ಈ ಸರಕಾರಿ ಪಿಯು ಕಾಲೇಜಿನಲ್ಲಿ ಫಲಿತಾಂಶ ಶೇ.90% ಬಂದರೂ ಸಮಸ್ಯೆಗಳು ಮಾತ್ರ ಶೇ.100 ರಷ್ಟಿದೆ

ವಿದ್ಯಾರ್ಥಿಗಳಿಗೆ ಬೇಕಾಗಿದೆ ಮೂಲಭೂತ ಸೌಕರ್ಯ

Team Udayavani, Jun 12, 2024, 9:06 PM IST

ಈ ಸರಕಾರಿ ಪಿಯು ಕಾಲೇಜಿನಲ್ಲಿ ಫಲಿತಾಂಶ ಶೇ.90% ಬಂದರೂ ಸಮಸ್ಯೆಗಳು ಮಾತ್ರ ಶೇ.100 ರಷ್ಟಿದೆ

ಹೊಳಲ್ಕೆರೆ :ಜನಾಕರ್ಷಣೆಯ ಕಣ್ಮನಸೆಳೆಯುವ ನೋಟ, ಪ್ಯಾಶನ್ ಗ್ಲಾಸ್, ಹೊರಗೆ ಎಷ್ಟೊಂದು ಸುಂದರ ಎನ್ನುವಂತಿರುವ ಪಟ್ಟಣದ ಸರಕಾರಿ ಪಿಯು ಕಾಲೇಜು 2024ನೇ ಶೈಕ್ಷಣಿಕ ವರ್ಷದ ಆರಂಭಕ್ಕೆ ಬರಪೂರ ಸಿದ್ದತೆ ಕೈಗೊಂಡಿದ್ದರೂ, ಸಮಸ್ಯೆಗಳ ಸರಮಾಲೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕುತ್ತು ತಂದೊಡ್ಡಿದೆ.

ಕೊಠಡಿ ಕೊರತೆ, ದುರಸ್ತಿ ಕಾಣದ ಬೋಧನಾ ಕೊಠಡಿಗಳು, ಮುರಿದ ಪೀಠೋಪಕರಣ, ಗ್ರಂಥಾಲಯ, ಪ್ರಯೋಗಾಲಯ, ಶೌಚಾಲಯ ಗೃಹವಿಲ್ಲದೆ ಪರಿತಪ್ಪಿಸುವ ವಿದ್ಯಾರ್ಥಿಗಳು ಹೀಗೆ ಶೈಕ್ಷಣಿಕ ಸೌಲಭ್ಯಗಳ ಸಮಸ್ಯೆ ಹೊತ್ತು ಇದ್ದುದರಲ್ಲೇ ಗುರಿ ತಲುಪಿ ಕಲಾ ವಿಜ್ಞಾನ ವಾಣಿಜ್ಯ ವಿಭಾಗದ ಐದಾರು ನೂರು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಕಟ್ಟಲು ಹೆಣಗಾಡುವ ಸ್ಥಿತಿ.

1993ರಲ್ಲಿ ಆರಂಭಗೊಂಡ ಪಿಯು ಕಾಲೇಜಿಗೆ 2006 ರಲ್ಲಿ ಸ್ವಂತ ಕಟ್ಟಡ ನಿರ್ಮಿಸಿದ್ದರೂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಕಾಲೇಜಿನಲ್ಲಿ ಆರ್ಥಿಕ ದುರ್ಬಲ ಕುಟುಂಬದ ಹಿನ್ನಲೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶೈಕ್ಷಣಿಕ ಸೌಲಭ್ಯಗಳ ಕೊರತೆ ಜತೆ ವಿದ್ಯಾರ್ಥಿ, ಉಪನ್ಯಾಸಕರು ಇದ್ದುದರಲ್ಲೇ ಶೇ 90+ ಫಲಿತಾಂಶ ಕೊಟ್ಟ ಹೆಗ್ಗಳಿಕೆ ಇದೆ.

ಕಟ್ಟಡಕ್ಕೆ ಬೇಕಿದೆ ಕಾಯಕಲ್ಪ : ಸುಣ್ಣಬಣ್ಣವಿಲ್ಲದೆ ಅಲ್ಲಲ್ಲಿ ಬಿರುಕು ಬಿಟ್ಟ ಗೋಡೆ, ಮಳೆಗೆ ತೊಟ್ಟಿಕ್ಕುವ ಆರ್‌ಸಿಸಿ, ಮುರಿದ ಬಾಗಿಲು, ಕಿತ್ತು ಹೊದ ಕಿಟಕಿ, ಅಲ್ಲಲ್ಲಿ ಒಡೆದ ಗಾಜು, ಮುರಿದ ಕುರ್ಚಿ ಬೆಂಜ್, ವಾಚನಾಲಯವಿಲ್ಲದೆ ಧೂಳು ತಿನ್ನುವ ಪುಸ್ತಕ, ಪ್ರತ್ಯೇಕ ಕೊಠಡಿ ಇಲ್ಲದ ಪ್ರಯೋಗಾಲಯ, ಶೌಚಾಲಯ, ವಿದ್ಯುತ್, ನೀರು ಸೇರಿ ಮತ್ತೀತರ ಸೌಲಭ್ಯಗಳಿಗೆ ಕಾಯಕಲ್ಪ ನೀಡಬೇಕು.

