Bantwal: ಪಾಣೆಮಂಗಳೂರು ಶಾಲಾ ಶಾರದೋತ್ಸವಕ್ಕೆ ಶತಮಾನ

1923ರಲ್ಲಿ ಮಾರಿ ಬೊಳ್ಳದ ಬೆನ್ನಿಗೆ ಉದಯಿಸಿದ ಶಾಲೆ; 1980ರಲ್ಲೇ ಟ್ಯಾಬ್ಲೋ ಸಹಿತ ಶೋಭಾಯಾತ್ರೆ ನಡೆಯುತ್ತಿತ್ತು!

Team Udayavani, Oct 12, 2024, 7:00 AM IST

10(2)

ಶತಮಾನೋತ್ಸವದ ಶಾರದೆ ವಿಗ್ರಹದ ಅಲಂಕಾರ.

ಬಂಟ್ವಾಳ: ಜೀವನದಿ ನೇತ್ರಾವತಿಯಲ್ಲಿ ಕಂಡುಬಂದ 1923ರ ಮಾರಿ ಬೊಳ್ಳದ ಬೆನ್ನಿಗೆ ಉದಯಗೊಂಡ ಶಾಲೆಯೊಂದರ ಜತೆ ಜತೆಗೆ ಆರಂಭಗೊಂಡ ಶ್ರೀ ಶಾರದ ಪೂಜಾ ಮಹೋತ್ಸವವು ಪ್ರಸ್ತುತ ಶತಮಾನೋತ್ಸವ ಸಂಭ್ರಮದಲ್ಲಿದೆ. 1923-24ರ ಅವಧಿಯಲ್ಲಿ ಮಾರಿ ಬೊಳ್ಳ, ಶಾಲೆ ಮತ್ತು ಉತ್ಸವ ಆರಂಭದ ಮೂರು ಘಟನೆಗಳು ಕೂಡ ಒಟ್ಟೊಟ್ಟಿಗೆ ಶತಮಾನವನ್ನು ಕಾಣುತ್ತಿದೆ.

ಪಾಣೆಮಂಗಳೂರು ಶ್ರೀ ವಿಠಲ ಸ್ವಾಮಿ ಅನುದಾನಿತ ಶಾಲೆಯಲ್ಲಿ ನಡೆಯುವ ಈ ಉತ್ಸವವು ಪ್ರಾರಂಭದ 2-3 ವರ್ಷಗಳಲ್ಲಿ ಕೇವಲ ದೇವರ ಪೋಟೆಗೆ ಪೂಜೆಯ ಮೂಲಕ ನಡೆದಿದ್ದು, 4ನೇ ವರ್ಷದಿಂದ ದಿ| ಪಿ.ವಾಸುದೇವ ಭಟ್‌ ಅವರಿಂದ ವಿಗ್ರಹ ರೂಪಕ್ಕೆ ಪರಿವರ್ತನೆಯಾಯಿತು.

ಮಾರಿ ಬೊಳ್ಳಕ್ಕೆ ಕೊಚ್ಚಿ ಹೋದ ಸಂಸ್ಥೆ
ಬಾಸೆಲ್‌ ಮಿಶನ್‌ ಸಂಸ್ಥೆಯವರು ಪಾಣೆಮಂಗಳೂರಿನಲ್ಲಿ ಸ್ಥಳೀಯ ಮಕ್ಕಳ ವಿದ್ಯಾಭ್ಯಾಸಕ್ಕೆ ಚಿಕ್ಕ ಶಾಲೆಯನ್ನು ತೆರೆದಿದ್ದರು. 1923ರಲ್ಲಿ ಬಂದಭೀಕರ ಪ್ರವಾಹದಿಂದ ಪಾಣೆಮಂಗಳೂರೇ ಮುಳುಗಿದ್ದು. ಆಗ ಶಾಲೆಯೂ ನೆಲಸಮವಾಗಿತ್ತು. ಬಳಿಕ ಊರು ಸಹಜ ಸ್ಥಿತಿಗೆ ಬಂದರೂ ಮಕ್ಕಳಿಗೆ ಶಿಕ್ಷಣ ಇಲ್ಲವಾಯಿತು. ಆಗ ಊರಿನ ಮುಖಂಡರೆಲ್ಲ ಸೇರಿ ನಂದಾವರ ವಾಸುದೇವರಾಯರ ಸಹಕಾರದಿಂದ ಊರ ಮಧ್ಯಭಾಗದಲ್ಲಿ ಶ್ರೀ ವೀರ ವಿಠ್ಠಲ ಸ್ವಾಮಿ ಕಿರಿಯ ಪ್ರಾಥಮಿಕ ಶಾಲೆಯನ್ನು 1924ರ ಸೆ. 1ರಂದು ಪ್ರಾರಂಭಿಸಿದ್ದರು. ಪ್ರಾರಂಭದಲ್ಲಿ 55 ವಿದ್ಯಾರ್ಥಿಗಳಿಂದ ಆರಂಭಗೊಂಡ ಶಾಲೆಗೆ ರಾಜಾಶ್ರಯವೂ ದೊರೆತು ಮರ್ದೋಳಿಯ ರಾಜಮನೆತನದ ರಾಮಕೃಷ್ಣ ರಾವ್‌ ಸ್ಥಳದಾನವನ್ನೂ ಮಾಡಿದ್ದರು.

