Bantwal: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!

ಗರುಡ ಫ್ರೆಂಡ್ಸ್‌ ಹೆಸರಿನಲ್ಲಿ ಈ ಬಾರಿ 2ನೇ ವರ್ಷದ ತಿರುಗಾಟ; ಟೀಮ್‌ನಲ್ಲಿರುವವರು ಗೆಳೆಯರೇ!; ಕಳೆದ ವರ್ಷ 15 ಮಕ್ಕಳ ತಂಡ, ಈ ಬಾರಿ 30 | 10 ಕಸರತ್ತಿನ ಹುಲಿಗಳು | 100 ಮನೆ ಭೇಟಿ ಗುರಿ

Team Udayavani, Oct 1, 2024, 12:32 PM IST

1(1)

ಬಂಟ್ವಾಳ: ಹುಲಿ ವೇಷದ ತಾಸೆಯ ಪೆಟ್ಟು ಕೇಳಿದರೆ ಸಾಕು ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಒಂದೆರಡು ಸ್ಟೆಪ್‌ ಹಾಕಬೇಕು ಎಂಬಷ್ಟು ನಮ್ಮಲ್ಲಿ ಹುಚ್ಚು ಹಿಡಿಸುತ್ತದೆ. ನವರಾತ್ರಿ ಸಂದರ್ಭ ಸಾಕಷ್ಟು ಹುಲಿ ತಂಡಗಳು ಪ್ರದರ್ಶನ ನೀಡುತ್ತವೆ. ಇದಕ್ಕೆ ಅನುಭವಿಗಳೇ ಸಾರಥಿಗಳು. ಆದರೆ ಪೊಳಲಿಯಲ್ಲಿ 17 ವರ್ಷದ ಬಾಲಕನೋರ್ವ ಸ್ನೇಹಿತರನ್ನು ಕೂಡಿಕೊಂಡು ಹುಲಿವೇಷ ತಂಡ ಕಟ್ಟಿದ್ದಾನೆ. ಅದರ 2ನೇ ವರ್ಷದ ತಿರುಗಾಟಕ್ಕೆ ಈಗ ವೇದಿಕೆ ಅಣಿಯಾಗಿದೆ!
ಪೊಳಲಿಯ ಗೋಪಾಲ ದೇವಾಡಿಗ ಅವರ ಪುತ್ರ ತನ್ವಿತ್‌ ಅವರು ಗರುಡ ಫ್ರೆಂಡ್ಸ್‌ ಪೊಳಲಿ ಎಂಬ ಹೆಸರಿನಲ್ಲಿ ಹುಲಿ ತಂಡವನ್ನು ಮುನ್ನಡೆಸುತ್ತಿದ್ದಾನೆ. ಕಳೆದ ವರ್ಷ 2 ದಿನಗಳ ಯಶಸ್ವಿ ಹುಲಿ ಕುಣಿತ ನಡೆದಿದ್ದು, ಈ ಬಾರಿಯೂ ಅ. 10 ಹಾಗೂ 11ರಂದು ತಮ್ಮ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಪೊಳಲಿ ದೇವಾಲಯದಲ್ಲಿ ಪ್ರಾರ್ಥಿಸಿ ಅ. 9ರಂದು ರಾತ್ರಿ ಊದು ಪೂಜೆ ನಡೆದು 11ರ ರಾತ್ರಿ ಪೊಳಲಿಯಲ್ಲಿ ಸ್ಟೇಜ್‌ ಪ್ರದರ್ಶನ ನೀಡಲಿದ್ದಾರೆ.

ಈ ಬಾರಿ ಡಬಲ್‌ ಹುಲಿಗಳು.!
ಕಳೆದ ವರ್ಷ ಸುಮಾರು 15 ಮಂದಿ ಹುಲಿ ವೇಷ ಹಾಕಿದ್ದು, ತನ್ವಿತ್‌ನ ತಮ್ಮ ಮನ್ವಿತ್‌ ಸೇರಿ ಇಬ್ಬರು ಪಲ್ಟಿ ಹೊಡೆಯುವ ಸಾಹಸಿಗಳಿದ್ದರು. ಆದರೆ ಈ ಬಾರಿ 30 ಮಂದಿ ಹುಲಿ ವೇಷಧಾರಿಗಳಿದ್ದು, 10 ಮಂದಿ ಪಲ್ಟಿ ಹೊಡೆಯುವವರಿದ್ದಾರೆ! ಈಗಾಗಲೇ ಮೂರು ರವಿವಾರಗಳಲ್ಲಿ ಅಭ್ಯಾಸವನ್ನು ಪೂರ್ತಿಗೊಳಿಸಿ ಮುಂದೆ ನವರಾತ್ರಿ ಎರಡು ದಿನಗಳಲ್ಲಿ ಸುಮಾರು 100 ಮನೆಗಳನ್ನು ಸಂಪರ್ಕಿಸುವ ಟಾರ್ಗೆಟ್‌ ಹೊಂದಿದ್ದಾರೆ.

