![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Nov 18, 2022, 9:10 AM IST
ಮಂಗಳೂರು: ಈ ಬಾರಿಯ ಮಳೆಗಾಲದ ಋತು ಬಹುತೇಕ ಮುಗಿಯುತ್ತ ಬಂದಿದ್ದು, ಇನ್ನು ಹಿಂಗಾರು ಮಳೆ ಕೆಲವು ಸಮಯ ಸುರಿದು ಬಳಿಕ ಸಂಪೂರ್ಣವಾಗಿ ಸ್ತಬ್ಧಗೊಳ್ಳಲಿದೆ. ಇದೇ ವೇಳೆ ಈ ಬಾರಿಯ ಚಂಡ ಮಾರುತಗಳನ್ನು ನೋಡುವುದಾದರೆ ಇಲ್ಲಿಯವರೆಗೆ ಕೇವಲ ಎರಡು ಮಾತ್ರ ಅಬ್ಬರಿಸಿರುವುದನ್ನು ಕಾಣಬಹುದು.
ಪ್ರತಿ ಮಳೆಗಾಲದಲ್ಲಿ ವಾಯುಭಾರ ಕುಸಿತ, ಚಂಡಮಾರುತಗಳು ಮಳೆ ಪ್ರಮಾಣ ವನ್ನು ಹೆಚ್ಚಿಸಿ ಭರ್ಜರಿಯಾಗಿ ಸುರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದೆ ಈ ಬಾರಿ ಸೈಕ್ಲೋನ್ಗಳ ಸಂಖ್ಯೆ ಅತ್ಯಂತ ಕಡಿಮೆ. ವಾಯು ಭಾರ ಕುಸಿತಗಳು ಉಂಟಾದರೂ, ಅವು ಚಂಡಮಾರುತ ವಾಗಿ ಬದಲಾಗು ವಲ್ಲಿ ವಿಫಲವಾಗಿವೆ.
11 ಬಾರಿ ಪೂರಕ ವಾತಾವರಣ:
ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಈ ಸಲ ಒಟ್ಟು 11 ಬಾರಿ ಸೈಕ್ಲೋನ್ಗೆ ಪೂರಕ ವಾತಾವರಣ ನಿರ್ಮಾಣವಾಗಿತ್ತು. ಅದರಲ್ಲಿ ಎರಡು ಮಾತ್ರ ಚಂಡಮಾರುತವಾಗಿ ಬದಲಾ ಗಿದ್ದು, ಅದೂ ಬಂಗಾಲ ಕೊಲ್ಲಿಯಲ್ಲಿ. ಉಳಿದಂತೆ ಒಟ್ಟು 11 ವಾಯುಭಾರ ಕುಸಿತ, 5 ತೀವ್ರ ವಾಯುಭಾರ ಕುಸಿತ ಗಳು ಉಂಟಾಗಿವೆ. ಅರಬ್ಬಿ ಸಮುದಲ್ಲಿ ಒಂದೂ ಚಂಡಮಾರುತ ಎದ್ದಿಲ್ಲ.
ಅಸಾನಿಯಿಂದ ಸಿತರಂಗ್ ವರೆಗೆಮೇ ತಿಂಗಳ 7ರಿಂದ 12ರ ನಡುವೆ ಬಂಗಾಲ ಕೊಲ್ಲಿಯಲ್ಲಿ “ಅಸಾನಿ’ ಚಂಡ ಮಾರುತ ಉಂಟಾಗಿ ಅಂಡಮಾನ್ ನಿಕೋಬಾರ್, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಒಡಿಶಾ ರಾಜ್ಯದಲ್ಲಿ ವ್ಯಾಪಕ ಹಾನಿ ಯುಂಟಾ ಗಿತ್ತು. ಎರಡನೇ ಚಂಡ ಮಾರುತ “ಸಿತರಂಗ್’ ಅ. 22-26ರ ನಡುವೆ ಕಾಣಿಸಿಕೊಂಡಿತ್ತು. ಅಂಡಮಾನ್ ನಿಕೋಬಾರ್, ಒಡಿಶಾ, ಪಶ್ಚಿಮ ಬಂಗಾಲ, ಝಾರ್ಖಂಡ್, ಮೇಘಾಲಯ, ಅಸ್ಸಾಂ, ತ್ರಿಪುರಾಗ ಳಲ್ಲಿ ವ್ಯಾಪಕ ಮಳೆಗೆ ಕಾರಣವಾಗಿತ್ತು.