ಶೌಚಾಲಯಕ್ಕೆ ಹೋರಾಟ: ಕಾಲೇಜು ಕಟ್ಟಡದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಮಲಮೂತ್ರ ವಿಸರ್ಜನೆ ವಿದ್ಯಾರ್ಥಿಗಳಿಗೆ ಸವಾಲಾಗಿದೆ. ಹಾಗಾಗಿ ಕದ್ದು ಮುಚ್ಚಿ ಕಾಲೇಜು ಗೋಡೆ ಸಂದಿಯಲ್ಲಿ ಜಲಬಾಧೆ ತೀರಿಸುಕೊಳ್ಳಬೇಕಿದೆ. ಶೌಚಾಲಯಕ್ಕಾಗಿ ಕಳೆದ ಹತ್ತು ವರ್ಷದಿಂದ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಬೆಳಿಗ್ಗೆ ಯಿಂದ ಸಂಜೆ 5 ರ ತನಕ ಕಾಲೇಜು ಇದ್ದರೂ ಶೌಚಾಲಯದ ಸಮಸ್ಯೆಗೆ ಎಷ್ಟೋ ವಿದ್ಯಾರ್ಥಿಗಳು ಮಧ್ಯಾಹ್ನದ ತರಗತಿಗೆ ಚಕ್ಕರ್ ಹಾಕಿ ಮನೆಗೆ ಹೋಗುತ್ತಿದ್ದಾರೆ.

ಕೊಠಡಿ ನಿರ್ಮಾಣಕ್ಕೆ ಬೇಡಿಕೆ : ಪ್ರವೇಶ ಪಡೆವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಈಗಿನ ಕೊಠಡಿ ಸಂಖ್ಯೆ ಸಾಲುತ್ತಿಲ್ಲ. ಉಪನ್ಯಾಸಕರು ಕಟ್ಟಡದ ಕಟ್ಟೆ, ಹಾಲ್, ಆವರಣದಲ್ಲಿ ಭೋದಿಸಬೇಕು. ಹತ್ತಾರು ಬೋಧನಾ ಕೊಠಡಿ, ಗ್ರಂಥಾಲಯ, ವಾಚನಾಲಯ, ಸಿಬ್ಬಂದಿ, ಮಹಿಳೆಯರ ಕೊಠಡಿ, ಪ್ರಯೋಗಾಲಯಕ್ಕೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಆಗಬೇಕು.

ಹೆಚ್ಚುತ್ತಿರುವ ಅನೈತಿಕ ಚುಟುವಟಿಕೆ : ಕಾಲೇಜು ಕಟ್ಟಡದ ಸುತ್ತಲು ಕಾಪೌಂಡ್ ಕಟ್ಟಿ ಗೇಟ್ ಸೌಲಭ್ಯ ಬೇಕು. ರಾತ್ರಿ ಕುಡುಗರ ಹಾವಳಿ ಹೆಚ್ಚಾಗಿ ಬಾಡಲಿ, ಕಪ್, ಪ್ಲಾಸ್ಟಿಕ್ ಕವರ್ ಬಿದ್ದಿರುತ್ತವೆ. ದಾರಿ ಹೊಕ ಭಿಕ್ಷುಕರು ತಂಗುತ್ತಿದ್ದಾರೆ. ಅನೈತಿಕ ಚಟುವಟಿ ಹೆಚ್ಚಾಗಿ, ಗೋಡೆ ಮೇಲೆ ಕಿಡಿಗೇಡಿಗಳ ಅಶ್ಲೀಲ ಬರವಣಿಗೆಯ ಕಿರಿಕಿರಿ ವಿದ್ಯಾರ್ಥಿಗಳು ಬೇಸತ್ತಿದ್ದಾರೆ.

ಒಟ್ಟಾರೆ ಹೇಳುವುದಾರೇ ಸಮಸ್ಯೆಗಳ ಸಂತೆ ಎನ್ನಲಾಗುವ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಸರಕಾರ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಕಾಲೇಜಿನಲ್ಲಿ ಸಮಸ್ಯೆಗಳು ಸಾಕಷ್ಟಿವೆ. ತುತ್ತಾಗಿ ಶೌಚಾಲಯ, ಕೊಠಡಿ, ಕಾಪೌಂಡು, ಪೀಠೋಪಕರಣ ಬೇಕು. ಇಲಾಖೆಗೆ ಸೌಕರ್ಯಕ್ಕಾಗಿ ಸಾಕಷ್ಟು ಭಾರಿ ಪತ್ರ ಬರೆದಿದೆ. ಇರುವ ಸೌಲಭ್ಯ ಜತೆ ಶಿಕ್ಷಣ ಕೊಡುವುದು ಕಠಿಣ ಮತ್ತು ಅನಿವಾರ್ಯ ಹೌದು.
-ಶಿವಪ್ಪ.ಡಿ ಪ್ರಾಚಾರ್ಯರು.

ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಒಳಗೆ ಕಿಟಕಿ, ಭಾಗಿಲು ಮುರಿದಿವೆ. ಸುಣ್ಣಬಣ್ಣವಿಲ್ಲದೆ ಪಾಳು ಬಿದ್ದಂತೆ ಕಾಣುವ ಗೋಡೆಗಳು. ಜನಪ್ರತಿನಿಧಿಗಳು, ಸರಕಾರದ ನಿರ್ಲಕ್ಷ್ಯ ವಿದ್ಯಾರ್ಥಿಗಳನ್ನು ಶೋಷಿಸುವುದು ಸರಿಯಲ್ಲ, ಅಗತ್ಯ ಸೌಲಭ್ಯ ಕಲ್ಪಿಸಬೇಕು.
-ಎಸ್.ಆರ್.ಮೋಹನ್ ನಾಗರಾಜ್, ಮಾಜಿ ಅಧ್ಯಕ್ಷ ತಾ.ಪಂ.

ಕಾಲೇಜಿನ ದುಸ್ಥಿತಿ ಕಂಡರೇ ಬೇಸರವಾಗುತ್ತದೆ. ವಿದ್ಯಾರ್ಥಿಗಳಿಗೆ ಒಂದು ಶೌಚಾಲಯ ಕಟ್ಟಿಲ್ಲದ ಕಟ್ಟಡದಲ್ಲಿ ಮಕ್ಕಳು ಹೇಗೆ ವಿದ್ಯಾಭ್ಯಾಸ ಮಾಡಬೇಕು. ಇಲ್ಲಿಗೆ ಬೇಕಾದ ಸೌಲಭ್ಯ ಕಲ್ಪಿಸಲು ತಾಲೂಕು ಆಡಳಿತ ಕ್ರಮ ವಹಿಸಬೇಕು.
– ಹೆಚ್.ಆರ್.ನಾಗರತ್ನವೇದಮೂರ್ತಿ ಪುರಸಭೆ ಸದಸ್ಯರು.

-ಎಸ್.ವೇದಮೂರ್ತಿ ಹೊಳಲ್ಕೆರೆ

 

ಟಾಪ್ ನ್ಯೂಸ್

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

eshwarappa

Shimoga; ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ..: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Mumbai: ಭಯೋತ್ಪಾದಕ ದಾಳಿ ಸಾಧ್ಯತೆ-ಗುಪ್ತಚರ ಇಲಾಖೆ: ಮುಂಬೈನಲ್ಲಿ‌ ಬಿಗಿ ಪೊಲೀಸ್ ಭದ್ರತೆ

Mumbai: ಭಯೋತ್ಪಾದಕ ದಾಳಿ ಸಾಧ್ಯತೆ-ಗುಪ್ತಚರ ಇಲಾಖೆ: ಮುಂಬೈನಲ್ಲಿ‌ ಬಿಗಿ ಪೊಲೀಸ್ ಭದ್ರತೆ

Belagavi; Letter to CM on division of Belgaum district after Dussehra: Hebbalkar

Belagavi; ದಸರಾ ಬಳಿಕ ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸಿಎಂಗೆ ಪತ್ರ: ಹೆಬ್ಬಾಳಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

ವಿದ್ಯುತ್ ಪರಿವರ್ತಕದ ಬಳಿ ಮೇಯುತ್ತಿದ್ದ 2 ಎಮ್ಮೆಗಳಿಗೆ ವಿದ್ಯುತ್ ಪ್ರವಹಿಸಿ ಸಾವು

karajola

Siddaramaiah ಭಂಡತನದಿಂದ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ: ಗೋವಿಂದ ಕಾರಜೋಳ

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

ಮಳೆ ಬಂದರೆ ಸೋರುತ್ತೆ ಕುಂಬಾರಹಟ್ಟಿ ಶಾಲೆ; ಹೊಸ ಆರ್‌ ಸಿಸಿ ಕೊಠಡಿಯೂ ಶಿಥಿಲ

ಮಳೆ ಬಂದರೆ ಸೋರುತ್ತೆ ಕುಂಬಾರಹಟ್ಟಿ ಶಾಲೆ; ಹೊಸ ಆರ್‌ ಸಿಸಿ ಕೊಠಡಿಯೂ ಶಿಥಿಲ

Renukaswamy

Renukaswamy Case: ಮಗ ಬೇಡಿಕೊಂಡ ಫೋಟೋ ನೋಡಲಾರೆ: ತಾಯಿ ರತ್ನಪ್ರಭಾ ಕಣ್ಣೀರು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

eshwarappa

Shimoga; ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ..: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.