1923ರ ಮಾರಿ ಬೊಳ್ಳಕ್ಕೆ 100 ವರ್ಷ ಪೂರ್ಣ!

ಪಾಣೆಮಂಗಳೂರಿನ ಕಟ್ಟಡಗಳಲ್ಲಿ ಮುಳುಗಿದ ಗುರುತು

Team Udayavani, Jul 27, 2023, 7:36 AM IST

PANE MANGALORE

ಬಂಟ್ವಾಳ: ಇಡೀ ಬಂಟ್ವಾಳವನ್ನೇ ಮುಳುಗಿಸಿದ್ದ ಮಾರಿ ಬೊಳ್ಳ (ಭೀಕರ ಪ್ರವಾಹ)ಕ್ಕೆ 100 ವರ್ಷ ತುಂಬುತ್ತಿದೆ. ಆ ಪ್ರವಾಹದ ಭೀಕರತೆಯನ್ನು ಸ್ಥಳೀಯರು ಮರೆಯಬಾರದು ಎಂಬ ಕಾರಣಕ್ಕೆ ಬಂಟ್ವಾಳ-ಪಾಣೆಮಂಗಳೂರು ಭಾಗದ ಕೆಲವು ಪುರಾತನ ಕಟ್ಟಡಗಳಲ್ಲಿ ಪ್ರವಾಹ ಆವರಿಸಿದ್ದ ಜಾಗಕ್ಕೆ ಹಾಕಿರುವ ಗುರುತು ಇನ್ನೂ ಮಾಸಿಲ್ಲ !

1923ರ ಆಗಸ್ಟ್‌ 7ರಂದು ಭೀಕರ ಪ್ರವಾಹ ಬಂಟ್ವಾಳ, ಪಾಣೆಮಂಗಳೂರು ಪಟ್ಟಣ ಸೇರಿದಂತೆ ಸಾಕಷ್ಟು ಊರುಗಳನ್ನು ಮುಳುಗಿಸಿತ್ತು. ಮುಂದಿನ ಆಗಸ್ಟ್‌ 7ಕ್ಕೆ ಆ ಘಟನೆಗೆ ನೂರು ವರ್ಷ ತುಂಬುವುದರಿಂದ ಆ ದಿನವನ್ನು ನೆನಪು ಮಾಡಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯರು ಸಿದ್ಧತೆ ಮಾಡಿಕೊಂಡಿದ್ದಾರೆ. ಅದೇ ಸಮಯದಲ್ಲಿ (1923ರಲ್ಲಿ) ಸದ್ಗುರು ನಿತ್ಯಾನಂದ ಸ್ವಾಮಿಗಳು ಬಂಟ್ವಾಳಕ್ಕೆ ಆಗಮಿಸಿದ್ದು, ಆ ಘಟನೆಯ ಶತಮಾನದ ನೆನಪು ಕೂಡ ನಡೆಯಲಿದೆ.

1974ರಲ್ಲಿ ಮತ್ತೂಮ್ಮೆ ಭೀಕರ ಪ್ರವಾಹ ಬಂದಿದ್ದರೂ 1923ರ ಪ್ರವಾಹಕ್ಕಿಂತ ತೀರಾ ಕೆಳಮಟ್ಟದಲ್ಲಿತ್ತು. ಅದರ ಗುರುತುಗಳನ್ನೂ ಕೆಲವು ಕಟ್ಟಡಗಳಲ್ಲಿ ಕಾಣಬಹುದು.

ಕಟ್ಟಡಗಳಲ್ಲಿ 23ರ ನೆನಪು!

ಧರ್ಮಸ್ಥಳ ಕ್ಷೇತ್ರಕ್ಕೆ ಸೇರಿದ ಜಾಗವೊಂದರ ಕಟ್ಟಡದ ಮೇಲ್ಛಾವಣಿಯ ಪಕ್ಕ 7.8.1923 ಎಂದು ಬರೆದಿದ್ದು, ಅಲ್ಲಿಯವರೆಗೂ ನೀರು ಬಂದಿತ್ತು ಎನ್ನಲಾಗುತ್ತಿದೆ. ಈಗ ಆ ರೀತಿಯ ಪ್ರವಾಹ ಬಂದರೆ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸುವುದೂ ಅಸಾಧ್ಯ. ಪಾಣೆಮಂಗಳೂರು ಪೇಟೆಯ ಮೂರುಮಾರ್ಗದ ಬಳಿ ಹಳೆಯ ಕಾಲದ ಹೊಟೇಲೊಂದರ ಪಕ್ಕದ ಕಟ್ಟಡದಲ್ಲಿ ಕಲ್ಲಿನಲ್ಲಿ “ತಾ. 7.8.1923 ಕುಜವಾರ ಇ ಕಲ್ಲಿನ ತನಕ ನೆರೆ ಬಂದಿದೆ’ ಎಂದು ಬರೆಯಲಾಗಿದ್ದು, ಪ್ರಸ್ತುತ ಅದಕ್ಕೆ ಬಿಳಿ ಬಣ್ಣ ಬಳಿಯಲಾಗಿದೆ.

