Mangaluru ಪ್ರಯಾಣಿಕನಿಗೆ ಹೃದಯಾಘಾತ; ಆಸ್ಪತ್ರೆಗೆ ಸೇರಿಸಿದರೂ ಜೀವ ಉಳಿಸಲಾಗಲಿಲ್ಲ!
Team Udayavani, Aug 5, 2024, 11:02 PM IST
ಮಂಗಳೂರು: ಪ್ರಯಾಣಿಸುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯೊಬ್ಬರ ಜೀವ ಉಳಿಸಲು ಬಸ್ಸನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ದ ಇನ್ನೊಂದು ಘಟನೆ ಸೋಮವಾರ ನಗರದಲ್ಲಿ ನಡೆದಿದೆ. ಆದರೆ ದುರದೃಷ್ಟವಶಾತ್ ವ್ಯಕ್ತಿಯು ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ.
ಸೋಮವಾರ ಬೆಳಗ್ಗೆ ಸುಮಾರು 8.30ಕ್ಕೆ ಮಂಗಳೂರಿನಿಂದ ಮಣಿಪಾಲಕ್ಕೆ ಸಂಚರಿಸುತ್ತಿದ್ದ ಪಿರೇರಾ ಬಸ್ಗೆ ಕೊಟ್ಟಾರಚೌಕಿಯಲ್ಲಿ ಹತ್ತಿದ ವ್ಯಕ್ತಿಯೊಬ್ಬರು ಸುಮಾರು 300 ಮೀ. ದೂರದಲ್ಲೇ (ಕೋಡಿಕಲ್ ಕ್ರಾಸ್) ಕುಸಿದು ಬಿದ್ದರು. ಮಾತನಾಡಲಾಗದ ಸ್ಥಿತಿಯಲ್ಲಿದ್ದ ಅವರಿಗೆ ಸಹ ಪ್ರಯಾಣಿಕರಾದ ಕಾಪುವಿನ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಲಿನೆಟ್ ಅವರು ಪ್ರಥಮ ಚಿಕಿತ್ಸೆ ನೀಡಿದರು.
ಹೃದಯಾಘಾತವಾಗಿದೆ ಎಂದು ತಿಳಿದ ಕೂಡಲೇ ಬಸ್ಸನ್ನು ಮುಕ್ಕದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಫಿಟ್ಸ್ ಅಂದುಕೊಂಡಿದ್ದೆ
ಬಸ್ ನಿರ್ವಾಹಕ ಅನಿಲ್ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಆ ವ್ಯಕ್ತಿಯು ಬಸ್ಸಿಗೆ ಹತ್ತಿದ ಕೂಡಲೇ ಸಹ ಪ್ರಯಾಣಿಕರ ಹೆಗಲ ಮೇಲೆ ಕುಸಿದು ಬಿದ್ದರು. ಫಿಟ್ಸ್ ಇರಬಹುದು ಎಂದುಕೊಂಡೆ. ಬಳಿಕ ಹೃದಯಾಘಾತ ಉಂಟಾಗಿರಬಹುದೆಂದು ತತ್ಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದೆವು. ಆಸ್ಪತ್ರೆಯಲ್ಲಿಯೂ ತತ್ಕ್ಷಣ ದಾಖಲಿಸಲು ನೆರವಾಗಿದ್ದಾರೆ’ ಎಂದರು. “ಆ ಪ್ರಯಾಣಿಕ ಕೋವಿಡ್ ಅವಧಿಗೂ ಹಿಂದೆ ನಮ್ಮ ಬಸ್ಸಿನಲ್ಲಿ ಬರುತ್ತಿದ್ದರು. ಬಳಿಕ ಅವರನ್ನು ನೋಡಿದ ನೆನಪಿಲ್ಲ’ ಎಂದು ಚಾಲಕ ರವಿ ಹೇಳಿದ್ದಾರೆ.
ಪ್ರಥಮ ಚಿಕಿತ್ಸೆ ನೀಡಿದೆ
ಹೃದಯಾಘಾತದಿಂದ ಕುಸಿದು ಬಿದ್ದ ಕೂಡಲೇ ಅವರಿಗೆ ಸಿಪಿಆರ್ ವಿಧಾನದಲ್ಲಿ ಪ್ರಥಮ ಚಿಕಿತ್ಸೆ ನೀಡಿದೆ. ಆದರೂ ಅವರು ಸ್ಪಂದಿಸುವ ಸ್ಥಿತಿಯಲ್ಲಿರಲಿಲ್ಲ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದೆ ಎನ್ನುತ್ತಾರೆ ಉಪಚರಿಸಿದ ಲಿನೆಟ್.
ಬಸ್ನಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಎದೆನೋವು ಉಂಟಾದಾಗ ಬಸ್ಸನ್ನು ನೇರವಾಗಿ ಕಂಕನಾಡಿಯ ಆಸ್ಪತ್ರೆಯೊಂದಕ್ಕೆ ಕೊಂಡೊಯ್ದ ಘಟನೆ ಜು.30ರಂದು ನಗರದಲ್ಲಿ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.