ಉದ್ಯಮಿಗಳ ಮೇಲಿನ ಪ್ರೀತಿ ಜನರ ಮೇಲೆ ಏಕಿಲ್ಲ? ಸರಕಾರಗಳ ವಿರುದ್ಧ ರಾಹುಲ್ ಕಿಡಿ
Team Udayavani, Oct 11, 2022, 11:35 PM IST
ಚಿತ್ರದುರ್ಗ: ಬಡವರು, ರೈತರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯ ಮಾಡುವುದನ್ನು ಬಿಟ್ಟು ಬಿಜೆಪಿ ಸರಕಾರ ಕೆಲವೇ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದರು.
ಚಳ್ಳಕೆರೆ ಹೊರವಲಯದ ಸಿದ್ದಾಪುರ ಬಳಿ ಭಾರತ್ ಜೋಡೋ’ ಯಾತ್ರೆಯ 12ನೇ ದಿನದ ಪಾದಯಾತ್ರೆ ಮುಗಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಯುದ್ದಕ್ಕೂ ರೈತರು, ಮಹಿಳೆಯರು, ಕಾರ್ಮಿಕರು, ವೃದ್ಧರು ಸೇರಿ ಸಾಕಷ್ಟು ಜನರ ಜತೆ ಮಾತನಾಡುತ್ತಾ ಬಂದಿದ್ದೇನೆ. ಯಾರೂ ಖುಷಿಯಾಗಿಲ್ಲ. ರೈತರು ಎರಡು ಬಂಡೆಗಳ ನಡುವೆ ಸಿಲುಕಿದಂತಾಗಿದ್ದಾರೆ. ಒಂದು ಕಡೆ ಗೊಬ್ಬರ, ಕೃಷಿ ಪರಿಕರಗಳ ಖರೀದಿ ಗೆ ಜಿಎಸ್ಟಿ ವಿ ಧಿಸಿದ್ದಾರೆ. ರೈತರು ಬೆಳೆದ ಬೆಲೆಗೆ ಸರಿಯಾದ ಬೆಲೆಯೂ ಸಿಗುತ್ತಿಲ್ಲ.
ರಾಜ್ಯದ ಒಬ್ಬನೇ ಒಬ್ಬ ರೈತ ಕೃಷಿಯಿಂದ ಲಾಭ ಬರುತ್ತಿದೆ ಎಂದು ಹೇಳಿಲ್ಲ. ಹಾಕಿದ ಬಂಡವಾಳ ವಾಪಸ್ ಬಾರದ ಸ್ಥಿತಿಯಲ್ಲಿದ್ದಾರೆ. ಇಡೀ ಕುಟುಂಬ ಸೇರಿ ಕೆಲಸ ಮಾಡುತ್ತಾರೆ, ಆದರೂ ಸಂಕಷ್ಟ ತಪ್ಪಿಲ್ಲ ಎಂದು ರೈತ ಸಮುದಾಯದ ಕಷ್ಟ-ನಷ್ಟಗಳ ಕುರಿತು ಪ್ರಸ್ತಾವಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರರಿದ್ದರು.
ಬರಿಗಾಲಲ್ಲಿ ಹೆಜ್ಜೆ ಹಾಕಿದ ಚಾಂಡಿ ಉಮನ್
ಕೇರಳ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿ ಅವರ ಪುತ್ರ ಚಾಂಡಿ ಉಮನ್ ಭಾರತ್ ಜೋಡೋ ಯಾತ್ರೆಯಲ್ಲಿ ಬರಿಗಾಲಿನಲ್ಲಿ ನಡೆಯುವ ಮೂಲಕ ಗಮನ ಸೆಳೆದರು. ಕನ್ಯಾಕುಮಾರಿಯಿಂದ ಬರಿಗಾಲಿನಲ್ಲಿ ನಡೆಯುತ್ತಿದ್ದೇನೆ. ಈ ಯಾತ್ರೆ ಮೂಲಕ ದೇಶದ ಸಮಗ್ರತೆ ಹಾಗೂ ಐಕ್ಯತೆಯ ಸಂದೇಶ ಸಾರಲಾಗುತ್ತಿದೆ. ಸಹೋದರತ್ವ, ಸಮಾನತೆ ಸಾರುವ ಕೆಲಸ ಮಾಡಲಾಗುತ್ತಿದೆ ಎಂದರು.
