ಪೆಟ್ರೋಲಿಯಂಗೆ ಪರ್ಯಾಯ: ಎಥನಾಲ್‌, ಮೆಥನಾಲ್‌ ಬಳಕೆ


Team Udayavani, Dec 17, 2017, 1:36 PM IST

DR_V_K_SARASWAT_1357147f.jpg

ಸುರತ್ಕಲ್‌: ಪರ್ಯಾಯ ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುವ ನಿಟ್ಟಿನಲ್ಲಿ ಶಿಕ್ಷಣವೇತ್ತರು, ವಿಜ್ಞಾನಿಗಳು, ತಂತ್ರಜ್ಞರನ್ನು ಒಂದೇ ವೇದಿಕೆಗೆ ತಂದು ಪ್ರೋತ್ಸಾಹ, ಸಹಯೋಗ ನೀಡಿ ಭವಿಷ್ಯದಲ್ಲಿ ಬದಲಾವಣೆಗೆ ಬೇಕಾದ ಮಾರ್ಗೋಪಾಯ ಶೋಧಿಸಲಾಗುತ್ತಿದೆ. ದೇಶದಲ್ಲಿ ಪೆಟ್ರೋಲಿಯಂ ತೈಲಕ್ಕೆ ಪರ್ಯಾಯವಾಗಿ ಎಥನಾಲ್‌, ಮೆಥನಾಲ್‌ ಬಳಕೆಯ ಕುರಿತು ಸಂಶೋಧನೆಗಳು ಪ್ರಗತಿಯಲ್ಲಿದ್ದು, ಬಳಕೆಗೆ ಸಿಗುವ ಹಂತದಲ್ಲಿವೆ ಎಂದು ಎನ್‌ಐಟಿಐ ಆಯೋಗದ ಸದಸ್ಯ, ಪದ್ಮಭೂಷಣ ಡಾ| ವಿ.ಕೆ. ಸಾರಸ್ವತ್‌ ನುಡಿದರು. ದಿ ಕಂಬ್ಯೂಶನ್‌ ಇನ್‌ಸ್ಟಿಟ್ಯೂಟ್‌ ಇಂಡಿಯನ್‌ ಸೆಕ್ಷನ್‌ (ಸಿಐಐಎಸ್‌) ವತಿಯಿಂದ ಇಂಟರ್ನಲ್‌ ಕಂಬ್ಯೂಶನ್‌ ಎಂಜಿನ್‌ಗಳು ಮತ್ತು ಕಂಬ್ಯೂಶನ್‌ ಕುರಿತಾಗಿ ಎನ್‌ಐಟಿಕೆಯಲ್ಲಿ ಆಯೋಜನೆಗೊಂಡಿರುವ ತ್ರಿದಿನ ರಾಷ್ಟ್ರೀಯ ಕಾರ್ಯಾಗಾರವನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಲಿ. ಚೇರ್‌ಮನ್‌  ಸಂಜೀವ ಸಿಂಗ್‌, ಎನ್‌ಐಟಿಕೆ ನಿರ್ದೇಶಕ ಪ್ರೊ| ಕೆ. ಉಮಾ ಮಹೇಶ್ವರ ರಾವ್‌, 25ನೇ ಎನ್‌ಸಿಐಸಿಇಸಿಯ ಚೇರ್‌ಮನ್‌ ಪ್ರೊ| ನರೇಂದ್ರನಾಥ್‌, ಸಿಐಐಎಸ್‌ ಕಾರ್ಯದರ್ಶಿ ಪಿ.ಕೆ. ಪಾಂಡೆ, ಸಂಯೋಜಕ ಕಾರ್ಯದರ್ಶಿ ಡಾ| ಕುಮಾರ್‌ ಜಿ.ಎನ್‌. ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಾಗಾರವು ಡಿ. 17ರ ವರೆಗೆ ನಡೆಯಲಿದ್ದು, ಐಐಎಸ್‌ಸಿ, ಐಐಟಿ, ಎನ್‌ಐಟಿ ಸಹಿತ ದೇಶದ ವಿವಿಧ ಭಾಗಗಳಿಂದ ವಿಜ್ಞಾನಿಗಳು, ತಂತ್ರಜ್ಞರು, ಶೈಕ್ಷಣಿಕ ಕೇಂದ್ರಗಳ ಮುಖ್ಯಸ್ಥರು ಆಗಮಿಸಿದ್ದಾರೆ. ಸುಮಾರು 104 ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ.

