ಮುರುಘಾ ಮಠದ ಸೊಬಗು ಪ್ರವಾಸಿಗರ ಬೆರಗು


Team Udayavani, Aug 16, 2022, 7:30 AM IST

Add thumb-2

ನಾಡಿನ ಮಠ ಪರಂಪರೆಗಳಲ್ಲಿ ಅಗ್ರ ಸ್ಥಾನದಲ್ಲಿರುವ ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠ ದಿನೇ-ದಿನೇ ಭಕ್ತರ ಜೊತೆಗೆ ಪ್ರವಾಸಿಗರಿಗೂ ಅಚ್ಚುಮೆಚ್ಚಿನ ತಾಣವಾಗುತ್ತಿದೆ.

ಧಾರ್ಮಿಕ ನೇತೃತ್ವದ ಜೊತೆ ಜೊತೆಗೆ ಡಾ|ಶ್ರೀ ಶಿವಮೂರ್ತಿ ಮುರುಘಾ ಶರಣರು, ಹಿಂದುಳಿದ ಚಿತ್ರದುರ್ಗ ಜಿಲ್ಲೆಯನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡು ಅನುಷ್ಠಾನಕ್ಕೆ ತರುತ್ತಿದ್ದಾರೆ.

ಚಿತ್ರದುರ್ಗದ ಐತಿಹಾಸಿಕ ಕೋಟೆಯ ವೀಕ್ಷಣೆಗೆ ಬರುವ ಪ್ರವಾಸಿಗರು ಮುರುಘಾ ಮಠದ ಶ್ರೀಗಳ ಆಶೀರ್ವಾದ ಹಾಗೂ ಅದರ ಸೊಬಗ ಸವಿಯುವುದನ್ನು ಮರೆಯದಂತೆ ಮಠ ರೂಪುಗೊಂಡಿದೆ. ಶ್ರೀಗಳು ದೇಶ-ವಿದೇಶಗಳಲ್ಲಿ ಪ್ರವಾಸ ಮಾಡುವ ವೇಳೆ ಉತ್ತಮ ಸಂಗತಿಗಳನ್ನು ಪಟ್ಟಿ ಮಾಡಿಕೊಂಡು ಬಂದು ಇಲ್ಲಿ ಅಳವಡಿಸುವ ಮೂಲಕ ಮಧ್ಯ ಕರ್ನಾಟಕದಲ್ಲಿರುವ ಹೆಮ್ಮೆಯ ಮುರುಘಾ ಮಠ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಮಾಡಿದ್ದಾರೆ.

ಮುರುಘಾ ಶ್ರೀ ಮ್ಯೂಸಿಯಂ: ಮುರುಘಾ ಶ್ರೀಗಳ ವಿಶಿಷ್ಟ ಆಲೋಚನೆಯ ಫಲವಾಗಿ ದೇಶದಲ್ಲೇ ಅತ್ಯುತ್ತಮ ಎನ್ನಿಸುವಂತಹ ವಸ್ತು ಸಂಗ್ರಹಾಲಯ ಮಠದ ಆವರಣದಲ್ಲಿ ಮೈದಳೆದು ನಿಂತಿದೆ. ಮಠದಲ್ಲಿದ್ದ ಹಾಗೂ ಶ್ರೀಗಳು ಪ್ರವಾಸದ ಸಂದರ್ಭದಲ್ಲಿ ಸಂಗ್ರಹಿಸಿದ ವಸ್ತುಗಳೂ ಒಳಗೊಂಡಂತೆ ಎಲ್ಲ ಪ್ರಾಚ್ಯ ವಸ್ತುಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಶ್ರೀಗಳು ರೂಪಿಸಿರುವ ಮ್ಯೂಸಿಯಂ ಒಂದು ಅಧ್ಯಯನ ಕೇಂದ್ರವೂ ಆಗಿದೆ.

ಕ್ರಿ.ಶ. 1 ರಿಂದ 16ನೇ ಶತಮಾನದವರೆಗಿನ ನಾಣ್ಯಗಳು, ಪಂಚಲೋಹದಲ್ಲಿ ತಯಾರಾದ ಶಿವ ಪಾರ್ವತಿಯರ ಜತೆಗೆ ಗಣೇಶನಿರುವ ಶಿಲ್ಪ, ದುರ್ಗಾದೇವಿ, ಸರಸ್ವತಿ, ಲಕ್ಷ್ಮೀ, ವಿಷ್ಣು, ಲಕ್ಷ್ಮೀ ನರಸಿಂಹ, ಕುದುರೆಗಳು, ಚಲಿಸುವ ಭಂಗಿಯ ಆನೆಗಳು, ವೀರಗಲ್ಲು, ಮಾಸ್ತಿಕಲ್ಲು, ನಂದಿ, ಸಪ್ತ ಮಾತೃಕೆಯರು, ಬೃಹತ್‌ ಗಾತ್ರದ ಬಾಗಿಲು, ಮಂಚ, ಹಿಂದಿನ ಶ್ರೀಗಳು ಬಳಕೆ ಮಾಡಿರುವ ಅಮೂಲ್ಯವಾದ ವಸ್ತುಗಳು, ಹಲವು ಹಸ್ತಪ್ರತಿಗಳು, ಆಯುಧಗಳು ಹೀಗೆ ನೂರಾರು ವಸ್ತುಗಳು ಮ್ಯೂಸಿಯಂನ ಅಂದವನ್ನು ಹೆಚ್ಚಿಸಿವೆ.