ದಶಕಗಳ ಹಿಂದಿನ ಶಾರದೆಯ ಕಪ್ಪು-ಬಿಳುಪಿನ ಚಿತ್ರ.
ದಶಕಗಳ ಹಿಂದಿನ ಶೋಭಾಯಾತ್ರೆಯ ಟ್ಯಾಬ್ಲೋ.

ಟ್ಯಾಬ್ಲೋ ನೋಡಲು ಭಾರೀ ಜನ
ಶಾಲೆ ಆರಂಭಗೊಂಡ ಮರುವರ್ಷ 1925ರಲ್ಲಿ ಶ್ರೀ ಶಾರದಾ ಪೂಜೆ ಶುರುವಾಗಿದೆ. 1928ರಲ್ಲಿ ವಿಗ್ರಹಕ್ಕೆ ಪೂಜೆ ಆರಂಭಗೊಂಡಿತು. ಭಜನೆ, ನಾಟಕ, ನೃತ್ಯ ಇತ್ಯಾದಿ ಮನೋರಂಜನಾ ಕಾರ್ಯಕ್ರಮಗಳೂ ಇದ್ದವು. ಶಾಲೆಗೆ ಕಳೆದ ವರ್ಷ 100 ತುಂಬಿದ್ದರೆ, ಉತ್ಸವಕ್ಕೆ ಈ ವರ್ಷ ನೂರು ತುಂಬಿದೆ. ಉತ್ಸವದಲ್ಲಿ 1980-85ರ ಕಾಲ ಘಟ್ಟದಲ್ಲಿ ಮೆಲ್ಕಾರಿನ ಉದಯ ಯುವಕ ಮಂಡಲದಿಂದ ಟ್ಯಾಬ್ಲೋಗಳು ನಡೆಯುತ್ತಿದ್ದು, ಅಂದಿನ ಕಾಲದಲ್ಲಿ ಅದನ್ನು ನೋಡುವುದಕ್ಕಾಗಿಯೇ ಸಹಸ್ರಾರು ಮಂದಿ ಸೇರುತ್ತಿದ್ದರು.

1928ರ ಬಳಿಕ ಮಣ್ಣಿನ ಮೂರ್ತಿ
ಶಾಲೆಯ ಶ್ರೀ ಶಾರದಾ ಪೂಜಾ ಮಹೋತ್ಸವದಲ್ಲಿ ಪ್ರಾರಂಭದ ಮೂರು ವರ್ಷ ಫೋಟೊಗೆ ಪೂಜೆ ನಡೆದಿದ್ದು, 1928ರ ಬಳಿಕ ಸಣ್ಣ ಮಣ್ಣಿನ ಮೂರ್ತಿಯ ಮೂಲಕ ಪೂಜೆ ಆರಂಭಗೊಂಡಿತ್ತು. ಬಳಿಕ ಕಳೆದ ಒಂದಷ್ಟು ವರ್ಷಗಳಿಂದ ದೊಡ್ಡ ವಿಗ್ರಹವನ್ನಿಟ್ಟು ಉತ್ಸವ ನಡೆಯುತ್ತಿದೆ.
ವಿನೋದ್‌ ಎನ್‌. ಮುಖ್ಯಶಿಕ್ಷಕರು, ಶ್ರೀ ವಿಠಲ ಸ್ವಾಮಿ ಶಾಲೆ

