ಸಂಕೀರ್ತನೆಯಿಂದ ದುರಿತ ದೂರ, ಕುಲಕೋಟಿ ಉದ್ಧಾರ; ಕಾಶಿ ಮಠಾಧೀಶ

ಭೂರಿ ಸಮಾರಾಧನೆ, ಸಂಜೆ ಮರುಭಜನೆ, ರಾತ್ರಿಪೂಜೆ, ಉತ್ಸವ ಜರಗಿದವು.

Team Udayavani, Dec 7, 2022, 3:08 PM IST

ಸಂಕೀರ್ತನೆಯಿಂದ ದುರಿತ ದೂರ, ಕುಲಕೋಟಿ ಉದ್ಧಾರ; ಕಾಶಿ ಮಠಾಧೀಶ

ಮೂಡುಬಿದಿರೆ: ನಿತ್ಯ ನಿರಂತರ ಹರಿನಾಮ ಸಂಕೀರ್ತನೆಯಿಂದ ಅಂತ್ಯಕಾಲದಲ್ಲಿ ದುರಿತ ದೂರವಾಗಿ, ಮನಸ್ಸು ಪರಮಾತ್ಮನಲ್ಲಿ ನೆಲೆಸಲು ಶಕ್ತವಾಗುವುದು. ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವವು ಎಂದು ಕಾಶಿ ಮಠಾಧೀಶ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ನುಡಿದರು.

ಮೂಡುವೇಣುಪುರ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಶ್ರೀ ವೆಂಕಟರಮಣ ಭಜನ ಮಂಡಳಿಯ ವಜ್ರ ಮಹೋತ್ಸವ ಸಂಬಂಧ ಆಯೋಜಿಸಲಾದ ಭಜನ ಸಪ್ತಾಹ ಮಹೋತ್ಸವದಲ್ಲಿ ನಾಲ್ಕು ದಿನಗಳಿಂದ ಇಲ್ಲಿ ಮೊಕ್ಕಾಂ ಇದ್ದು ಸುಳ್ಯ ಮೊಕ್ಕಾಂಗೆ ನಿರ್ಗಮಿಸುವ ಮುನ್ನ ಆಶೀರ್ವಚನ ನೀಡಿದರು.

ಸಂಧ್ಯಾವಂದನೆಯು ನಿತ್ಯ ನೈಮಿತ್ತಿಕ, ಸಮಯ ನಿಬಂìಧ ವ್ಯಾಪ್ತಿಯಲ್ಲಿ ಮಾಡಲೇ ಬೇಕಾದುದು. ಭಜನೆ (ಹರಿನಾಮ ಕೀರ್ತನೆ)ಯನ್ನು ಯಾವುದೇ ಸಮಯದಲ್ಲಿ ಮಾಡಬಹುದು ಎಂದರು ಸೋಮವಾರ ಮುಂಜಾನೆ ವೆಂಕಟ ರಮಣ ದೇವರಿಗೆ ಬೆಳಗಿದ ಆರತಿಯನ್ನು ಸಪ್ತಾಹ ದೀಪಕ್ಕೆ ತೋರಿಸಿ, ಬಳಿಕ ದೇವಸ್ಥಾನದ ಒಳಸುತ್ತಿನಲ್ಲಿ ದೀಪವನ್ನು ಹೊತ್ತೂಯ್ದು ಪುನಃ ನಡೆಯಲ್ಲಿಸಿ ಏಳುದಿನ ಆಹೋರಾತ್ರಿ ನಡೆದ ಭಜನ ಸಪ್ತಾಹಕ್ಕೆ ಮಂಗಲ ಹಾಡಲಾಯಿತು. ದೀಪ ವಿಸರ್ಜನೆ, ಉರುಳು ಸೇವೆ, ಮುಕ್ಕೋಟಿ ದ್ವಾದಶಿ ಉತ್ಸವ ಜರಗಿತು. ಪ್ರ. ಅರ್ಚಕ ವೇ| ಮೂ| ಹರೀಶ್‌ ಭಟ್‌ ಶ್ರೀ ದೇವರಲ್ಲಿ ಕೃತಜ್ಞತ ಪೂರ್ವಕ ಪ್ರಾರ್ಥನೆ ಸಲ್ಲಿಸಿದರು.

