ತೋಟಗಾರಿಕೆ ಬೆಳೆಗೆ ಸಿದ್ಧಗೊಂಡಿವೆ 3.08 ಲಕ್ಷ ಸಸಿಗಳು


Team Udayavani, May 7, 2021, 4:20 AM IST

ತೋಟಗಾರಿಕೆ ಬೆಳೆಗೆ ಸಿದ್ಧಗೊಂಡಿವೆ 3.08 ಲಕ್ಷ ಸಸಿಗಳು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಸಲು ಬಯಸುವ ಕೃಷಿ ಆಸಕ್ತರ ಬಯಕೆಯನ್ನು ಈಡೇರಿಸಲು ಎಂಟು ತೋಟಗಾರಿಕೆ ಕ್ಷೇತ್ರದ ನರ್ಸರಿಗಳಲ್ಲಿ 3,08,400 ವಿವಿಧ ಬೆಳೆಗಳ ವಿವಿಧ ತಳಿಗಳ ಸಸಿಗಳು ಸಿದ್ಧವಾಗಿವೆ.

ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ 39,050 ಅಡಿಕೆ ಸಸಿಗಳು, 1,51,300 ಕಾಳುಮೆಣಸು, 92,900 ಗೇರು, 8,800 ಕೊಕ್ಕೋ, 1,000 ಮಲ್ಲಿಗೆ, 2,700 ಮಾವು, 1,950 ತೆಂಗು, 2,000 ನುಗ್ಗೆ , 1,900 ಪಪ್ಪಾಯ, 6,800 ಕಸಿ ಕಾಳುಮೆಣಸು, ಸಸಿಗಳು ಬೆಳಸಲಾಗಿದೆ. ಅಡಿಕೆಯಲ್ಲಿ ಮಂಗಳಾ, ಸ್ಥಳೀಯ, ಇಂಟರ್‌ ಮಂಗಳಾ, ಮೋಹಿತ್‌ ನಗರ, ಮಾವಿನಲ್ಲಿ ಮಲ್ಲಿಕಾ, ಬಾದಾಮಿ , ಗೇರುವಿನಲ್ಲಿ ಉಳ್ಳಾಲ-1,3, ವಿ-4, ಭಾಸ್ಕರ, ಕಾಳು ಮೆಣಸಿನಲ್ಲಿ ಕಸಿ, ಪಣಿಯೂರು, ಕೊಕ್ಕೋದಲ್ಲಿ ಎಫ್‌ ಹೈಬ್ರಿಡ್‌, ಮಲ್ಲಿಗೆಯಲ್ಲಿ ಉಡುಪಿ ಮಲ್ಲಿಗೆ, ಪಪ್ಪಾಯದಲ್ಲಿ ತೈವನ್‌ ರೆಡ್‌ಲೇಡಿ ಸಹಿತ ವಿವಿಧ ಜಾತಿಗಳ ಗಿಡಗಳಲ್ಲಿ ವಿವಿಧ ತಳಿಗಳನ್ನು ರೈತರಿಗೆ ತೋಟಗಾರಿಕೆ ಇಲಾಖೆ ದರದಂತೆ ನೀಡಲಾಗುತ್ತಿದೆ.

ಗಿಡಗಳು ಲಭ್ಯವಿರುವ ಸ್ಥಳಗಳು :

ಮಂಗಳೂರಿನ ಪಡೀಲ್‌ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ, 5,000., ಕೊಕ್ಕೋ 3,000, ಉಡುಪಿ ಮಲ್ಲಿಗೆ 1,000, ದ್ವಿಕಾಂಡ ಕಾಳುಮೆಣಸು 6, 000 ಸಸಿಗಳು ಲಭ್ಯವಿವೆ. ಪುತ್ತೂರಿನ ಕಬಕ ತೋಟಗಾರಿಕೆ ಕ್ಷೇತ್ರದಲ್ಲಿ ಗೇರು 6,000, ಕಾಳು ಮೆಣಸು 10,200, ಅಡಿಕೆ 5,200, ನುಗ್ಗೆ, 1,000, ಸುಳ್ಯದ ಹೊಸಗದ್ದೆ ತೋಟಗಾರಿಕೆ ಕ್ಷೇತ್ರದಲ್ಲಿ ಕಾಳು ಮೆಣಸು 52,000, ಮಾವು 450, ಕಸಿ ಕಾಳುಮೆಣಸು 2, 000, ತೆಂಗು 980, ಗೇರು 15,800, ಬೆಳ್ತಂಗಡಿಯ ಮದ್ದಡ್ಕ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ 9,850, ಗೇರು 59,000,ಕಾಳುಮೆಣಸು ಪಣಿಯೂರು 40,700, ಕಸಿ ಕಾಳುಮೆಣಸು 4,600, ಕೊಕ್ಕೋ 1,800, ತೆಂಗು 970, ಮಾವು 1,500, ಪಪ್ಪಾಯ 1,900 ,ಬೆಳ್ತಂಗಡಿ ಕಚೇರಿ ನರ್ಸರಿಯಲ್ಲಿ ಕಾಳು ಮೆಣಸು 10,000, ಅಡಿಕೆ 5,000, ಚಾರ್ಮಾಡಿ ತೋಟಗಾರಿಕೆ ಕ್ಷೇತ್ರದಲ್ಲಿ ಕಾಳು ಮೆಣಸು 5,000, ವಿಟ್ಲ ತೋಟಗಾರಿಕೆ ಕ್ಷೇತ್ರದಲ್ಲಿ ಮಾವು 750, ಕಾಳುಮೆಣಸು 15,000, ಅಡಿಕೆ 5,000, ನುಗ್ಗೆ 1,000 ಹಾಗೂ ತುಂಬೆ ತೋಟಗಾರಿಕೆ ಕ್ಷೇತ್ರದಲ್ಲಿ ಗೇರು 9,100, ಕೋಕ್ಕೊ 2,000, ಕಾಳು ಮೆಣಸು 12,600, ಅಡಿಕೆ 10,000 ಸಹಿತ ಒಟ್ಟು 3,06,400 ವಿವಿಧ ಜಾತಿಯ ತಳಿಗಳು ಸಿದ್ಧವಾಗಿವೆ.

ದಕ್ಷಿಣ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯ ನರ್ಸರಿಗಳಲ್ಲಿ ರೈತರ ಬೇಡಿಕೆಗಳನ್ನು ಪೂರೈಸಲು ಈಗಾಗಲೇ ಅಡಿಕೆ, ತೆಂಗು, ಕಾಳುಮೆಣಸು ಸಹಿತ ವಿವಿಧ ಬೆಳೆಗಳ ವಿವಿಧ ತಳಿಗಳನ್ನು ಬೆಳೆಸಲಾಗಿದೆ. ರೈತರು ತಮ್ಮ ಆವಶ್ಯಕತೆಗಳಿಗೆ ಅನುಗುಣವಾಗಿ ಇಲಾಖೆ ನಿಗದಿಪಡಿಸಿದ ರಿಯಾಯತಿ ದರದಲ್ಲಿ ಇವುಗಳನ್ನು ಪಡೆದುಕೊಳ್ಳಬಹುದಾಗಿದೆ. -ಜಾನಕಿ, ತೋಟಗಾರಿಕೆ ಇಲಾಖಾ ಹಿರಿಯ ಸಹಾಯಕ ನಿರ್ದೇಶಕರು

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.