ನೆರೆಪೀಡಿತ‌ ಪ್ರದೇಶಗಳಿಗೆ ವರದಾನ ಸಹ್ಯಾದ್ರಿ ಕೆಂಪುಮುಖಿ

ಪ್ರವರ್ಧಮಾನಕ್ಕೆ ಬರುತ್ತಿರುವ ಭತ್ತದ ಹೊಸ ತಳಿ

Team Udayavani, Jul 5, 2022, 7:20 AM IST

ನೆರೆಪೀಡಿತ‌ ಪ್ರದೇಶಗಳಿಗೆ ವರದಾನ ಸಹ್ಯಾದ್ರಿ ಕೆಂಪುಮುಖಿ

ಮಂಗಳೂರು: ಕರಾವಳಿಯ ನೆರೆ ಹಾಗೂ ತಗ್ಗು ಪ್ರದೇಶಗಳಿಗೆ ಹೆಚ್ಚು ಹೊಂದಾಣಿಕೆ ಆಗುವಂಥ ಹೊಸ ಸಂಶೋಧನೆ ಸಹ್ಯಾದ್ರಿ ಕೆಂಪುಮುಖಿ ಭತ್ತದ ತಳಿಗೆ ರೈತರಿಂದ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಪ್ರಾತ್ಯಕ್ಷಿಕೆ ಮತ್ತು ಪ್ರಾಯೋಗಿಕ ನೆಲೆಯಲ್ಲಿ ಸಹ್ಯಾದ್ರಿ ಕೆಂಪುಮುಖಿ ತಳಿಯನ್ನು ಬೆಳೆದಾಗ ಉತ್ತಮ ಫಲಿತಾಂಶ ಕಂಡು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ಪ್ರಾಯೋಗಿಕ ನೆಲೆಯಲ್ಲಿ ಬೆಳೆಯಲು 80 ಕ್ವಿಂಟಾಲ್‌ ಬೀಜವನ್ನು ಸುಮಾರು 300 ಮಂದಿ ರೈತರಿಗೆ ನೀಡಲಾಗಿತ್ತು. 2022-23ನೇ ಸಾಲಿಗೆ ಸುಮಾರು 500 ಎಕ್ರೆಯಷ್ಟು ಪ್ರದೇಶಗಳಿಗೆ ಅವಶ್ಯವಿರುವಷ್ಟು ಬೀಜವನ್ನು ವಿತರಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಸುಮಾರು 50 ಕ್ವಿಂಟಾಲ್‌ ಬೀಜವನ್ನು ಪ್ರಾಯೋಗಿಕ ನೆಲೆಯಲ್ಲಿ ಸುಮಾರು 200 ಮಂದಿ ರೈತರಿಗೆ ವಿತರಿಸಲಾಗಿತ್ತು. ಈ ವರ್ಷ ಸುಮಾರು 45 ಕ್ವಿಂಟಾಲ್‌ ಬೀಜವನ್ನು ಸುಮಾರು 180 ಮಂದಿ ರೈತರಿಗೆ ನೀಡಲಾಗಿದೆ. ಇದರ ಜತೆಗೆ ಸಹ್ಯಾದ್ರಿ ಭದ್ರ ತಳಿಯ ಸುಮಾರು 16 ಕ್ವಿಂಟಾಲ್‌ ಬೀಜವನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ರೈತರಿಗೆ ವಿತರಿಸಲಾಗಿದೆ.

ಪ್ರಾಯೋಗಿಕವಾಗಿ ಬೆಳೆದಿರುವ ರೈತರು ಹೇಳುವಂತೆ ಎಕ್ರೆಗೆ ಸುಮಾರು 22 ಕ್ವಿಂಟಾಲ್‌ ಇಳುವರಿ ಬಂದಿದೆ. ಬೈಹುಲ್ಲು ಕೂಡ ಉತ್ತಮವಾಗಿದೆ. ಎಂಒ-4ನಲ್ಲಿ ಎಕ್ರೆಗೆ 18 ಕ್ವಿಂಟಾಲ್‌ ಇಳುವರಿ ಬರುತ್ತದೆ.