ಆಡಳಿತ ಮೊಕ್ತೇಸರ ಜಿ. ಉಮೇಶ್‌ ಪೈ ಅವರು ದೇವರನ್ನಲಂಕರಿಸಿದ ಹೂಮಾಲೆ ಯನ್ನು ಭಜನ ಮಂಡಳಿಯ ಅಧ್ಯಕ್ಷ ವಿಘ್ನೇಶ ಪ್ರಭು ಕೊರಳಿಗೆ ಅಭಿನಂದನಪೂರ್ವಕ ತೊಡಿಸಿ ಗೌರವಿಸಿದರು.

ಆಡಳಿತ ಮಂಡಳಿಯ ಟ್ರಸ್ಟಿಗಳು, ಭಜನ ಮಂಡಳಿ ಸದಸ್ಯರು, ಬಹುಸಂಖ್ಯೆ ಯಲ್ಲಿ ಸಮಾಜಬಾಂಧವರು ಉಪಸ್ಥಿತರಿ ದ್ದರು. ಮಧ್ಯಾಹ್ನ ಮಹಾಪೂಜೆ, ಭೂರಿ ಸಮಾರಾಧನೆ, ಸಂಜೆ ಮರುಭಜನೆ, ರಾತ್ರಿಪೂಜೆ, ಉತ್ಸವ ಜರಗಿದವು.ಭಜನ ಸಪ್ತಾಹದಲ್ಲಿ ಒಟ್ಟು 105 ಭಜನ ಮಂಡಳಿ ಗಳು, ಭಜನ್‌ ಸಂಧ್ಯಾ ಕಾರ್ಯಕ್ರಮಗಳಲ್ಲಿ ಸುಮಾರು 60 ಮಂದಿ ಕಲಾವಿದರು ಪಾಲ್ಗೊಂಡಿದ್ದರು.

ವಿಶೇಷವಾಗಿ ಚೇಂಪಿ ರಾಮಚಂದ್ರ ಭಟ್‌ ಬಳಗದವರ ಗಿಂಡಿ ನೃತ್ಯ, ಸಾಂಪ್ರದಾಯಿಕ ಉಡುಪಿನೊಂದಿಗೆ ಹೆಬ್ರಿ ಮನೋಹರ ಪ್ರಭು ಅವರ ಸಂಕೀರ್ತನ ನೃತ್ಯ, ಮಹಿಳೆಯರ ಸಹಿತ ಯುವಕಲಾವಿದರ ರಂಗೋಲಿ, ಕಲಾವಿದ ರಘನಂದನ ಕಾಮತ್‌ ರೂಪಿಸಿದ ಮೃಣ್ಮಯ ವಿಠೊಭ ಮೂರ್ತಿಯ ಅಲಂಕಾರ, ದೇವಸ್ಥಾನದ ಪುಷ್ಪಾಲಂಕಾರ, ದೀಪಾಲಂಕಾರ ಮೊದಲಾದ ಆಕರ್ಷಣೆಗಳೊಂದಿಗೆ ಸಪ್ತಾಹ ಸಂಪನ್ನಗೊಂಡಿತು.

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Lokayukta

Kinnigoli: ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ,ಜೂನಿಯರ್‌ ಇಂಜಿನಿಯರ್‌ ಲೋಕಾಯಕ್ತ ಬಲೆಗೆ

10

Puttur: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು

1

Puttur: ವಿದ್ಯುತ್‌ ಉಪಕರಣದಲ್ಲಿ ಬೆಂಕಿ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.