ಪರ್ಯಾಯ ಇಂಧನ ಮೆಥನಾಲ್‌: ಡಾ| ವಿ. ಕೆ. ಸಾರಸ್ವತ್‌ ಭವಿಷ್ಯದಲ್ಲಿ ಪರ್ಯಾಯ ಇಂಧನವಾಗಿ ಮೆಥನಾಲ್‌ ಬಳಕೆ ಅಗತ್ಯ. ಅಡುಗೆ ಅನಿಲದ ಬದಲು ಇದರ ಉಪಯೋಗ ಸಾಧ್ಯ. ಸ್ವೀಡಿಷ್‌ ಸಂಸ್ಥೆಯೊಂದು ಮೆಥನಾಲ್‌ ಬಳಕೆ ಸಾಧ್ಯವಾಗುವ ಸ್ಟವ್‌ಉತ್ಪಾದನ ಘಟಕವನ್ನು ದೇಶದಲ್ಲಿ ಸ್ಥಾಪಿಸಿದೆ ಎಂದು ಡಾ| ವಿ. ಕೆ. ಸಾರಸ್ವತ್‌ ಹೇಳಿದರು.

ಐಸಿ ಎಂಜಿನ್‌ಗಳು ಮತ್ತು ಕಂಬ್ಯೂಶನ್‌ ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ದರು. ಮೆಥನಾಲ್‌ ಬಳಕೆಯಿಂದ ಶೇ. 20ರಷ್ಟು ಅಡುಗೆ ಅನಿಲ ಉಳಿತಾಯವಾಗಲಿದೆ. ಉಜ್ವಲ ಯೋಜನೆಯಿಂದ ಅಡುಗೆ ಅನಿಲಕ್ಕೆ ಬೇಡಿಕೆ ಹೆಚ್ಚಲಿದ್ದು, ಆಮದು ಪ್ರಮಾಣವೂ ಏರಿಕೆಯಾಗುವ ಸಾಧ್ಯತೆಯಿದೆ. ಆದರೆ ಕಚ್ಚಾ ತೈಲ, ಇಂಧನ ಆಮದಿನಿಂದ ದೇಶದ ಆರ್ಥಿಕ ಹೊರೆ ಹೆಚ್ಚುತ್ತದೆ. ಇದಕ್ಕೆ ಪರಿಹಾರವಾಗಿ ಪರ್ಯಾಯ ಇಂಧನ ಮೆಥನಾಲ್‌ ಮಿಶ್ರಿತ ತೈಲದ ಬಳಕೆ ವೆಚ್ಚವನ್ನು ತಗ್ಗಿಸಲಿದೆ. ನೈಜೀರಿಯ ಮೆಥನಾಲ್‌ ಬಳಕೆಯಲ್ಲಿ ಯಶಸ್ವಿಯಾಗಿದೆ ಎಂದರು.

ಸಮುದ್ರ ತೀರದಲ್ಲಿ ಅನೇಕ ಪರ್ಯಾಯ ಖನಿಜಗಳು ಹುದುಗಿದ್ದು, ಇವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇರಿಸಬೇಕಿದೆ. ವಿದೇಶಗಳಿಗೆ ಇದರ ರಫ‌¤ನ್ನು ನಿಷೇಧಿ ಸಿ ಅಪರೂಪದ ಖನಿಜಗಳನ್ನು ಸಂರಕ್ಷಿಸಬೇಕು. ಈ ಎಲ್ಲ ವಿಚಾರಗಳ ಬಗ್ಗೆ ಕಾರ್ಯಾಗಾರದಲ್ಲಿ ಸಂಶೋಧಕರು ಬೆಳಕು ಚೆಲ್ಲಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಎನ್‌ಐಟಿಕೆ ನಿರ್ದೇಶಕ ಪ್ರೊ| ಉಮಾಮಹೇಶ್ವರ ರಾವ್‌ ಉಪಸ್ಥಿತರಿದ್ದರು.