ತಗ್ಗು ಪ್ರದೇಶಗಳಿಗೆ ಸೂಕ್ತ
ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಪ್ರಕಾರ ಕರಾವಳಿ ಪ್ರದೇಶದಲ್ಲಿ 300 ಹೆಕ್ಟೇರ್‌ಗಿಂತಲೂ ಅಧಿಕ ಭತ್ತ ಬೆಳೆಯುವ ಪ್ರದೇಶ ವರ್ಷಂಪ್ರತಿ ನೆರೆಹಾವಳಿಗೆ ತುತ್ತಾಗುತ್ತಿದೆ. ಪ್ರಸ್ತುತ ಕರಾವಳಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಸಾಮಾನ್ಯ ದಪ್ಪಗಾತ್ರದ ಎಂಒ-4 ತಳಿಯನ್ನು ರೈತರು ಹೆಚ್ಚು ಬೆಳೆಯುತ್ತಾರೆ. ಇವು ನೆಲಕ್ಕುರುಳುತ್ತವೆ ಹಾಗೂ ನೆರೆ ನೀರನ್ನು ಹೆಚ್ಚು ದಿನ ತಡೆದುಕೊಳ್ಳುವ ಶಕ್ತಿಯನ್ನು ಹೊಂದಿಲ್ಲ ಎಂಬ ಅಭಿಪ್ರಾಯವಿದೆ.

ಕೃಷಿ ವಿಜ್ಞಾನಿಗಳು ಹಾಗೂ ಪ್ರಾಯೋಗಿಕ ನೆಲೆಯಲ್ಲಿ ಸಹ್ಯಾದ್ರಿ ಕೆಂಪುಮುಖಿ ತಳಿಯನ್ನು ಬೆಳೆದಿರುವ ರೈತರ ಪ್ರಕಾರ ಇದು ನೆರೆ ಹಾಗೂ ತಗ್ಗು ಪ್ರದೇಶಗಳಿಗೆ ಹೊಂದಿಕೊಳ್ಳುವಂಥದ್ದು. ಈ ತಳಿಯು ನೆರೆ ನೀರಿನಲ್ಲಿದ್ದರೂ ಸುಮಾರು 8ರಿಂದ 12 ದಿನಗಳವರೆಗೆ ಯಾವುದೇ ಸಮಸ್ಯೆಯಿಲ್ಲದೆ ಬೆಳವಣಿಗೆ ಕಾಣುತ್ತದೆ. ಮಾಗಿದ ಪೈರು ಕೊಯಿಲಿಗೆ ವಿಳಂಬವಾದರೂ ಮಳೆಗಾಳಿಯಿಂದ ನೆಲಕ್ಕೆ ಒರಗುವುದಿಲ್ಲ.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ನವೀನ್‌ ಕುಮಾರ್‌ ಬಿ.ಟಿ. ಅವರ ಪ್ರಕಾರ ಸಹ್ಯಾದ್ರಿ ಪಂಚಮುಖೀ ಕೆಂಪು ಭತ್ತದ ತಳಿಯು ಮಧ್ಯಮ ಗಾತ್ರದ ಪೈರನ್ನು ಹೊಂದಿದ್ದು ಕಾಂಡ ಗಟ್ಟಿಯಾಗಿದೆ. ಹೆಚ್ಚು ಇಳುವರಿ ಹಾಗೂ ಜೈವಿಕ ಮತ್ತು ಅಜೈವಿಕ ಒತ್ತಡಗಳನ್ನು ತಡೆಯಬಲ್ಲ ಸಾಮರ್ಥ್ಯ ಹೊಂದಿದೆ. ಕಣೆ ಕೀಟ, ಕಾಂಡಕೊರಕ, ಎಲೆ ಸುರಳಿ ಕೀಟಗಳನ್ನು ಮತ್ತು ಬೆಂಕಿರೋಗಗಳನ್ನು ತಡೆಯುವ ಸಾಮರ್ಥ್ಯವನ್ನೂ ಹೊಂದಿದೆ. ಕೆಂಪು ಬಣ್ಣದ ಮಧ್ಯಮ ಗಾತ್ರದ ಕಾಳು, ಮಧ್ಯಮ ಎತ್ತರ (ಸುಮಾರು ಮೂರು ಅಡಿ ಎತ್ತರ ) ನೆಲಕ್ಕೆ ಉರುಳದು. ಅಕ್ಕಿ ಊಟಕ್ಕೆ ರುಚಿಕರ ಆಗಿದ್ದು ಅಲ್ಪ ಪ್ರಮಾಣದ ಪರಿಮಳ, ಕನಿಷ್ಠ ಬೇಯಿಸುವ ಅವಧಿ ಹೊಂದಿದೆ. ಬಿತ್ತಿದ 130ರಿಂದ 135 ದಿನಗಳಲ್ಲಿ ಕಟಾವಿಗೆ ಬರುತ್ತದೆ.