“ಭಾರತ್ ಜೋಡೋ’ದಲ್ಲಿ ಮಕ್ಕಳ ದುರ್ಬಳಕೆ ಆಗಿಲ್ಲ
ಚಿತ್ರದುರ್ಗ: ಭಾರತ್ ಜೋಡೋ’ ಯಾತ್ರೆಯಲ್ಲಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣ ಆಯೋಗ ದೂರು ದಾಖಲಿಸಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷದಿಂದ 50 ಪುಟಗಳ ಉತ್ತರ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾಲಿನ ಬರವಣಿಗೆಗೆ ರಾಹುಲ್ ಅಚ್ಚರಿ
ಮಂಗಳವಾರ ಮಧ್ಯಾಹ್ನ ರಾಹುಲ್ ಗಾಂಧಿ ಅವರೊಂದಿಗೆ ನಡೆದ ಸಂವಾದದಲ್ಲಿ ಭಾಗವಹಿಸಿದ್ದ ಶಿಕ್ಷಕಿ ಮಹಾಲಕ್ಷ್ಮೀ ಅವರು ಕಾಲಿನ ಬೆರಳುಗಳ ಸಹಾಯದಿಂದ ಬರವಣಿಗೆ ಮಾಡಿದ್ದನ್ನು ಕಂಡು ರಾಹುಲ್ ಗಾಂ ಧಿ ತಮ್ಮ ಭಾಷಣದಲ್ಲಿ ಅಚ್ಚರಿ ವ್ಯಕ್ತಪಡಿಸಿದರು. ಎರಡೂ ಕೈ ಇಲ್ಲದ ಮಹಿಳೆಯನ್ನು ನಾನು ಭೇಟಿಯಾದಾಗ ಇವರು ಬಟ್ಟೆ ಹೇಗೆ ಧರಿಸುತ್ತಾರೆ, ಶೂಗಳನ್ನು ಹೇಗೆ ಹಾಕಿಕೊಳ್ಳುತ್ತಾರೆ, ಜೀವನ ನಿರ್ವಹಣೆ ಹೇಗೆ ಎಂಬ ಆಲೋಚನೆ ಬಂದಿತ್ತು. ಮರುಕ್ಷಣ ಅವರೊಬ್ಬ ಶಿಕ್ಷಕಿ ಎಂಬ ವಿಚಾರ ತಿಳಿಯಿತು, ಆಗ ಅವರು ಹೇಗೆ ಪರೀಕ್ಷೆ ಬರೆದರು, ಯಾರಾದರೂ ಸಹಾಯ ಮಾಡಿದರಾ ಎಂದು ಪ್ರಶ್ನಿಸಿದೆ. ತಕ್ಷಣ ಕಾಲಿನ ಬೆರಳುಗಳಲ್ಲಿ ಪೆನ್ನು ಹಿಡಿದು ಸುಂದರವಾದ ಅಕ್ಷರಗಳನ್ನು ಬರೆದರು.
ಕಾಲಿನಿಂದ ಬರೆಯಲು ಬಹಳ ಕಷ್ಟವಾಗಬಹುದು ಅಲ್ವಾ, ಈ ಕಾರಣಕ್ಕೆ ಪರೀಕ್ಷೆಯಲ್ಲಿ ಹೆಚ್ಚು ಸಮಯ ಕೊಟ್ಟಿರಬಹುದಾ, ಅಂಕಗಳನ್ನು ಹೆಚ್ಚು ಕೊಟ್ಟಿರಬಹುದಾ ಎಂದರೆ ಅಂಥದ್ದೇನೂ ಇಲ್ಲ. ನಮಗೆ ಇದ್ಯಾವುದು ಬೇಕಿಲ್ಲ. ನನ್ನಲ್ಲಿ ಸಾಮರ್ಥ್ಯ ಇದೆ ಎಂದು ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tirupati Case; ಮತಾಂತರಗೊಂಡ ಜಗನ್ ರಿಂದ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ: ಈಶ್ವರಪ್ಪ
Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ
Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ
Karnataka HC: ಪಾಕಿಸ್ತಾನ ಹೇಳಿಕೆ ನೀಡಿದ ಹೈಕೋರ್ಟ್ ಜಡ್ಜ್ ಗೆ ಸುಪ್ರೀಂ ಕೋರ್ಟ್ ತರಾಟೆ
Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.