ಮುರುಘಾ ಮಠದ ಉದ್ಯಾನದಲ್ಲಿ ಆದಿ ಮಾನವನಿಂದ ಆಧುನಿಕ ಮಾನವನ ಹಂತದವರೆಗೆ ನಡೆದು ಬಂದ ವಿಕಾಸ ಪ್ರಕ್ರಿಯೆ ಹಾಗೂ ಕಾಯಕ ಸಂಸ್ಕೃತಿಯನ್ನು ಬಿಂಬಿಸುವ ಹತ್ತಾರು ಕಲಾಕೃತಿಗಳನ್ನು ಸೃಷ್ಟಿಸಲಾಗಿದೆ. 2010ರ ದಸರೆಯಲ್ಲಿ ಔಪಚಾರಿಕವಾಗಿ ಉದ್ಘಾಟನೆಯಾದ ಮುರುಘಾ ವನಕ್ಕೆ ಈಗ ದಶಕ ತುಂಬಿದೆ. ಜೀವ ಸಂಕುಲದ ವಿಕಾಸ ಪಕ್ರಿಯೆ, ಶರಣ ಪರಂಪರೆ ಹಾಗೂ ಕಾಯಕ ಸಂಸ್ಕೃತಿಯನ್ನು ಬಿಂಬಿಸುವ ಹತ್ತಾರು ಕಲಾಕೃತಿಗಳ ಮೂಲಕ ನೂರಾರು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ. “ಅಂದಿನಿಂದ-ಇಂದಿನವರೆಗೆ’ ಎಂಬ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಇಲ್ಲಿನ ಕಲಾಕೃತಿಗಳಲ್ಲಿ ಕ್ರಿಸ್ತ ಪೂರ್ವ ಮತ್ತು ನಂತರದ ಜೀವ ವಿಕಾಸದ ಬೆಳವಣಿಗೆಯ ಮಜಲುಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

ಅವನತಿ ಹೊಂದಿದ ಪ್ರಾಣಿಗಳು (ಡೈನೋಸಾರ್‌) ಆದಿ ಮಾನವರ ಜೀವನ ಕ್ರಮಗಳನ್ನು ಬಿಂಬಿಸುವ ಸಿಮೆಂಟಿನ ಕಲಾಕೃತಿಗಳನ್ನು ನಿರ್ಮಿಸಿರುವ ಕಲಾವಿದರು ಅವುಗಳಿಗೆ ಜೀವ ತುಂಬಿದ್ದಾರೆ. ಮಾನವನ ಜೀವನ ವಿಕಾಸದ ವಿವಿಧ ಮಜಲುಗಳನ್ನು ಕಟ್ಟಿಕೊಡುವ ಸಿಮೆಂಟಿನ ಕಲಾಕೃತಿಗಳು ಇಲ್ಲಿ ಅತ್ಯಂತ ಆಕರ್ಷಕವಾಗಿವೆ. ಸಾವಿರಾರು ವರ್ಷಗಳ ಹಿಂದೆ ಇದ್ದ ದೈತ್ಯಾಕಾರದ ಡೈನೋಸಾರ್‌ಗಳು, ದನ ಕರುಗಳು, ಹಳ್ಳಿಕಾರ್‌ ತಳಿಯ ಹಾಲುಣಿಸುತ್ತಿರುವ ಹಸು, ಜಿಂಕೆ, ನವಿಲು, ಮೊಸಳೆ, ಜಿರಾಫೆ ಮತ್ತಿತರ ಪ್ರಾಣಿ, ಪಕ್ಷಿಗಳ ಜತೆಯಲ್ಲಿ ಸಹಜೀವನ ಸಂದೇಶ ಸಾರುವ ಹಾವುಗಳ ಹಲವಾರು ಕಲಾಕೃತಿಗಳಿವೆ. ಕದಳೀವನಕ್ಕೆ ಹೊರಟುನಿಂತ ಅಕ್ಕ ಮಹಾದೇವಿ, ಶರಣನೊಬ್ಬನ ಮಾತು ಕೇಳುತ್ತಿರುವ ಗ್ರಾಮೀಣ ಜನರು ಹಾಗೂ ಗ್ರಾಮೀಣ ದೈನಂದಿನ ಬದುಕನ್ನು ಬಿಂಬಿಸುವ ಹಲವು ಕಲಾಕೃತಿಗಳು ಉದ್ಯಾನದಲ್ಲಿ ನಿರ್ಮಾಣಗೊಂಡಿವೆ.