ಸಹ್ಯಾದ್ರಿ ಕೆಂಪುಮುಖಿ ತಳಿ ಮಜಲು ಗದ್ದೆಗಳಿಗೆ ಸೂಕ್ತವಾಗುವ ನೂತನ ಸಹ್ಯಾದ್ರಿ ಕೆಂಪುಮುಖಿ ಭತ್ತದ ತಳಿಯ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿವೆ. ಬೀಜವನ್ನು ಈ ಬಾರಿಯ ಮುಂಗಾರಿನಲ್ಲಿ ಕೆಲವು ರೈತರಿಗೆ ಪಾತ್ಯಕ್ಷಿಕೆ ನೆಲೆಯಲ್ಲಿ ವಿತರಿಸಿದ್ದು, ಇದರ ಫಲಿತಾಂಶ ಆಧರಿಸಿ ಮುಂದಿನ ಹಂಗಾಮಿನಲ್ಲಿ ರೈತರಿಗೆ ಇದನ್ನು ಶಿಫಾರಸು ಮಾಡಲಾಗುವುದು ಎಂಬುದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಅಭಿಪ್ರಾಯ.

ಸಹ್ಯಾದ್ರಿ ಕೆಂಪುಮುಖಿ ನೆರೆಹಾವಳಿ ಇರುವ ಗದ್ದೆಗಳಿಗೆ ಸೂಕ್ತ. ನಾನು ಇದನ್ನು ಬೆಳೆಯುತ್ತಿದ್ದು ಇತರ ತಳಿಗಳಿಗೆ ಹೋಲಿಸಿದರೆ ರೋಗಬಾಧೆ ಕಡಿಮೆ; ಇಳುವರಿಯೂ ಅಧಿಕ. ಬಿತ್ತನೆ ಬೀಜಕ್ಕೆ ಹೆಚ್ಚಿನ
ಬೇಡಿಕೆ ಇದೆ. ಅನ್ನವೂ ರುಚಿಕರ.
– ದಯಾನಂದ ಕುಲಾಲ್‌ ಸೂರಿಂಜೆ, ರೈತ

ಸಹ್ಯಾದ್ರಿ ಕೆಂಪುಮುಖಿ ತಳಿಯು ಬಯಲು, ನೆರೆಪೀಡಿತ ಭತ್ತದ ಗದ್ದೆಗಳಿಗೆ ಸೂಕ್ತವಾಗಿದ್ದು, ಕರಾವಳಿಯ ಬಯಲು ಗದ್ದೆಗಳಲ್ಲಿ ಮತ್ತು ಮುಂಗಾರು ಬೆಳೆಯಾಗಿ ಬೆಳೆಯಲು ಶಿಫಾರಸು ಮಾಡಲಾಗಿದೆ. ರೈತರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ.
– ಡಾ| ರಮೇಶ್‌,
ಹಿರಿಯ ವಿಜ್ಞಾನಿ, ಕೆವಿಕೆ ಮುಖ್ಯಸ್ಥ

-ಕೇಶವ ಕುಂದರ್‌

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.