ಹುಲಿಗಳ ತಲೆ ತಯಾರಿಸುವ ತನ್ವಿತ್‌
ಸಾಮಾನ್ಯವಾಗಿ ಹುಲಿ ತಂಡದವರು ಹುಲಿಯ ತಲೆಯನ್ನು ಬಾಡಿಗೆಗೆ ಪಡೆದು ಪ್ರದರ್ಶನ ನೀಡುತ್ತಾರೆ. ಇದಕ್ಕೆ 15 ಸಾವಿರದಷ್ಟು ಬಾಡಿಗೆ ಇರುತ್ತದೆ. ಈ ಮಕ್ಕಳ ಟೀಮ್‌ನಲ್ಲಿ ಅಷ್ಟು ಹಣವಿಲ್ಲದೆ ಇರುವುದರಿಂದ ತನ್ವಿತ್‌ ತಾನೇ ತಲೆಗಳನ್ನು ತಯಾರಿಸಿದ್ದಾನೆ. ಒಂದು ತಲೆ ಸಿದ್ಧಗೊಳ್ಳಬೇಕಾದರೆ ಮೂರ್ನಾಲ್ಕು ದಿನಗಳ ಕೆಲಸವಿದೆ. ಈಗಾಗಲೇ ಬೇಕಾದಷ್ಟು ಹುಲಿಗಳ ತಲೆಗಳು ಸಿದ್ಧಗೊಂಡಿವೆ!

ಕಳೆದ ವರ್ಷದ ಊದು ಪೂಜೆಯ ದೃಶ್ಯ.

ಜಾತ್ರೆಯ ಸಂತೆ ಆದಾಯ ಹುಲಿ ವೇಷ ಕುಣಿತಕ್ಕೆ ಬಳಕೆ
ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್‌ನಲ್ಲಿ ಪ್ರಥಮ ಡಿಪ್ಲೊಮಾ ವಿದ್ಯಾರ್ಥಿಯಾಗಿರುವ ತನ್ವಿತ್‌ಗೆ ಬಾಲ್ಯದಿಂದಲೂ ಏನಾದರೂ ಸಾಧಿಸಬೇಕೆಂಬ ಛಲ. ಹಲವು ವರ್ಷಗಳಿಂದ ಪೊಳಲಿ ಜಾತ್ರೆಯ ಸಂದರ್ಭ ಅಂಗಡಿ ಹಾಕಿ ಒಂದಷ್ಟು ಹಣ ಸಂಪಾದಿಸುತ್ತಿದ್ದ. ಜತೆಗೆ ಕೃಷಿಕರಿಂದ ಕಲ್ಲಂಗಡಿ ಹಣ್ಣನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ. ಈ ಸಂಪಾದನೆಯ ಹಣವನ್ನು ಹುಲಿ ಕುಣಿತಕ್ಕೆ ಬಳಸಿದ್ದಾನೆ.