ಅಂದು ಮುಳುಗಡೆಯಾಗಿದ್ದ ಬಹುತೇಕ ಕಟ್ಟಡಗಳಿದ್ದ ಜಾಗದಲ್ಲಿ ಪ್ರಸ್ತುತ ಹೊಸ ಕಟ್ಟಡಗಳು ನಿರ್ಮಾಣವಾಗಿವೆ. ಅಂದು ಅನುಭವಿಸಿದ ಯಾತನೆಯ ಅನುಭವವನ್ನು ಹೇಳಿಕೊಳ್ಳುವವರು ಯಾರೂ ಉಳಿದಿಲ್ಲ.

ಬಂಟ್ವಾಳದಲ್ಲಿ ಅಂದು ಜಲಮಾರ್ಗವೇ ಪ್ರಮುಖ ಸಾರಿಗೆಯಾಗಿತ್ತು. ಹೀಗಾಗಿ ನೇತ್ರಾವತಿ ಕಿನಾರೆಯಲ್ಲಿದ್ದ ಪಾಣೆಮಂಗಳೂರು ಬಂಟ್ವಾಳಕ್ಕಿಂತಲೂ ದೊಡ್ಡ
ವಾಣಿಜ್ಯ ಪಟ್ಟಣವಾಗಿತ್ತು. ಆದರೆ ಭೀಕರ ಪ್ರವಾಹದಲ್ಲಿ ಪೇಟೆಯಲ್ಲಿದ್ದ ಎಲ್ಲ ಸರಕು ಸರಂಜಾಮು ಕೊಚ್ಚಿ ಹೋಗಿತ್ತು; ಹಲವಾರು ಕುಟುಂಬಗಳನ್ನು ದೋಣಿಯ ಮೂಲಕ ರಕ್ಷಣೆ ಮಾಡಲಾಗಿತ್ತು ಎಂದು ಹಿರಿಯರು ಹೇಳುತ್ತಿದ್ದರು ಎಂದು ಪಾಣೆಮಂಗಳೂರಿನ ನಿವಾಸಿಗಳು ನೆನಪಿಸಿಕೊಳ್ಳುತ್ತಾರೆ.

ಟಾಪ್ ನ್ಯೂಸ್

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Fraud Case ಷೇರು ಟ್ರೇಡಿಂಗ್‌ ಹೆಸರಿನಲ್ಲಿ 74.18 ಲಕ್ಷ ರೂ. ವಂಚನೆ

Fraud Case ಷೇರು ಟ್ರೇಡಿಂಗ್‌ ಹೆಸರಿನಲ್ಲಿ 74.18 ಲಕ್ಷ ರೂ. ವಂಚನೆ

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು

Madikeri ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

Madikeri ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

rain 3

RED alert; ಜು.6 ರಂದು ಉಡುಪಿ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

1-sdsa-dasd

Rain; ಜು.6 ರಂದು ಉಡುಪಿಯ 2 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Fraud Case ಷೇರು ಟ್ರೇಡಿಂಗ್‌ ಹೆಸರಿನಲ್ಲಿ 74.18 ಲಕ್ಷ ರೂ. ವಂಚನೆ

Fraud Case ಷೇರು ಟ್ರೇಡಿಂಗ್‌ ಹೆಸರಿನಲ್ಲಿ 74.18 ಲಕ್ಷ ರೂ. ವಂಚನೆ

Mang-Airport

Mangaluru ವಿಮಾನ ನಿಲ್ದಾಣ:ಅಂತಾರಾಷ್ಟ್ರೀಯ ಕಾರ್ಗೋ ಸೇವೆ ಪ್ರಾರಂಭ

ಬಜಪೆ: ಮಂಗಳೂರು ನಗರದಲ್ಲಿ ಪ್ರತಿದಿನ 300 ಟನ್‌ ಕಸ ಉತ್ಪತ್ತಿ

ಬಜಪೆ: ಮಂಗಳೂರು ನಗರದಲ್ಲಿ ಪ್ರತಿದಿನ 300 ಟನ್‌ ಕಸ ಉತ್ಪತ್ತಿ

ಮಂಗಳೂರು: ಬ್ರಹ್ಮಕಲಶಕ್ಕೆ ಮನೆಯಲ್ಲೇ ಬೆಳೆದ ಸಾವಯವ ತರಕಾರಿ!

ಮಂಗಳೂರು: ಬ್ರಹ್ಮಕಲಶಕ್ಕೆ ಮನೆಯಲ್ಲೇ ಬೆಳೆದ ಸಾವಯವ ತರಕಾರಿ!

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Fraud Case ಷೇರು ಟ್ರೇಡಿಂಗ್‌ ಹೆಸರಿನಲ್ಲಿ 74.18 ಲಕ್ಷ ರೂ. ವಂಚನೆ

Fraud Case ಷೇರು ಟ್ರೇಡಿಂಗ್‌ ಹೆಸರಿನಲ್ಲಿ 74.18 ಲಕ್ಷ ರೂ. ವಂಚನೆ

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು

Madikeri ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

Madikeri ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.