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

ಹುಲಿಕೆರೆ ಕೆರೆ ಬಳಿಯ ರಸ್ತೆಯಲ್ಲಿ ಬಿರುಕು… ಕುಸಿಯುವ ಹಂತದಲ್ಲಿದೆ ಮಣ್ಣು, ಆತಂಕದಲ್ಲಿ ಜನ

Vijayanagara: ಹುಲಿಕೆರೆ ಕೆರೆ ಬಳಿಯ ರಸ್ತೆಯಲ್ಲಿ ಬಿರುಕು.. ಕುಸಿಯುವ ಭೀತಿ, ಆತಂಕದಲ್ಲಿ ಜನ

9-mysore-film-city-2

Mysore- Film City: ಮೈಸೂರಿಗೆ ಚಿತ್ರನಗರಿ ಕಿರೀಟ

Renukaswamy Case: ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್.. ಬೆಂಗಳೂರು ಶಿಫ್ಟ್ ಆಗ್ತಾರಾ?

Renukaswamy Case: ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್.. ಬೆಂಗಳೂರು ಶಿಫ್ಟ್ ಆಗ್ತಾರಾ?

1-tamilnadu

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹಲವರಿಗೆ ಗಾಯ

7-mysore

Mysore: ರಾಜ ಪ್ರಭುತ್ವದ ನಾಡ ಕುಸ್ತಿ: ರಾಜಾಶ್ರಯ ಪಡೆದು ಉತ್ತುಂಗಕ್ಕೇರಿದ್ದ ನಾಡಿನ ಗಂಡುಕಲೆ

Rohit-SHarma-(2)

Test Series; ನ್ಯೂಜಿ ಲ್ಯಾಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ

1-aaatttt

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹೊತ್ತಿ ಉರಿದ ಬೆಂಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Subramanya: ಮನೆ ಮನೆಗೆ ಕೇರ್ಪಡ ದೇವಳದ ಹುಲಿ

11

Kadaba: ಮನೆಗಳಲ್ಲಿ ಮಕ್ಕಳಿಂದಲೇ ಶಾರದಾ ಪೂಜೆ

sullia

Sullia: ಬಣ್ಣದ ಮಾಲಿಂಗರ ಮಹಿರಾವಣನ ಯಕ್ಷ ಪ್ರತಿಮೆ ಅನಾವರಣ

Puttur: ಕ್ಯಾಂಪ್ಕೋದಲ್ಲೂ ಹೊಸ ಅಡಿಕೆ ಧಾರಣೆ ಏರಿಕೆ

Puttur: ಕ್ಯಾಂಪ್ಕೋದಲ್ಲೂ ಹೊಸ ಅಡಿಕೆ ಧಾರಣೆ ಏರಿಕೆ

Puttur: ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಖಾತೆಗೆ ಸಂಬಳ ಜಮೆ

Puttur: ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಖಾತೆಗೆ ಸಂಬಳ ಜಮೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಹುಲಿಕೆರೆ ಕೆರೆ ಬಳಿಯ ರಸ್ತೆಯಲ್ಲಿ ಬಿರುಕು… ಕುಸಿಯುವ ಹಂತದಲ್ಲಿದೆ ಮಣ್ಣು, ಆತಂಕದಲ್ಲಿ ಜನ

Vijayanagara: ಹುಲಿಕೆರೆ ಕೆರೆ ಬಳಿಯ ರಸ್ತೆಯಲ್ಲಿ ಬಿರುಕು.. ಕುಸಿಯುವ ಭೀತಿ, ಆತಂಕದಲ್ಲಿ ಜನ

9-mysore-film-city-2

Mysore- Film City: ಮೈಸೂರಿಗೆ ಚಿತ್ರನಗರಿ ಕಿರೀಟ

Renukaswamy Case: ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್.. ಬೆಂಗಳೂರು ಶಿಫ್ಟ್ ಆಗ್ತಾರಾ?

Renukaswamy Case: ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್.. ಬೆಂಗಳೂರು ಶಿಫ್ಟ್ ಆಗ್ತಾರಾ?

1-tamilnadu

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹಲವರಿಗೆ ಗಾಯ

7-mysore

Mysore: ರಾಜ ಪ್ರಭುತ್ವದ ನಾಡ ಕುಸ್ತಿ: ರಾಜಾಶ್ರಯ ಪಡೆದು ಉತ್ತುಂಗಕ್ಕೇರಿದ್ದ ನಾಡಿನ ಗಂಡುಕಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.