
ಬಂಟ್ವಾಳ: ರಸ್ತೆಗೆ ಬಿದ್ದ ಮರ; ಆಟೋ- ಮಾರುತಿ 800 ಜಖಂ
ಅವಘಡದಲ್ಲಿ ಏನಾಗಿದೆ ಎಂದು ವಿಚಾರಿಸದೇ ತೆರಳಿದ ಪೊಲೀಸರು; ಸ್ಥಳೀಯರ ಆಕ್ರೋಶ
Team Udayavani, Jul 15, 2022, 12:43 PM IST

ಬಂಟ್ವಾಳ: ಬಿ.ಸಿ.ರೋಡು ಕೈಕುಂಜೆ ರಸ್ತೆಯಲ್ಲಿ ತೋಟಗಾರಿಕಾ ಕಚೇರಿಯ ಬಳಿ ಗಾಳಿಗೆ ಮರವೊಂದು ಬಿದ್ದ ಪರಿಣಾಮ ಆಟೋ ರಿಕ್ಷಾ ಹಾಗೂ ಮಾರುತಿ 800 ಕಾರು ಜಖಂಗೊಂಡ ಘಟನೆ ಶುಕ್ರವಾರ ನಡೆದಿದೆ.
ಘಟನೆಯಿಂದ ಕೈಕುಂಜೆ ರಸ್ತೆಯಲ್ಲಿ ಕೆಲಹೊತ್ತು ಅಸ್ತವ್ಯಸ್ತಗೊಂಡಿತ್ತು. ಬಳಿಕ ಕ್ರೇನ್ ಮೂಲಕ ಮರವನ್ನು ತೆರವು ಕಾರ್ಯಾಚರಣೆ ನಡೆಸಲಾಯಿತು.
ಬಿ.ಸಿ.ರೋಡಿನಲ್ಲಿ ಮಧ್ಯಾಹ್ನ 12 ಸುಮಾರಿಗೆ ಮಳೆಯ ಜತೆ ಗಾಳಿ ಕೂಡ ಆಗಮಿಸಿದ್ದು, ಈ ವೇಳೆ ಮರ ಬಿದ್ದಿದೆ. ದಿನದ ಇಡೀ ಹೊತ್ತು ವಾಹನ ನಿಬಿಡ, ಜನ ನಿಬಿಡ ರಸ್ತೆಯಾಗಿದ್ದು, ಆದರೆ ಘಟನೆಯಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಇದನ್ನೂ ಓದಿ: ವಿವಾಹದ ಭರವಸೆ; 14 ಬಾರಿ ಗರ್ಭಪಾತ, ಆತ್ಮಹತ್ಯೆಗೆ ಶರಣಾದ ಮಹಿಳೆ
ಮರ ಬಿದ್ದ ಸಂದಂರ್ಭ ಅದೇ ರಸ್ತೆಯಲ್ಲಿ ಪೊಲೀಸರು ಸಂಚರಿಸುತ್ತಿದ್ದರೂ, ಕನಿಷ್ಟ ಪಕ್ಷ ಘಟನೆಯಲ್ಲಿ ಏನಾಗಿದೆ ಎಂದು ವಿಚಾರಿಸದೇ ತೆರಳಿರುವುದು ಸ್ಥಳೀಯರ ಕಂಗಣ್ಣಿ ಗುರಿಯಾಗಿದೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.