14.99 ಲ.ರೂ. ಮೌಲ್ಯದ ವಾಹನ ಗೆದ್ದಿರುವುದಾಗಿ ನಂಬಿಸಿ ವಂಚನೆ
Team Udayavani, Jul 31, 2023, 9:20 PM IST
ಮಂಗಳೂರು: ಸ್ಕ್ಯಾಚ್ ಕೂಪನ್ ಮೂಲಕ 14.99 ಲ.ರೂ. ಬಹುಮಾನ ಬಂದಿರುವುದಾಗಿ ನಂಬಿಸಿ 90,400 ರೂ.ಗಳನ್ನು ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.
ದೀಪಕ್ ಪಾಂಡೆ ಎಂಬ ವ್ಯಕ್ತಿ ದೂರುದಾರರಿಗೆ ಕರೆ ಮಾಡಿ ತನ್ನ ಸಂಸ್ಥೆ ಸರಕಾರದಿಂದ ಮಾನ್ಯತೆ ಪಡೆದಿದ್ದು ಮೆಗಾ ಡ್ರಾ ಕೂಪನ್ ಕಳುಹಿಸುತ್ತಿರುವುದಾಗಿ ತಿಳಿಸಿದ್ದ. ಜೂ.10ರಂದು ದೂರುದಾರರಿಗೆ ಕೊರಿಯರ್ ಮೂಲಕ ಸ್ಕ್ಯಾಚ್ ಕೂಪನ್ ಬಂದಿತ್ತು. ಅದರಲ್ಲಿ ಹೆಲ್ಪ್ ಲೈನ್ ಸಂಖ್ಯೆ ಕೂಡ ಇತ್ತು. ಕೂಪನ್ ಸ್ಕ್ಯಾಚ್ ಮಾಡಿದಾಗ ಅದರಲ್ಲಿ 14,99,000 ರೂ. ಮೌಲ್ಯದ ವಾಹನ ಹೆದ್ದಿರುವುದಾಗಿ ನಮೂದಿಸಲಾಗಿತ್ತು.
ಹೆಲ್ಪ್ ಲೈನ್ ಗೆ ಕರೆ ಮಾಡಿ ವಿಚಾರಿಸಿದಾಗ ಅದನ್ನು ಸ್ವೀಕರಿಸಿದ ವ್ಯಕ್ತಿ ಮೊದಲನೇ ಬಹುಮಾನ ಬಂದಿದೆ ಎಂದು ನಂಬಿಸಿದ. ಬಳಿಕ ಆರಂಭಿಕ ಶುಲ್ಕ ಪಾವತಿಸಬೇಕು ಎಂದು ತಿಳಿಸಿದ. ಅನಂತರ ದೂರುದಾರರ ಖಾತೆಯಿಂದ ಹಂತ ಹಂತವಾಗಿ ಆತನ ಖಾತೆಗೆ ಒಟ್ಟು 90,400 ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾನೆ. ಆದರೆ ಯಾವುದೇ ಬಹುಮಾನ ನೀಡದೆ ವಂಚಿಸಿದ್ದಾನೆ ಎಂದು ಮಂಗಳೂರಿನ ಸೆನ್ ಪೊಲೀಸರಿಗೆ ದೂರು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ
Mangaluru: ಗುಂಡಿ ಬಿದ್ದ ರಸ್ತೆಗಳಿಗೆ ಜಲ್ಲಿಕಲ್ಲೇ ಆಧಾರ; ಅಪಾಯದಲ್ಲಿ ಸವಾರರು
Jokatte: ಸಂಪೂರ್ಣ ಹದೆಗೆಟ್ಟ ಕೂಳೂರು, ಕೈಗಾರಿಕೆ ವಲಯದ-ಜೋಕಟ್ಟೆ ರಸ್ತೆ
Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು
Mangaluru: ಪ್ಲಾಸ್ಟಿಕ್ ಬ್ರಹ್ಮರಾಕ್ಷಸನ ತಡೆವ ಮಂತ್ರದಂಡ ಬೇಕಿದೆ !
MUST WATCH
ಹೊಸ ಸೇರ್ಪಡೆ
Udupi: ವಂಚನೆ ಪ್ರಕರಣ: ಅ.21ಕ್ಕೆ ಜಾಮೀನು ಅರ್ಜಿ ವಿಚಾರಣೆ
Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ
K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ
Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!
ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.