ಡಾ| ವಿ.ಕೆ. ಸಾರಸ್ವತ್‌ ಮಾಲಿನ್ಯದಿಂದ ಕಂಗೆಟ್ಟಿರುವ ದಿಲ್ಲಿಯಲ್ಲಿ ಐಒಸಿ ಎ. 1 2018ರಿಂದ ಬಿಎಸ್‌6 ಇಲ್ಲವೇ ಯೂರೋ 6 ಮಾದರಿಯ ತೈಲವನ್ನು ಪೂರೈಸಲಿದೆ. 2020ರ ವೇಳೆಗೆ ದೇಶಾದ್ಯಂತ ಯೂರೋ 6 ಮಾದರಿಯ ಪೆಟ್ರೋಲ್‌- ಡೀಸೆಲ್‌ ವಿತರಿಸುವ
ಸಾಧ್ಯತೆಯಿದೆ. ಹೊಗೆ ಮಾಲಿನ್ಯ ತಗ್ಗಿಸಲು ಸರಕಾರವು ಎಥನಾಲ್‌ ಮಿಶ್ರಣ ಬಳಕೆಗೆ ಮುಂದಾಗಿದೆ. ಇದಕ್ಕಾಗಿ ಐಒಸಿ ಬಯೋ ಎಥನಾಲ್‌ ಘಟಕವನ್ನು ಗುಜರಾತ್‌ ಮತ್ತು ಹರಿಯಾಣಗಳಲ್ಲಿ ಸ್ಥಾಪಿಸಲಿದೆ. ಪೆಟ್ರೋಲಿಯಂ ತೈಲಗಳಿಗೆ ಪರ್ಯಾಯವಾಗಿ ಇದನ್ನು ಬಳಸಬಹುದಾದರೂ ಯಾವಾಗ ಬಳಕೆಗೆ ಲಭ್ಯ ಎಂಬುದಕ್ಕೆ ಕಾಲಮಿತಿ ವಿಧಿಸಲಾಗದು. ಇದೊಂದು ದೀರ್ಘ‌ಕಾಲೀನ ಪ್ರಕ್ರಿಯೆಯಾಗಿದೆ ಎಂದು ಐಒಸಿ ಚೇರ್‌ಮನ್‌ ಸಂಜೀವ್‌ ಸಿಂಗ್‌ ಹೇಳಿದರು.

ಟಾಪ್ ನ್ಯೂಸ್

1-BCCI

Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pejavara-Sri

Mangaluru: ಅಯೋಧ್ಯೆ ಮಾದರಿ ಎಲ್ಲ ದೇವಾಲಯಗಳಿಗೂ ವಿಶ್ವಸ್ಥ ಮಂಡಳಿ ರೂಪಿಸಿ: ಪೇಜಾವರ ಶ್ರೀ

7(1)

Mangalore: ಊದು ಪೂಜೆ: ಹುಲಿ ವೇಷಕ್ಕೆ ಮುಹೂರ್ತ!

9-mng-1

Mumtaz Ali ನಾಪತ್ತೆ ಪ್ರಕರಣ; ಶೋಧ ಕಾರ್ಯಾಚರಣೆಗೆ ಈಶ್ವರ ಮಲ್ಪೆ ತಂಡ ಆಗಮನ

2(1)

Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

puttige

Udupi; ಗೀತಾರ್ಥ ಚಿಂತನೆ 57: ದುರ್ಯೋಧನನಲ್ಲಿ ಮಾನಸಿಕ ಸ್ಥೈರ್ಯ ಕುಸಿತ

1-BCCI

Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.