![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 8, 2024, 11:57 PM IST
ಬಜಪೆ: ನಕಲಿ ನಂಬರ್ ಪ್ಲೇಟ್ ಬಳಸಿ ಕಾರ್ಕಳ, ಅಜೆಕಾರು, ಬಜೆಗೋಳಿ, ಕೆರ್ವಾಸೆ, ತೀರ್ಥಹಳ್ಳಿ ಕಡೆಯಿಂದ ನೂರಾರು ದನಗಳನ್ನು ಕಳವು ಮಾಡಿದ್ದ ಮೂಡುಬಿದಿರೆ ತಾಲೂಕಿನ ಕೊಡಂಗಲ್ಸ್ ನ ಪ್ರಾಂತ್ಯ ಗ್ರಾಮದ ಪೇಪರ್ ಮಿಲ್ ಬಳಿಯ ಮೊಹಮ್ಮದ್ ಶರೀಫ್ (23) ಹಾಗೂ ತೋಡಾರು ಗ್ರಾಮದ ಮದ್ರಸಾ ಬಳಿಯ ಹಸೈನಾರ್ (28)ನನ್ನು ಕಾರು ಸಹಿತ ಬಜಪೆ ಪೊಲೀಸರು ಫೆ. 8ರಂದು ವಶಪಡಿಕೊಂಡಿದ್ದಾರೆ.
ಆರೋಪಿ ಹಸೈನಾರ್ ಮೇಲೆ ಬಜಪೆ ಠಾಣೆಯಲ್ಲಿ ದನ ಕಳವು ಪ್ರಕರಣ ಮೂಡುಬಿದರೆಯಲ್ಲಿ ಸೀಟ್ ಕಳವು ಪ್ರಕರಣ ದಾಖಲಾಗಿದೆ. ಫೆ. 8ರಂದು ಬೆಳಗ್ಗೆ ಬಿಳಿ ಬಣ್ಣದ ಕಾರು ಮುಚ್ಚಾರು ಕ್ರಾಸ್ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆ ನಿರೀಕ್ಷಕ ಸಂದೀಪ್ ಅವರಿಗೆ ಬಂದ ಮಾಹಿತಿಯಂತೆ ಪಿಎಸ್ಐ ರೇವಣಸಿದ್ದಪ್ಪ ಅವರು ಸಿಬಂದಿ ಜತೆಯಲ್ಲಿ ತೆರಳಿ ಎಡಪದವು ಗ್ರಾಮದ ಮುಚ್ಚಾರು ಕ್ರಾಸ್ ಸಮೀಪದಲ್ಲಿ ಕಾರಿಗೆ ಅಡ್ಡ ನಿಲ್ಲಿಸಿದಾಗ ಒಬ್ಬ ಪರಾರಿಯಾಗಿದ್ದ. ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು.
ಆರೋಪಿಗಳು ಹಂಜಾ, ಮೊಹಮ್ಮದ್ ಶರೀಫ್ ಮತ್ತು ಹಸೈನಾರ್ ಜತೆ ಸೇರಿ ಬಡಗ ಎಡಪದವು ಗ್ರಾಮದ ತಿಪ್ಲಬೆಟ್ಟುವಿನ ಮನೆಯೊಂದರ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ದನಗಳ ಪೈಕಿ 2 ಹಸುಗಳನ್ನು ಮತ್ತು ಒಂದು ಕರುವನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ದನಗಳನ್ನು ತೋಡಾರಿನ ಅನ್ಸಾರ್ನಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದರು. ಆರೋಪಿಗಳ ವಶದಲ್ಲಿದ್ದ 5 ಲಕ್ಷ ರೂ. ಮೌಲ್ಯದ ಬಿಳಿ ಬಣ್ಣದ ಹ್ಯುಂಡೈ ಕಾರು ವಶಪಡಿಸಿಕೊಳ್ಳಲಾಗಿದೆ. ದನ ಕಳವು ನಡೆಸಿದ್ದು ಬಡಗ ಎಡಪದವು ಗ್ರಾಮದ ತಿಪ್ಪೆಬೆಟ್ಟು ನಿವಾಸಿ ಸುಜಾತಾ ಅವರ ಮನೆಯದ್ದಾಗಿದ್ದು, ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.