![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 10, 2021, 5:50 AM IST
ಸಾಂದರ್ಭಿಕ ಚಿತ್ರ
ಪುತ್ತೂರು/ ಸುಳ್ಯ: ಪುತ್ತೂರು- ಕಡಬ-ಸುಳ್ಯ ತಾಲೂಕಿನಲ್ಲಿ 2021ನೇ ಸಾಲಿ ನಲ್ಲಿ ಒಟ್ಟು 7,101 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯಲು ಅರ್ಹತೆ ಹೊಂದಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಶೈಕ್ಷಣಿಕ ಚಟುವಟಿಕೆ ತಡವಾಗಿ ಪ್ರಾರಂಭಗೊಂಡಿತ್ತು. ಇದರಿಂದ ಪ್ರೌಢ ಶಿಕ್ಷಣ ಮಂಡಳಿ ಅವಧಿ ಕಡಿತಗೊಳಿಸಿ ಎಸೆಸೆಲ್ಸಿ ಪರೀಕ್ಷೆಗೆ ಅಂದಾಜು ಸಮಯ ಪ್ರಕಟಿಸಿದೆ. ಜೂನ್ ಮೊದಲ ವಾರದಲ್ಲಿ ಪರೀಕ್ಷೆ ನಡೆಯುವ ನಿರೀಕ್ಷೆಯಿದೆ.
116 ಪ್ರೌಢಶಾಲೆ :
ಸುಳ್ಯ ತಾಲೂಕಿನಲ್ಲಿ 38 ಪ್ರೌಢಶಾಲೆಗಳ 2,005 ವಿದ್ಯಾರ್ಥಿಗಳು, ಪುತ್ತೂರು ತಾಲೂಕಿನಲ್ಲಿ 78 ಪ್ರೌಢಶಾಲೆಗಳ 5,096 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಹೊಂದಿದ್ದಾರೆ. ಶೈಕ್ಷಣಿಕ ವ್ಯಾಪ್ತಿಯೊಳಗೆ ಕಡಬವು ಪುತ್ತೂರು ತಾಲೂಕಿನೊಳಗೆ ಸೇರಿದೆ. ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 116 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು :
2020-21ನೇ ಸಾಲಿನಲ್ಲಿ ಪುತ್ತೂರು ತಾಲೂಕಿನ 4,772, ಸುಳ್ಯ ತಾಲೂಕಿನಲ್ಲಿ 1,864 ವಿದ್ಯಾರ್ಥಿಗಳು ಸೇರಿದಂತೆ 6,636 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪುತ್ತೂರಿನಲ್ಲಿ ಶೇ. 86.44, ಸುಳ್ಯದಲ್ಲಿ ಶೇ. 84.98 ಫಲಿತಾಂಶ ದಾಖಲಾಗಿತ್ತು.
ಉಭಯ ತಾಲೂಕಿನಲ್ಲಿ ಈ ಬಾರಿ ಪರೀಕ್ಷೆ ಬರೆಯಲು ಅರ್ಹತೆ ಪಡೆದಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಕಳೆದ ಬಾರಿಗಿಂತ ಪುತ್ತೂರಿನಲ್ಲಿ 324, ಸುಳ್ಯದಲ್ಲಿ 141 ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ.
ಪಠ್ಯ ವಿವರ ಕೈ ಸೇರಬೇಕಷ್ಟೆ :
ಜೂನ್ ಮೊದಲ ವಾರದಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಯಲಿದ್ದು, ಸಿದ್ಧತೆಗೆ 6 ತಿಂಗಳ ಕಾಲಾವಕಾಶ ಇದೆ. ಪ್ರತೀ ಬಾರಿ ವಾರ್ಷಿಕ ಅವಧಿ ಯಲ್ಲಿ ಪರೀಕ್ಷೆ ನಡೆಯುವ ಕಾರಣ ಒಂದು ವರ್ಷಕ್ಕೆ ಅನುಗುಣವಾಗಿ ಪಠ್ಯ ನಿಗದಿ ಮಾಡಲಾಗುತಿತ್ತು. ಈ ಬಾರಿ ಅರ್ಧ ವಾರ್ಷಿಕ ಅವಧಿ ಇದ್ದು, ಹಾಗಾಗಿ ಪಠ್ಯ ಕಡಿತ ಗೊಳಿಸಲು ಚಿಂತನೆ ನಡೆದಿದ್ದು, ಈ ಬಗ್ಗೆ ಶೀಘ್ರ ಮಾಹಿತಿ ನೀಡ ಬೇಕು ಎನ್ನುವುದು ಪಾಲಕರ, ವಿದ್ಯಾ ರ್ಥಿಗಳ ಆಗ್ರಹ. ಈ ಬಗ್ಗೆ ವಿವರಗಳು ತಾಲೂಕು ಶಿಕ್ಷಣ ಇಲಾಖೆ ಕಚೇರಿಗಳಿಗೆ ಇನ್ನಷ್ಟೇ ಲಭಿಸಬೇಕಿದೆ.
ಸುಳ್ಯ ತಾಲೂಕಿನಲ್ಲಿ 2,005 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಹೊಂದಿದ್ದು, ಪಠ್ಯ ವಿವರಗಳು ಲಭ್ಯವಾದ ತತ್ಕ್ಷಣ ವಿದ್ಯಾರ್ಥಿಗಳನ್ನು ಪರೀಕ್ಷೆ ಎದುರಿಸಲು ಸಿದ್ಧಗೊಳಿಸಲಾಗುವುದು. –ಮಹಾದೇವ, ಕ್ಷೇತ್ರ ಶಿಕ್ಷಣಾಧಿಕಾರಿ ಸುಳ್ಯ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.