ಬದಲಾವಣೆಗೆ ಕಾರಣ :
ಜಾಗತಿಕ ತಾಪಮಾನ ಹೆಚ್ಚಳ, ಹವಾಮಾನದಲ್ಲಿ ಉಂಟಾಗುವ ಬದಲಾವಣೆ, ಮಾನವ ಪ್ರೇರಿತ ಮತ್ತು ಪ್ರಕೃತಿಯ ಸ್ವಯಂಪ್ರೇರಿತ ಹವಾಮಾನ ಬದಲಾವಣೆ ಮೊದಲಾದವುಗಳು ಚಂಡಮಾರುತ, ವಾಯುಭಾರ ಕುಸಿತ ಚಂಡಮಾರುತದ ಮಟ್ಟಕ್ಕೆ ಪರಿ ವರ್ತನೆಯಾಗುವುದು, ಅತಿವೃಷ್ಟಿ- ಆನಾ ವೃಷ್ಟಿ ಮೊದಲಾದವುಗಳಿಗೆ ಕಾರಣ. ಈ ಬಾರಿಯ ಮುಂಗಾರಿನಲ್ಲಿ ಮೊದಲ ಬಾರಿಗೆ ಎಂಬಂತೆ ಪ್ರದೇಶದಿಂದ ಪ್ರದೇಶಕ್ಕೆ ಸೀಮಿತವಾಗಿ ಮಳೆ ಸುರಿ ದಿರುವುದನ್ನು ಇಲ್ಲಿ ಸ್ಮರಿಸಬಹುದು.
ಸಾಧ್ಯತೆ ಅಲ್ಲಗಳೆಯುವಂತಿಲ್ಲ:
ಬಂಗಾಲ ಕೊಲ್ಲಿಯಲ್ಲಿ ಡಿಸೆಂಬರ್ ಅಂತ್ಯದವರೆಗೂ ಚಂಡಮಾರುತ ಬರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆದರೆ ಅರಬ್ಬಿ ಸಮುದ್ರದಲ್ಲಿ ಮಾತ್ರ ಇನ್ನು ಚಂಡಮಾರುತದ ಸಾಧ್ಯತೆ ಇಲ್ಲ.ಸದ್ಯ ಬಂಗಾಲ ಕೊಲ್ಲಿಯಲ್ಲಿ ಗಾಳಿ ಇರುವುದರಿಂದ ತಮಿಳುನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹಿಂದಿನ ವರ್ಷಗಳ ಚಂಡಮಾರುತಗಳು :
ಸಮುದ್ರದ ಮೇಲ್ಮೈ ತಾಪಮಾನ ಬಂಗಾಲ ಕೊಲ್ಲಿಯಲ್ಲಿ ಯಾವಾಗಲೂ ಹೆಚ್ಚಿದ್ದು, ಗಾಳಿಯ ದಿಕ್ಕಿನ ಬದಲಾವಣೆ ಪ್ರಕ್ರಿಯೆ ಕಡಿಮೆ ಇರುತ್ತದೆ. ಇದರಿಂದ ಚಂಡಮಾರುತ ಸಾಧ್ಯತೆ ಹೆಚ್ಚು. ಆದರೆ ಅರಬ್ಬಿ ಸಮುದ್ರದಲ್ಲಿ ಅಂತಹ ವಾತಾವರಣ ಕಂಡು ಬರುವುದಿಲ್ಲ.– ಎ. ಪ್ರಸಾದ್, ಹವಾಮಾನ ತಜ್ಞ, ಐಎಂಡಿ ಬೆಂಗಳೂರು
–ಭರತ್ ಶೆಟ್ಟಿಗಾರ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.