ಕೂಡಲಸಂಗಮದ ಐಕ್ಯಮಂಟಪ, ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡುತ್ತಿರುವ ಮೊಸಳೆ, ಪೆಂಗ್ವಿನ್‌, ನೀರಾನೆ ಹಾಗೂ ವಿವಿಧ ಪ್ರಭೇದಗಳ ಕೊಕ್ಕರೆಗಳನ್ನು ನಿರ್ಮಿ ಸಲಾಗಿದೆ. ಸಮೀಪದ ಮರದ ಮೇಲೆ ಗೂಬೆ, ಹದ್ದು, ಗಿಡುಗ, ಪಾರಿವಾಳ ಸೇರಿದಂತೆ ಪಕ್ಷಿಗಳ ಸಮೂಹವಿದೆ. ಇವೆಲ್ಲ ಜೀವಂತ ಹಕ್ಕಿಗಳೇನೋ ಎನ್ನಿಸುವಷ್ಟು ಸಹಜತೆಯಿಂದ ಈ ಕಲಾಕೃತಿಗಳು ಆಕರ್ಷಿಸುತ್ತವೆ. ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದ ಕಲಾವಿದ ಸಂಗಮೇಶ ಕತ್ತಿ ಮತ್ತು ಅವರ ಸಂಗಡಿಗರಾದ ಹದಿನೈದು ಕಲಾವಿದರು ಕಳೆದ ಒಂದೂವರೆ ವರ್ಷ ನಿರಂತರವಾಗಿ ದುಡಿದು ಈ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ಡಾ|ಶಿವಮೂರ್ತಿ ಮುರುಘಾ ಶರಣರ ಕಲ್ಪನೆ ಮತ್ತು ಮಾರ್ಗದರ್ಶನದಲ್ಲಿ ಈ ಕಲಾವಿದರು ಸಿಮೆಂಟಿನ ಕಲಾಕೃತಿ ರೂಪಿಸಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.

ನವ ಮುರುಘಾವನಕ್ಕೆ ದಶಕದ ಸಂಭ್ರಮ
ಚಿತ್ರದುರ್ಗದ ಮುರುಘಾ ಮಠವೆಂದರೆ ಅದು ಪ್ರಕೃತಿಯ ಮಧ್ಯದಲ್ಲಿರುವ ಪ್ರಶಾಂತ ತಾಣ. ಸದಾ ಹಚ್ಚ ಹಸಿರು ವಾತಾವರಣ. ಪ್ರಾಣಿ, ಪಕ್ಷಿಗಳ ಕಲರವ. ಮನಸ್ಸಿಗೆ ನೆಮ್ಮದಿ ನೀಡುವ ತಾಣ. ಇದೇ ಜಾಗಕ್ಕೆ ಡಾ| ಶಿವಮೂರ್ತಿ ಮುರುಘಾ ಶರಣರು ಒಂದಿಷ್ಟು ಹೊಸ ಟಚ್‌ ಕೊಟ್ಟಿದ್ದು, ಈ ವಾತಾವರಣದಲ್ಲಿ ಓಡಾಡುತ್ತಾ ಮನಸ್ಸಿಗೆ ಮುದ ನೀಡುವ, ಮನುಷ್ಯನ ವಿಕಾಸವನ್ನು ಅಧ್ಯಯನ ಮಾಡುವ, ಮಕ್ಕಳಿಗೆ ಮನರಂಜನೆ ನೀಡುವ ಥೀಮ್‌ ಪಾರ್ಕ್‌ ರೂಪಿಸಿದ್ದಾರೆ.

-ತಿಪ್ಪೇಸ್ವಾಮಿ ನಾಕೀಕೆರೆ

 

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ

Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ

Chi-narabalui

Chitradurga: ನಿಧಿಯ ಆಸೆಗೆ ಜ್ಯೋತಿಷಿ ಮಾತು ಕೇಳಿ ನರಬಲಿ: ಅಮಾಯಕನ ಕೊಲೆ!

CTD-Nagasadhu-Died

Stampede: ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಕರ್ನಾಟಕ ಮೂಲದ ನಾಗಾಸಾಧು ಮೃತ್ಯು!

ಬಿಜೆಪಿ ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ

BJP ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ ವೆಂಕಟೇಶ್‌

CTD-Vanivilasa

Chitradurga: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರ ಬಿಡಿಗಾಸು ಕೊಟ್ಟಿಲ್ಲ: ಸಿಎಂ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.