg)
BJP ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ ವೆಂಕಟೇಶ್
![CTD-Vanivilasa](https://www.udayavani.com/wp-content/uploads/2025/01/CTD-Vanivilasa-150x90.jpg)
![CTD-Vanivilasa](https://www.udayavani.com/wp-content/uploads/2025/01/CTD-Vanivilasa-150x90.jpg)
Chitradurga: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರ ಬಿಡಿಗಾಸು ಕೊಟ್ಟಿಲ್ಲ: ಸಿಎಂ