![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Feb 15, 2018, 2:28 PM IST
ಪಕ್ಷಿಕೆರೆ: ರಾಜ್ಯ ಸರಕಾರದ ಅಲ್ಪಸಂಖ್ಯಾಕರ ಕಲ್ಯಾಣ ನಿಧಿಯಿಂದ ಕ್ಷೇತ್ರದಲ್ಲಿ ಸುಮಾರು 4.5 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಗ್ರಾಮದ ಅಭಿವೃದ್ಧಿಯೇ ಸರಕಾರದ ಮೂಲ ಉದ್ದೇಶ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಫೆ. 13ರಂದು ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತೂರು ಮುಸ್ಲಿಂ ಧಪನ್ ಭೂಮಿ ಪ್ರದೇಶದಲ್ಲಿ ಹೈಮಾಸ್ಟ್ ದೀಪವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಯವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಗ್ರಾ.ಪಂ. ಅಧ್ಯಕ್ಷ ನಾಗೇಶ್ ಅಂಚನ್, ಸದಸ್ಯರಾದ ಲೀಲಾ ಪೂಜಾರ್ತಿ, ದೀಪಕ್ ಕೋಟ್ಯಾನ್, ಸುಮತಿ ಪೂಜಾರ್ತಿ, ಆಶಾ, ಸುರೇಶ್ ದೇವಾಡಿಗ ಪಂಜ, ಮಯ್ಯದ್ದಿ ಪಕ್ಷಿಕೆರೆ ಮಸೀದಿಯ ಅಧ್ಯಕ್ಷ ಕೆ.ಯು. ಮಹಮ್ಮದ್, ಧರ್ಮಗುರು ಅಬ್ದುಲ್ ಖಾದರ್ ಮದನಿ, ಅಶ್ರಫ್ ಅಂಜದಿ, ಪಲ್ಲಿಕುಟ್ಟಿ, ಕೆ.ಎ. ಮಹಮ್ಮದ್ ಬಾವ, ಪ್ರಾಧಿಕಾರದ ಸದಸ್ಯ ಸಾಹುಲ್ ಹಮೀದ್, ಕಾಂಗ್ರೆಸ್ ಮುಖಂಡರಾದ ಬಿ.ಎಂ. ಆಸೀಫ್, ಪ್ರವೀಣ್ ಕುಮಾರ್ ಬೊಳ್ಳೂರು, ನವೀನ್, ರೇವತಿ ಶೆಟ್ಟಿಗಾರ್, ಅಶೋಕ್ ದೆಸಣಗಿ , ವಾಹಿದ್, ರಮೇಶ್ ಕುಮಾರ್, ಪಿಡಿಒ ರಮೇಶ್ ರಾಥೋಡ್ ಮತ್ತಿತರರಿದ್ದರು.
You seem to have an Ad Blocker on.
To continue reading, please turn it off or whitelist Udayavani.