2022ರಲ್ಲಿ ಕರಡಿ ತಂಡ ಕಟ್ಟಿದ್ದ ತನ್ವಿತ್‌.
ಕಳೆದ ಪೊಳಲಿ ಜಾತ್ರೆಯಲ್ಲಿ ಅಂಗಡಿ ಹಾಕಿ ಅದರಲ್ಲಿ ಬಂದ ಸುಮಾರು 20 ಸಾವಿರ ರೂ. ಆದಾಯವನ್ನು ಬಳಸಿಕೊಂಡು ಮೊದಲ ವರ್ಷ ಹುಲಿ ತಂಡದ ಪ್ರದರ್ಶನ ನೀಡಿದ್ದ. ಕಳೆದ ವರ್ಷ ಒಟ್ಟು 1.50 ಲಕ್ಷ ರೂ. ನಷ್ಟು ಖರ್ಚಾಗಿದ್ದು, ಸಂಪಾದನೆ ಬರೀ 1.40 ಲಕ್ಷ ರೂ. ಅಂದರೆ ಸುಮಾರು 10 ಸಾವಿರ ರೂ.ಗಳಷ್ಟು ನಷ್ಟ ಉಂಟಾಗಿತ್ತು. ಆದರೂ ಈ ಬಾರಿ ಮತ್ತೆ ಸಾಹಸಕ್ಕೆ ಕೈ ಹಾಕಿದ್ದಾರೆ.

ಈ ಬಾರಿ ಸುಮಾರು 100 ಮನೆಗೆ ಹೋಗುತ್ತೇವೆ
ಸುಮಾರು 30 ಮಂದಿ ಹುಲಿ ವೇಷಧಾರಿಗಳ ತಂಡ ಈ ಬಾರಿ 2 ದಿನಗಳ ಹುಲಿ ಕುಣಿತ ಪ್ರದರ್ಶನ ನೀಡಲಿದ್ದು, ಈಗಾಗಲೇ ಪ್ರಾಕ್ಟಿಸ್‌ ಪೂರ್ತಿಗೊಳಿಸಿದ್ದೇವೆ. ಪೊಳಲಿ ಸುತ್ತಮುತ್ತಲ ಸುಮಾರು 100 ಮನೆಗಳಿಗೆ ಭೇಟಿ ನೀಡಿ ಅ. 11ರಂದು ರಾತ್ರಿ ಪೊಳಲಿಯಲ್ಲಿ ಸ್ಟೇಜ್‌ ಪ್ರದರ್ಶನ ನೀಡಲಿದ್ದೇವೆ. ಇದು 2ನೇ ವರ್ಷದ ಹುಲಿ ಹುಣಿತವಾಗಿದ್ದು, 2022ರಲ್ಲಿ ಕರಡಿ ವೇಷದ ತಂಡವನ್ನು ಇಳಿಸಿದ್ದೆ.
– ತನ್ವಿತ್‌, ಗರುಡ ಫ್ರೆಂಡ್ಸ್‌ ಹುಲಿ ತಂಡದ ಮುಖ್ಯಸ್ಥ

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Bangkok: ಶಾಲಾ ಬಸ್‌ಗೆ ಬೆಂಕಿ… ವಿದ್ಯಾರ್ಥಿಗಳು ಸೇರಿ 25 ಮಂದಿ ಸಜೀವ ದಹನ

Tragedy: ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಶಾಲಾ ಬಸ್ ಬೆಂಕಿಗಾಹುತಿ… 25 ಮಂದಿ ಸಜೀವ ದಹನ

ಲಡಾಖ್‌ ನಿಂದ ದೆಹಲಿ ಚಲೋ ಪಾದಯಾತ್ರೆ-ವಾಂಗ್ಚುಕ್‌ ವಶಕ್ಕೆ: ವಿಪಕ್ಷಗಳ ಆಕ್ರೋಶ

ಲಡಾಖ್‌ ನಿಂದ ದೆಹಲಿ ಚಲೋ ಪಾದಯಾತ್ರೆ-ವಾಂಗ್ಚುಕ್‌ ವಶಕ್ಕೆ: ವಿಪಕ್ಷಗಳ ಆಕ್ರೋಶ

Kantara: Chapter 1: ʼಕಾಂತಾರ-1ʼನಲ್ಲಿ ರಿಷಬ್‌ ತಂದೆ ಪಾತ್ರದಲ್ಲಿ ಮೋಹನ್‌ ಲಾಲ್?

Kantara: Chapter 1: ʼಕಾಂತಾರ-1ʼನಲ್ಲಿ ರಿಷಬ್‌ ತಂದೆ ಪಾತ್ರದಲ್ಲಿ ಮೋಹನ್‌ ಲಾಲ್?

Dharwad: ಕಬ್ಬಿನ ಗದ್ದೆಯಲ್ಲಿ ಪತ್ತೆಯಾಯ್ತು ಆರು ಅಡಿ ಉದ್ದದ ಹೆಬ್ಬಾವು

Dharwad: ಕಬ್ಬಿನ ಗದ್ದೆಯಲ್ಲಿ ಪತ್ತೆಯಾಯ್ತು ಆರು ಅಡಿ ಉದ್ದದ ಹೆಬ್ಬಾವು

GOAT OTT Release: ದಳಪತಿ ವಿಜಯ್‌ ʼಗೋಟ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್‌

GOAT OTT Release: ದಳಪತಿ ವಿಜಯ್‌ ʼಗೋಟ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್‌

Kollegala: ಇಟ್ಟಿಗೆಯಿಂದ ಹಲ್ಲೆ: ಆಟೋ ಚಾಲಕ ಮೃತ್ಯು… ನೆರೆಮನೆಯ ಇಬ್ಬರು ಮಹಿಳೆಯರ ಬಂಧನ

Kollegala: ಇಟ್ಟಿಗೆಯಿಂದ ಹಲ್ಲೆ: ಆಟೋ ಚಾಲಕ ಮೃತ್ಯು… ನೆರೆಮನೆಯ ಮಹಿಳೆಯರಿಬ್ಬರ ಬಂಧನ

Top court: ಬುಲ್ಡೋಜರ್‌ ಕಾರ್ಯಾಚರಣೆ-ದೇವಸ್ಥಾನ, ಮಸೀದಿ ಬಗ್ಗೆ ಸುಪ್ರೀಂ ಹೇಳಿದ್ದೇನು?

Top court: ಬುಲ್ಡೋಜರ್‌ ಕಾರ್ಯಾಚರಣೆ-ದೇವಸ್ಥಾನ, ಮಸೀದಿ ಬಗ್ಗೆ ಸುಪ್ರೀಂ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Uppinangady: ಸಿಬಿಐ ಅಧಿಕಾರಿ ಹೆಸರಿನಲ್ಲಿ ಬೆದರಿಕೆ ಕರೆ

Madanthyar: ಉರುವಾಲು; ಸಿಡಿಲು ಬಡಿದು ಮನೆಗೆ ಹಾನಿ

Madanthyar: ಉರುವಾಲು; ಸಿಡಿಲು ಬಡಿದು ಮನೆಗೆ ಹಾನಿ

Bantwala1

Bantwala: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಮೂವರಿಗೆ ಗಾಯ

2(1)

Kadaba police Station: ದಾಖಲೆ ಕಾಪಿಡುವುದೇ ಇಲ್ಲಿ ಸಾಹಸದ ಕೆಲಸ

1

Puttur: ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರ ಶೀಘ್ರ ಸಿದ್ಧ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

7

Surathkal: ಈಡೇರದ ಸ್ಕೌಟ್ಸ್‌ – ಗೈಡ್ಸ್‌ ಭವನ ಬೇಡಿಕೆ

6

Karkala: ಕೆಮ್ಮಣ್ಣು ತಿರುವಿನಲ್ಲಿ ಅಪಾಯಕಾರಿ ಮರ !

5

Thekkatte: ಕುಸಿತದ ಭೀತಿಯಲ್ಲಿದೆ ಕನ್ನುಕೆರೆ ತಡೆಗೋಡೆ

Bangkok: ಶಾಲಾ ಬಸ್‌ಗೆ ಬೆಂಕಿ… ವಿದ್ಯಾರ್ಥಿಗಳು ಸೇರಿ 25 ಮಂದಿ ಸಜೀವ ದಹನ

Tragedy: ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಶಾಲಾ ಬಸ್ ಬೆಂಕಿಗಾಹುತಿ… 25 ಮಂದಿ ಸಜೀವ ದಹನ

ಲಡಾಖ್‌ ನಿಂದ ದೆಹಲಿ ಚಲೋ ಪಾದಯಾತ್ರೆ-ವಾಂಗ್ಚುಕ್‌ ವಶಕ್ಕೆ: ವಿಪಕ್ಷಗಳ ಆಕ್ರೋಶ

ಲಡಾಖ್‌ ನಿಂದ ದೆಹಲಿ ಚಲೋ ಪಾದಯಾತ್ರೆ-ವಾಂಗ್ಚುಕ್‌ ವಶಕ್ಕೆ: ವಿಪಕ್ಷಗಳ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.